Home ಶಿವಮೊಗ್ಗNEWS WARRIORS EXCLUSIVE: ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿ ಕಮಲಮ್ಮ ಕೊಲೆಗೆ ಬಿಗ್ ಟ್ವಿಸ್ಟ್..! ಕೊಲೆಗಾರ ಯಾರು ಕೊಲೆ ಮಾಡಿದ್ದು ಏಕೆ ..?!

NEWS WARRIORS EXCLUSIVE: ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿ ಕಮಲಮ್ಮ ಕೊಲೆಗೆ ಬಿಗ್ ಟ್ವಿಸ್ಟ್..! ಕೊಲೆಗಾರ ಯಾರು ಕೊಲೆ ಮಾಡಿದ್ದು ಏಕೆ ..?!

by EDITOR NEWS WARRIORS

ಶಿವಮೊಗ್ಗ : ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಒಳಪಡುವ ವಿಜಯನಗರದ ಎರಡನೇ ತಿರುವಿನಲ್ಲಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಸುಮಾರು 54 ವರ್ಷದ ಕಮಲಮ್ಮ ಎನ್ನುವ ಮಹಿಳೆಯ ಕೊಲೆಯಾಗಿದ್ದು. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ :

ಎಕ್ಸಿಕ್ಯೂಟಿವ್ ಇಂಜಿನಿಯರ್ ಮಲ್ಲಿಕಾರ್ಜುನ್ ಅವರು ಶಿವಮೊಗ್ಗ ವಿಜಯನಗರದ 2ನೇ ತಿರುವಿನಲ್ಲಿ ಕಮಲಮ್ಮ ಜೊತೆ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗಳು ಇಂಜಿನಿಯರಿಂಗ್ ಮಾಡಿದ್ದಾರೆ. ಮಗ ಎಂಬಿಬಿಎಸ್ ಮುಗಿಸಿ ಎಂಡಿ ಸೀಟಿಗಾಗಿ ಕಾಯುತ್ತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮಗನ ನೇಮಕಾತಿ ಆಗೋದರಲಿತ್ತು . ಅದಕ್ಕೋಸ್ಕರ ಮಲ್ಲಿಕಾರ್ಜುನ್ ಅವರು ಒಂದಷ್ಟು ಹಣವನ್ನು ತಂದು ಮನೆಯಲ್ಲಿ ಇಟ್ಟಿದರು ಇದನ್ನು ಗಮನಿಸಿದ್ದ ಮಲ್ಲಿಕಾರ್ಜುನ್ ಅವರ ಡ್ರೈವರ್ ಮಲ್ಲಿಕಾರ್ಜುನ್ ಅವರ ಮನೆಗೆ ಒಂದಷ್ಟು ಜನರ ಜೊತೆಗೆ ಬಂದು ಹಣ ಕೇಳಿದ್ದನು ಆಗ ಮಲ್ಲಿಕಾರ್ಜುನ ಅವರು ಇಷ್ಟು ಹೊತ್ತಿನಲ್ಲಿ ಏಕೆ ಬಂದಿರಿ ಎಂದು ಬೈದು ಕಳಿಸಿದ್ದರು. ನಂತರ ಮಲ್ಲಿಕಾರ್ಜುನ್ ಅವರು ಸ್ನೇಹಿತರೊಂದಿಗೆ ಗೋವಾ ಪ್ರವಾಸ ಹೋದರು ಇತ್ತ ಮಲ್ಲಿಕಾರ್ಜುನ್ ಮನೆಯಲ್ಲಿ ಇಲ್ಲದ್ದನ್ನು ನೋಡಿಕೊಂಡು ತನ್ನ ಗುಂಪಿನೊಂದಿಗೆ ಮನೆಗೆ ಬಂದು ಪತ್ನಿ ಕಮಲಮ್ಮನ ಹತ್ತಿರ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾನೆ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಡ್ರೈವರ್ ಮತ್ತು ಆತನ ಗ್ಯಾಂಗ್ ಕಮಲಮ್ಮನ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಸಾಯಿಸಿರುವ ಶಂಕೆ ಇದೆ..?! ನಂತರ ಹಣ ತೆಗೆದುಕೊಂಡು ಊರು ಬಿಟ್ಟಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?!

ಇತ್ತ ಪ್ರವಾಸದಲ್ಲಿದ್ದ ಮಲ್ಲಿಕಾರ್ಜುನ್ ಪತ್ನಿ ಕಮಲಮ್ಮನಿಗೆ ಕರೆ ಮಾಡಿದ್ದಾರೆ.ಆದರೆ ಕಮಲಮ್ಮ ಕರೆ ಸ್ವೀಕರಿಸಲಿಲ್ಲ ಗಾಬರಿಗೊಂಡ ಪತಿ ಮಲ್ಲಿಕಾರ್ಜುನ್ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ ನಂತರ ಸ್ನೇಹಿತರು ಮನೆಯ ಬಳಿ ಹೋಗಿದ್ದಾಗ ಕತ್ತಲಾದರೂ ಮನೆಯ ಲೈಟ್ ಆನ್ ಆಗಿರಲಿಲ್ಲ ಮನೆಯ ಬಾಗಿಲು ತೆರೆದಿತ್ತು ಮೊಬೈಲ್ ಚಾರ್ಜ್ ಬಳಸಿಕೊಂಡು ಒಳಹೋದ ಸ್ನೇಹಿತರಿಗೆ ಕಾದಿತ್ತು ಶಾಕ್ ಸ್ನೇಹಿತರ ಪತ್ನಿ ಕಮಲಮ್ಮ ಶವವಾಗಿ ಬಿದ್ದಿದ್ದರು. ತಕ್ಷಣ ಸ್ನೇಹಿತರು ಮಲ್ಲಿಕಾರ್ಜುನ್ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ .

ಅಲರ್ಟ್ ಆದ ಶಿವಮೊಗ್ಗ ಪೊಲೀಸರು :

ಇತ್ತ ಅಲರ್ಟ್ ಆದ ಶಿವಮೊಗ್ಗ ಪೊಲೀಸರು ಕೊಲೆಯ ಬಗ್ಗೆ ಮಾಹಿತಿ ಕಲೆಹಾಕಲು ಶುರು ಮಾಡಿದ್ದಾರೆ.

ಪತ್ರಿಕೆ ನಡೆಸಿದ ತನಿಖಾ ವರದಿಯ ಪ್ರಕಾರ ಮಲ್ಲಿಕಾರ್ಜುನ್ ಅವರ ಡ್ರೈವರ್ ಕೊಲೆಗಾರ ಆತನ ಜೊತೆ ಮೂರರಿಂದ ನಾಲ್ಕು ಜನ ಗ್ಯಾಂಗ್ ಇರಬಹುದು ಹಾಗೂ ಮಲ್ಲಿಕಾರ್ಜುನ್ ಅವರು ಮಗನ ಎಂಡಿ ಸೀಟಿಗಾಗಿ ತಂದಿಟ್ಟ ಹಣವನ್ನು ಪಡೆಯಲು ಡ್ರೈವರ್ ಮಾಡಿದ ಕೊಲೆ ಎನ್ನುವುದು ಪತ್ರಿಕೆಗೆ ಇರುವ ಮಾಹಿತಿ.

ಒಟ್ಟಾರೆ ಶಿವಮೊಗ್ಗ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದು. ಸದ್ಯದಲ್ಲಿಯೇ ಕೊಲೆಗಾರರನ್ನು ಬಂಧಿಸುವ ಸಾಧ್ಯತೆ ಇದೆ…

ರಘುರಾಜ್ ಹೆಚ್.ಕೆ…9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!