Wednesday, April 30, 2025
Google search engine
Homeರಾಜ್ಯರಕ್ಷಿತ್ ಶೆಟ್ಟಿ ಬಂದಿದ್ರಂತೆ...! ಇಲ್ಲಿದೆ ಫುಲ್ ಡೀಟೈಲ್ಸ್.

ರಕ್ಷಿತ್ ಶೆಟ್ಟಿ ಬಂದಿದ್ರಂತೆ…! ಇಲ್ಲಿದೆ ಫುಲ್ ಡೀಟೈಲ್ಸ್.

ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ನಟ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೆ.1ರಂದು ಬಿಡುಗಡೆಯಾಗಿತ್ತು.

ರಕ್ಷಿತ್ ಶೆಟ್ಟಿಯವರಿಗೆ ಅವರದೇ ಆದ ಫ್ಯಾನ್ಸ್ ಬೇಸ್ ಇದೆ. ಇವರ ಚಿತ್ರ ಬಿಡುಗಡೆಯಾಗುತ್ತೆ ಎಂದರೆ ಸಿನಿ ದುನಿಯಾದಲ್ಲಿ ಒಂದಷ್ಟು ಸದ್ದಾಗುವುದಂತು ನಿಜ.

ಚಿತ್ರ ತೆರೆ ಕಂಡ ನಂತರ ದಿನ ಕಳೆದಂತೆ ಚಿತ್ರ ಮಂದಿರದ ಆಚೆ ಇರುವ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತನ್ನ ಕಡೆಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಸಪ್ತ ಸಾಗರದಾಚೆಗೆ ಸಿಗುತ್ತಿರುವ ಪ್ರೇಕ್ಷಕರ ಬೆಂಬಲಕ್ಕೆ ಫಿದಾ ಆದ ನಟ ರಕ್ಷಿತ್ ಶೆಟ್ಟಿ ಧನ್ಯವಾದ ಹೇಳಲು ರಾಜ್ಯದ ಚಿತ್ರ ಮಂದಿರಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಇಂದು ಶಿವಮೊಗ್ಗದ ವೀರಭದ್ರೇಶ್ವರ ಚಿತ್ರ ಮಂದಿರಕ್ಕೆ ರಕ್ಷಿತ್ ಶೆಟ್ಟಿ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಪಡೆದ ರಕ್ಷಿತ್ ಯುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಚಿತ್ರಮಂದಿರ ಕಡೆಗೆ ಹೆಜ್ಜೆ ಹಾಕಿದರು.

ಅಭಿಮಾನಿಗಳು ಗಂಟೆಗಟ್ಟಲೆ ಕಾದರೂ ರಕ್ಷಿತ್ ಶೆಟ್ಟಿಯವರನ್ನು ಕಾಣುವ ಉತ್ಸಾಹ ಅಭಿಮಾನಿಗಳ ಮುಖದಲ್ಲಿ ಹಾಗೇ ಇತ್ತು.

ಮಧ್ಯಾಹ್ನ ಎರಡರ ಆಸುಪಾಸಿನಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನು ನೋಡಲು ವೀರಭದ್ರೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದರು.

ನಟನ ಕಾರು ಚಿತ್ರಮಂದಿರ ಬಳಿ ಬರುತ್ತಿದ್ದ ಹಾಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಭಿಮಾನಿಗಳು ರಕ್ಷಿತ್ ಶೆಟ್ಟಿಯವರನ್ನು ಹಾರ ಹಾಕಿ ಸ್ವಾಗತಿಸಿ ಚಿತ್ರಮಂದಿರದ ಒಳಗೆ ಬರಮಾಡಿಕೊಂಡರ.

ರಕ್ಷಿತ್ ಜೊತೆ ನಾಯಕಿ ರುಕ್ಮಿಣಿ ವಸಂತ್ ಆಗಮನದಿಂದ ನೆರೆದಿದ್ದ ಅಭಿಮಾನಿಗಳು ಫುಲ್ ಜೋಶ್ ನಿಂದ ಸಿಳ್ಳೆ ಚಪ್ಪಾಳೆ ಹೊಡೆದು ನಟಿಯನ್ನು ಸ್ವಾಗತಿಸಿದರು.

ಚಿತ್ರ ಮಂದಿರದಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ರವರು ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಕೊಟ್ಟಂತಹ ಬೆಂಬಲಕ್ಕೆ ಥ್ಯಾಂಕ್ಸ್ ಹೇಳಿದರು.

ಯುವ ಅಭಿಮಾನಿಯೊಬ್ಬರು ಸಿನಿಮಾ ಪೋಸ್ಟರ್ ನ ಯಥಾವತ್ ಚಿತ್ರ ಬಿಡಿಸಿಕೊಂಡು ಬಂದಿದ್ದರು.

ಅಭಿಮಾನಿಗಳ ಜೊತೆ ಅಭಿಮಾನಿಗಳ ಮುಂದೆ ನಟ ನಟಿಯರಿಬ್ಬರೂ ಸೆಲ್ಫಿ ಕ್ಲಕ್ಕಿಸಿಕೊಂಡು ಸಂಭ್ರಮಿಸಿದರು.

ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ನಾವೂ ಸಹ ಹಾರೈಸುತ್ತೇವೆ.

ವರದಿ – ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...