Wednesday, April 30, 2025
Google search engine
Homeರಾಜ್ಯTirthahalli public request :ದಕ್ಷ, ಪ್ರಾಮಾಣಿಕ,ಪರಿಸರ ಸ್ನೇಹಿ ಜಿಲ್ಲಾಧಿಕಾರಿಗಳೇ, ಒಮ್ಮೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಂಡೆಗೆ...

Tirthahalli public request :ದಕ್ಷ, ಪ್ರಾಮಾಣಿಕ,ಪರಿಸರ ಸ್ನೇಹಿ ಜಿಲ್ಲಾಧಿಕಾರಿಗಳೇ, ಒಮ್ಮೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಂಡೆಗೆ ಭೇಟಿ ನೀಡಿ..!! ಮತ್ತೊಂದು ಹುಣಸೋಡು ಪ್ರಕರಣ ಆಗುವುದನ್ನು ತಪ್ಪಿಸಿ..!

ಗೌರವಾನ್ವಿತ ಮಾನ್ಯ ಜಿಲ್ಲಾಧಿಕಾರಿಗಳೇ…

ತಾವಿಂದು ತೀರ್ಥಹಳ್ಳಿಗೆ ಭೇಟಿ ನೀಡುತ್ತಿದ್ದೀರಿ .10 ನಿಮಿಷ ಸಮಯ ಮಾಡಿಕೊಂಡು ಕುರುವಳ್ಳಿ ಬಂಡೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ. ಮೇಲಿನ ಕುರುವಳ್ಳಿ ಗ್ರಾಮದ ಸರ್ವೆ ನಂಬರ್ 75 ಮತ್ತು 38 ಹಾಗೂ ಬುಕ್ಕಪುರ ವ್ಯಾಪ್ತಿ ಒಳಪಡುವ 64 ರಲ್ಲಿ ಸ್ಪೋಟಕವನ್ನು ಸಿಡಿಸಲು ನೂರಾರು ಕೂಳಿ ಹೊಂಡಗಳನ್ನು ಹೊಡೆಯುತ್ತಿದ್ದಾರೆ.

ಬೆಳಗ್ಗಿನ ಜಾವ ಏಕಕಾಲದಲ್ಲಿ ಸ್ಪೋಟಕವನ್ನು ಸಿಡಿಸಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆ . ಬಂಡೆ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಸ್ಪೋಟಕ ಸಿಡಿಸಲು ಕೈ ಕುಳಿ ಹೊಂಡ ಹೊಡೆದು ಹೊಂಡಗಳನ್ನು ಮಾಡಿಟ್ಟಿದ್ದಾರೆ .ಅದಕ್ಕೆ ರಾತ್ರಿ ಮತ್ತು ಬೆಳಗಿನ ಜಾವ ಜಿಲೇಟ್ ಮತ್ತು ಇತರ ಸ್ಪೋಟಕ ವಸ್ತು ತುಂಬಿ ಸಿಡಿಸಲಾಗುತ್ತದೆ. ನೂರಾರು ಜನರು ವಾಸ ಮಾಡುವ ಮನೆಗಳು ಇರುವ ಪ್ರದೇಶ ರಾಷ್ಟ್ರೀಯ ಹೆದ್ದಾರಿ ,ಶಾಲೆ ವಿದ್ಯಾರ್ಥಿಗಳ ವಸತಿ ನಿಲಯ ಇರುವಂತಹ ಪ್ರದೇಶದಲ್ಲಿ ಪಟ್ಟಣ ಪಂಚಾಯಿತಿಯ ವಿಶೇಷ ಆಶ್ರಯ ಬಡಾವಣೆ ಇರುವ ಈ ಪ್ರದೇಶದಲ್ಲಿ ಜನರು ಪ್ರತಿನಿತ್ಯ ಬೆದರಿಕೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅನೇಕ ಮನೆಗಳು ಬಿರುಕು ಬಂದಿದೆ ಪ್ರತಿನಿತ್ಯ ಕನಿಷ್ಠ 50 ಲಾರಿಗಳು 20–30 ಟನ್ನು ಕಲ್ಲನ್ನು ಹೇರಿಕೊಂಡು ಆಕ್ರಮ ಸಾಗಾಟ ಮಾಡುತ್ತಾರೆ. ಇದಕ್ಕೆ ನಕಲಿ ಬಿಲ್ಲುಗಳನ್ನು ಉಪಯೋಗಿಸುತ್ತಾರೆ.

ಅಧಿಕಾರಿಗಳು ತಮಗೆ ಕೊಡುವ ವರದಿಗೂ ಇಲ್ಲಿ ನಡೆಯುತ್ತಿರುವ ವ್ಯವಸ್ಥೆಗೂ ಆಜಾಗಜಾಂತರ ವ್ಯತ್ಯಾಸವಿದೆ. ಏನೇ ಇರಲಿ ತೀರ್ಥಹಳ್ಳಿಯಲ್ಲಿ ಸ್ಪೋಟಕ ಸಿಡಿಸುವುದರಿಂದ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆಯ ಹುಣಸೋಡು ಜನರ ಪ್ರಾಣ ಹಾನಿಯಾಗಿ ಪ್ರಕರಣ ನಡೆಯಬಹುದು. ತಾವು ಒಮ್ಮೆ ನೋಡಲೇಬೇಕಾದಂತ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಚಾರ ನೂರಾರು ಸ್ಪೋಟಕಗಳು ಬಾಕ್ಸ್ ಕಟ್ಟಲೇ ಇಲ್ಲಿ ಬರುತ್ತಿವೆ ಎಂದರೆ ಇದನ್ನು ರಕ್ಷಣೆ ಮಾಡುತ್ತಿರುವವರು ಯಾರು. ಸರ್ಕಾರದ ಖಜಾನೆಗೆ ಪ್ರತಿನಿತ್ಯ ಲಕ್ಷ ಲಕ್ಷ ರೂಪಾಯಿಗಳು ನಷ್ಟವಾಗುತ್ತಿದೆ.

ಇಂದು ತಾವು ತೀರ್ಥಹಳ್ಳಿ ಗೆ ಭೇಟಿ ನೀಡುತ್ತಿದ್ದೀರಿ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣದ ಒಳಗಿರುವ ಈ ಸ್ಥಿತಿಯನ್ನು ಒಮ್ಮೆ ಕಣ್ಣಾರೆ ನೋಡಿ ಕಳೆದ ಬಾರಿ ಮಳೆಗಾಲದಲ್ಲಿ ಇಲ್ಲಿ ಗುಡ್ಡ ಭೂಕುಸಿತವಾಗಿತ್ತು ಈ ಬಾರಿ ಮಳೆಗಾಲದಲ್ಲಿ ಖಂಡಿತ ಬಹುದೊಡ್ಡ ಗುಡ್ಡ ಮತ್ತು ಭೂಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಗೆ ಹಾನಿ ಆಗುವಂತಿದೆ ದಕ್ಷರು, ಪ್ರಾಮಾಣಿಕರು, ಪರಿಸರ ಸ್ನೇಹಗಳಾದ ನಿಮ್ಮಲ್ಲಿ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ಹಾಗೂ ಸ್ಥಳೀಯ ನಿವಾಸಿಗಳ ಮನವಿ ದೊಡ್ಡ ಅನಾಹುತ ಒಂದು ಆಗುವ ಮೊದಲು ಒಮ್ಮೆ ಭೇಟಿ ನೀಡಿ ನಿಲ್ಲಿಸಿ …

ರಘುರಾಜ್ ಹೆಚ್.ಕೆ…,9449553305….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...