382
ಶಿವಮೊಗ್ಗ: ನಗರದ ರಾಗಿಗುಡ್ಡ ಶಾಂತಿನಗರ ಚಾನಲ್ ನ ಹರಿವ ನೀರು ಬಂದಾಗಿದೆ ನೀರು ನಿಂತಲ್ಲೇ ನಿಂತಿರುವುದರಿಂದ ಕಾಯಿಲೆಗಳು ಶುರುವಾಗುವ ಸಂಭವ ಅಧಿಕವಾಗಿದೆ.
ನಿಯಮಿತವಾಗಿ ಚಾನಲ್ ಅನ್ನು ಸ್ವಚ್ಛ ಮಾಡಿಸದ ಪರಿಣಾಮ ಅತಿಯಾದ ಮಳೆಗೆ ಹಾಗೂ ಬುದ್ಧಿ ಇಲ್ಲದ ಕೆಲವು ಜನರು ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ ವಾಹನ ಬಂದರೂ ಕೂಡ ಕಸವನ್ನು ಚಾನೆಲ್ ಗೆ ಹಾಕುತ್ತಿರುವ ಪರಿಣಾಮ ಚಾನೆಲ್ ಗೆ ಈ ಪರಿಸ್ಥಿತಿ ಬಂದಿದೆ.

ಈ ಭಾಗದಲ್ಲಿ ವಾಸಿಸುತ್ತಿರುವ ಕೆಲವು ಜನರು ಹಾಗೂ ಸಾಕಷ್ಟು ಜನ ರೈತರು , ಪ್ರಾಣಿಗಳು ಈ ಚಾನಲ್ ನ ನೀರನ್ನು ನಿತ್ಯ ಬಳಸುತ್ತಿದ್ದು ಇದು ಈಗ ಕಲುಷಿತವಾಗಿ ಕಸದಿಂದ ತುಂಬಿಹೋಗಿರುವುದರಿಂದ ನೀರು ಹರಿಯುವುದೇ ಕಷ್ಟಕರವಾಗಿದೆ. ಕಾಯಿಲೆ ಉಂಟಾಗುವ ಸಂಭವ ಅಧಿಕವಾಗಿದೆ.
