Saturday, April 26, 2025
Google search engine
Homeಸಾಗರನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...!

ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ…!

*ನಿಲ್ಲದ ಜನಿವಾರ ಕಿಚ್ಚು..ಸಾಗರದಲ್ಲೂ ಜನಿವಾರ ಕಟ್.. ಸಾಗರ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ…!**ಸಾಗರದಲ್ಲೂ ಈ ಪ್ರಕರಣ ನಡೆದಿದೆ ಎಂದು ಬ್ರಾಹ್ಮಣ ಮಹಾಸಭಾ ಆರೋಪ …!**ಸಾಗರ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಅಂಗಿ ಬಿಚ್ಚಿಸಿ ಜನಿವಾರವನ್ನು ಕತ್ತರಿಸಿರುವ ಪ್ರಕರಣ ನಡೆದಿದೆ.**ಇದರಿಂದ ಪಾರ್ಥ ಎಸ್.ಎಂಬ ವಿಧ್ಯಾರ್ಥಿಯು ಸಮಸ್ಯೆಗೆ ಒಳಗಾಗಿದ್ದು ವಿದ್ಯಾರ್ಥಿಯ ತಂದೆ ಸಾಗರ ತಾಲೂಕಿನ ಹಳೇ ಇಕ್ಕೇರಿ ಗ್ರಾಮದ ಕೃಷಿಕ ಎಚ್.ಎಸ್. ಶ್ರೀನಿವಾಸ್ ಸಾಗರ ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.**ಶನಿವಾರ ಮೆರವಣಿಗೆ ಮೂಲಕ ಆಗಮಿಸಿ ಸಾಗರ ಪೇಟೆ ಪೋಲಿಸ್ ಠಾಣೆ ಎದುರು ಸಾಗರ ತಾಲುಕು ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಅಪಮಾನ ಮಾಡಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.**ಈ ಸಂದರ್ಭದಲ್ಲಿ ಸಮಸ್ಯೆಗೆ ಒಳಗಾದ ವಿದ್ಯಾರ್ಥಿಯ ತಂದೆ ಶ್ರೀನಿವಾಸ್ ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದ ಪ್ರತಿಭಟನಾಕಾರರು ತೀವ್ರ ಘಾಸೆಗೆ ಒಳಗಾಗಿ ಸಾಗರ ಪೊಲೀಸ್ ಠಾಣೆಗೆ ಮೆರವಣಿಗೆ ಮೂಲಕ ತೆರಳಿ ಅಧಿಕಾರಿಗಳಿಗೆ,ಮತ್ತು ಸರ್ಕಾರದ ವ್ಯವಸ್ಥೆಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.**ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಎಸ್ ಪಾರ್ಥ ಪರೀಕ್ಷಾ ಕೊಠಡಿಯ ಬಳಿಯಲ್ಲಿಯೇ ತನ್ನ ಜನಿವಾರವನ್ನು ಕತ್ತರಿಸಿದ ವಿವರವನ್ನು ನೀಡುತ್ತಿದ್ದಂತೆ, ಸಂಬಂಧಪಟ್ಟ ಅಧಿಕಾರಿಯ ಮೇಲೆ ಶಿಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು, ಡಿವೈಎಸ್ ಪಿ ಗೋಪಾಲಕೃಷ್ಣ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಸಂಜೆಯ ಒಳಗಾಗಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಯು ಹೆಚ್ ರಾಮಪ್ಪ.ಎಲ್ ಟಿ.ತಿಮ್ಮಪ್ಪ.ಬಿ.ಆರ್.ಜಯಂತ್ ಇನ್ನಿತರರು ಮಾತನಾಡಿದರು.**ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್,ಮ.ಸ ನಂಜುಂಡಸ್ವಾಮಿ,ಎಲ್.ಟಿ.ತಿಮ್ಮಪ್ಪ, ಬಿ.ಆರ್.ಜಯಂತ್, ಯು.ಎಚ್.ರಾಮಪ್ಪ ಕಾರ್ಯದರ್ಶಿ ಸುದರ್ಶನ್, ಪ್ರಸನ್ನ ಕೆರೆಕ್ಕೆ,ವೆಂಕಟೇಶ್ ಕಟ್ಟಿ, ನಗರಸಭಾ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ವ.ಶಂ.ರಾಮಚಂದ್ರ ಭಟ್, ಚೂಡಮಣಿ ರಾಮಚಂದ್ರ ಕೆ.ಸಿ.ದೆವಪ್ಪ, ವಿನಾಯಕ್ ಜೋಯ್ಸ್.ರಾಮಚಂದ್ರ ಖಂಡಿಕಾ.ಸೂರ್ಯನಾರಾಯಣ.ವೈ.ಮೋಹನ್, ಐ.ವಿ.ಹೆಗಡೆ, ಶೇಷಗಿರಿ ಹೆಗಡೆ.ನಾರಾಯಣ ಮೂರ್ತಿ ಚಿನ್ಮಯ್ ಹಾಗೂ ಇತರರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ... Big news: ಹಾಡೋನಹಳ್ಳಿ ಅಕ್ರಮ ಮರಳು ದಂಧೆಯ ಮೇಲೆ ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಭರ್ಜರಿ ದಾಳಿ..! ಸಿಕ್ಕ ವಾಹನಗಳು... ಮಾಜಿ ಭೂಗತ ಪಾತಕಿ ದಿವಂಗತ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಅಟ್ಯಾಕ್..! ಮಾಹಿತಿ ಕೊಟ್ಟವರು ಯಾರು..?! ಇದೆ ಪ್ರಥಮ ಬಾರಿಗೆ KSCA ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು..!