ಶಿವಮೊಗ್ಗ : ಪಶ್ಚಿಮ ಸಂಚಾರ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಕ್ರಿಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಕ್ರಿಯಾ ಆತ್ಮಹತ್ಯೆಗೆ ಕಾರಣವೇನು..?!
ಸುಮಾರು 55 ವರ್ಷ ವಯಸ್ಸಿನ ಆರ್ ಎಂ ಎಲ್ ನಗರ ನಿವಾಸಿ ಜಕ್ರಿಯಾ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಹೊಂದಿದ್ದು ಸ್ವಂತ ಮನೆ ಇದೆ ಮನೆ ಕಡೆ ಸಮಸ್ಯೆ ಇಲ್ಲ ಡ್ಯೂಟಿಯಲ್ಲೂ ಕೂಡ ಜಕ್ರಿಯಾ ಒಳ್ಳೆ ಕೆಲಸಗಾರ ಹಾಗಾದರೆ ಆತ್ಮಹತ್ಯೆ ಯಂತಹ ಕಠೋರ ನಿರ್ಧಾರ ತೆಗೆದುಕೊಂಡಿದ್ದು ಏಕೆ..? ಜಕ್ರಿಯಾ ಡೆತ್ ನೋಟ್ ಪ್ರಕಾರ ತನ್ನ ಸಹಸಿಬ್ಬಂದಿ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ ಪತ್ರಿಕೆಗಿರುವ ಮಾಹಿತಿಗಳ ಪ್ರಕಾರ ಜಕ್ರಿಯಾ ಮನೆಯಲ್ಲಿಯೇ ಎರಡು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರು ಎನ್ನಲಾಗುತ್ತಿದ್ದು ಹಾಗೆ ಮೂರು ತಿಂಗಳ ಹಿಂದೆ ಬಿದ್ದು ಬೆನ್ನು ನೋವು ಮಾಡಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಒಂದು ತಿಂಗಳಿಂದ ರಜೆಯಲ್ಲಿದ್ದರೂ ನಿನ್ನೆಯಷ್ಟೇ ರಜೆ ಮುಗಿಸಿಕೊಂಡು ಬಂದು ಡ್ಯೂಟಿ ಪ್ರಾರಂಭಿಸಿದ ಜಕ್ರಿಯಾ ರಾತ್ರಿ ಬಸ್ ಸ್ಟ್ಯಾಂಡ್ ಭಾಗದಲ್ಲಿ ಆಟೋಗಳನ್ನು ಚೆಕ್ ಮಾಡಿ ರಿಪೋರ್ಟ್ ಸಲ್ಲಿಸಿದ್ದಾರೆ.
ಕಳೆದ ರಾತ್ರಿ ಒಂದುವರೆ ವರೆಗೂ ಕಾರ್ಯನಿರ್ವಹಿಸಿದ್ದಾರೆ . ನಂತರ ಈ ಕಠೋರ ನಿರ್ಧಾರ ತೆಗೆದುಕೊಂಡಿದ್ದಾರೆ ಕೇವಲ ಸಹಸಿಬ್ಬಂದಿ ಕುಹಕ ಮಾತುಗಳಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯ ಸಾಮಾನ್ಯವಾಗಿ ವೃತ್ತಿಯಲ್ಲಿ ಕಾರ್ಯನಿರ್ವಹಿಸುವಾಗ ಮಾತುಗಳು ಬರುವುದು ಸಹಜ ಅದು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುವುದು ಇನ್ನೊಬ್ಬ ಬದುಕಿದ್ದು ಸತ್ತಂತೆಯೇ ಆದರೆ ಜಕ್ರಿಯಾ ವಿಷಯದಲ್ಲಿ ಅಸಲಿ ಕಾರಣವೇ ಬೇರೆ ಇಲ್ಲಿ ಮಾನಸಿಕ ಖಿನ್ನತೆ ಜಕ್ರಿಯಾ ಆತ್ಮಹತ್ಯೆಗೆ ಕಾರಣವಾಗಿರಬಹುದು ಜಕ್ರಿಯಾ ಕುಟುಂಬವನ್ನು ಸರಿಯಾಗಿ ವಿಚಾರಿಸಿದರೆ ನಿಜವಾದ ಕಾರಣ ಹೂರಬರಬಹುದು ಅದು ಬಿಟ್ಟು ಒಬ್ಬರ ಸಾವಿಗೆ ಇನ್ನೊಬ್ಬರು ಬಲಿಯಾಗುವುದು ಸರಿಯಲ್ಲ ಜಕ್ರಿಯಾ ಸಾವು ಪೊಲೀಸ್ ಇಲಾಖೆಯಲ್ಲಿ ಸಮಗ್ರ ತನಿಖೆ ಆಗಬೇಕು ನಿಜವಾದ ಸತ್ಯ ಹೊರಬರಬೇಕು.