ಶಿವಮೊಗ್ಗ : ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಮರೂಪ ಸಮಾರಂಭ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ನಂದನ ಎಜುಕೇಶನ್ ಟ್ರಸ್ಟ್ (ರಿ) ಶಿವಮೊಗ್ಗ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ನಂದನ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಕೆ ಈ ಕಾಂತೇಶ್ ರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರಪ್ಪ ಎಸ್ ಗುಂಡಪ್ಪಳ್ಳಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಶಿವಮೊಗ್ಗ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನ ವೈಯಕ್ತಿಕ ಜೀವನದ ಬಗ್ಗೆ ಶುಭ ಹಾರೈಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿವೇಕ್ ವಿ ಪಾಯಸ್ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ದ ಕಲ್ಪನೆ ಉದ್ದೇಶ, ವಿದ್ಯಾರ್ಥಿ ಜೀವನ ಗುರಿ ಉದ್ದೇಶ, ದೈಹಿಕ, ಮಾನಸಿಕ, ಸಾಮಾಜಿಕ, ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪುವ ಕಾರಣಗಳು ಘಟಾನವಳಿಗಳು, ಮಾರಣಾoತಿಕಾ ಖಾಯಿಲೆಗಳು, ದುಶ್ಚಟಕ್ಕೆ ಬಲಿಯಾದಾಗ ಎದುರಾಗುವ ಪರಿಣಾಮಗಳು, ಅಪಾಯಗಳು ಅನಾಹುತಗಳು, ಮನೆಯಲ್ಲಿ ಕುಟುಂಬದಲ್ಲಿ, ಶಾಲೆಯಲ್ಲಿ ಸಮಾಜದಲ್ಲಿ ಆಗುವ ಪರಿಣಾಮಗಳ ಬಗ್ಗೆ ಅಂಕಿ ಅಂಶ ಸಹಿತ ಮಾರ್ಗದರ್ಶನ ನೀಡಿದರು. ಇದಕ್ಕೆ ಪರಿಹಾರ ಕೌಶಲ್ಯ ಗಳ ಬಗ್ಗೆ ಉದಾಹರಣೆ ಸಹಿತ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ 29 ಕಾಲೇಜ್ ನ 535 ವಿದ್ಯಾರ್ಥಿಗಳು ಪ್ರಬಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ದ್ವಿತೀಯ ತೃತೀಯ ಚತುರ್ಥ ಪಂಚಮ ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು.
ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷರು ನಟರಾಜ ಬಾದಾಮಿ, ಜಿಲ್ಲಾ ಸಂಘಟನಾ ಅಧ್ಯಕ್ಷರು ಮೋಹನ್ ಶೆಟ್ಟಿ ಹೊಸನಗರ, ಜಿಲ್ಲಾ ಕಾರ್ಯದರ್ಶಿಗಳು ನಿರ್ದೇಶಕರು ಮುರಳೀಧರ ಶೆಟ್ಟಿ, ಉಪಾಧ್ಯಕ್ಷರು ಶ್ರೀಮತಿ ಮಮತಾ ಶಿವಣ್ಣ ಶಿವಮೊಗ್ಗ, ಸದಸ್ಯರಾದ ಉದಯ ಶೆಟ್ಟಿ ಶಿವಮೊಗ್ಗ, ಪಾಲಾಕ್ಷಪ್ಪ ಭದ್ರಾವತಿ, ಶ್ರೀಮತಿ ಶಶಿಕಲಾ ಮಲ್ಲಪ್ಪ ಹೊಸನಗರ, ಶ್ರೀಮತಿ ಹಿಮಾ ಶ್ವೇತಾ ಭದ್ರಾವತಿ, ಶ್ರೀಮತಿ ರೂಪ ಶೇಷಾಗಿರಿ ಭದ್ರಾವತಿ, ಮಂಜುನಾಥ್ ಶಿವಮೊಗ್ಗ, ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಉಲ್ಲಾಸ್ ಮೇಸ್ತಾ ಸ್ವಾಗತಿಸಿದರು.
ನಂದನ ಪದವಿಪೂರ್ವ ಕಾಲೇಜ್ ನ ಪ್ರಾಂಶುಪಾಲರು ನಾಗೇಶ್ ವಂದಿಸಿದರು ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕಾರ್ಯಕ್ರಮ ನೀರೂಪಿಸಿದರು.