Home ಬೆಂಗಳೂರುGovernment employee’s union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ ಗೃಹ ತೆರುವು ಸೂಚನೆ ಬೆನ್ನಲ್ಲೇ ದಂಡ ವಸೂಲಿ ಮಾಡುತ್ತಾ ಲೋಕೋಪಯೋಗಿ ಇಲಾಖೆ..?!

Government employee’s union state president : ಸಿ ಎಸ್ ಷಡಾಕ್ಷರಿ ಗೆ ಸಂಕಷ್ಟ ವಸತಿ ಗೃಹ ತೆರುವು ಸೂಚನೆ ಬೆನ್ನಲ್ಲೇ ದಂಡ ವಸೂಲಿ ಮಾಡುತ್ತಾ ಲೋಕೋಪಯೋಗಿ ಇಲಾಖೆ..?!

by EDITOR NEWS WARRIORS

ಶಿವಮೊಗ್ಗದಲ್ಲಿ ಲೆಕ್ಕಾಧಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿತ್ತು ಆನಂತರ ಆ ವರ್ಗಾವಣೆಯನ್ನು ಪ್ರಶ್ನಿಸಿ ಷಡಾಕ್ಷರಿಯವರು ನ್ಯಾಯಾಲಯದ ಮರೆಹೋಗಿದ್ದರು ನಂತರ ಅವರ ವರ್ಗಾವಣೆಯನ್ನು ಬೆಂಗಳೂರಿಗೆ ಮಾಡಲಾಯಿತು .

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ವಸತಿ ಗೃಹ ಖಾಲಿ ಮಾಡದ ಷಡಾಕ್ಷರಿ :

ವರ್ಗಾವಣೆಯಾಗಿ ಸುಮಾರು 12 ತಿಂಗಳು ಕಳೆದರೂ ರಾಜ್ಯಾಧ್ಯಕ್ಷ ಷಡಾಕ್ಷರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯೊಳಗೆ ಬರುವ ವಸತಿಗೃಹವನ್ನು ತೆರುವುಗೋಳಿಸಿರಲಿಲ್ಲ ಇದನ್ನು ಪ್ರಶ್ನಿಸಿ ಸಾಕಷ್ಟು ಜನ ಇಲಾಖೆಯ ಗಮನಕ್ಕೆ ದೂರು ನೀಡಿದ್ದರು ಅದರಲ್ಲೂ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷರಾದ ರುದ್ರಪ್ಪನವರು ಒತ್ತಡ ತಂದಿದ್ದರು ಇದರ ಬೆನ್ನಲ್ಲೇ ದಿನಾಂಕ 18-10.2024 ರಂದು ಲೋಕೋಪಯೋಗಿ ಇಲಾಖೆಯ ಕಿರಿಯ ಸಹಾಯಕರು ಷಡಾಕ್ಷರಿ ಅವರಿಗೆ ವಸತಿಗೃಹವನ್ನು ತೆರವುಗೊಳಿಸಿ ತಮ್ಮ ಇಲಾಖೆಯ ಸುರ್ಪದಿಗೆ ವಹಿಸುವಂತೆ ಸೂಚನೆ ನೀಡಿದ್ದರು.

ಅವಧಿ ಮುಗಿದಿದ್ದರೂ ವಸತಿಗೃಹದಲ್ಲಿ ಇದ್ದರಿಂದ ಷಡಾಕ್ಷರಿ ಗೆ ದಂಡ ಬೀಳುತ್ತಾ..?!

ವರ್ಗಾವಣೆಯಾಗಿ 12 ತಿಂಗಳು ಕಳೆದರೂ ಷಡಾಕ್ಷರಿ ಅವರು ತಮಗೆ ನೀಡಿದ್ದ ವಸತಿಗೃಹವನ್ನು ತೆರವುಗೊಳಿಸಿದೆ ಇದ್ದರಿಂದ ಅವರ ಮೇಲೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆ ಇದೆ ..?! ಏಕೆಂದರೆ ಸಾಮಾನ್ಯವಾಗಿ ಸರ್ಕಾರದ ವಸತಿ ಗೃಹವನ್ನು ವರ್ಗಾವಣೆಯಾದ ನಂತರ ಖಾಲಿ ಮಾಡಬೇಕು ಒಂದು ವೇಳೆ ಹಾಗೆ ಮುಂದುವರೆದರೆ ಮೊದಲ 3 ತಿಂಗಳಿಗೆ 4 ಪಟ್ಟು ದಂಡ ಹಾಗೂ ಬಾಡಿಗೆ ಅದಕ್ಕೂ ಹೆಚ್ಚಿನ ಸಮಯಕ್ಕೆ 8 ಪಟ್ಟು ದಂಡ ವಸೂಲಿ ಮಾಡಬಹುದಾಗಿದ್ದು ದಂಡ ವಸೂಲಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಜನ ಒತ್ತಡ ತರುತ್ತಿದ್ದಾರೆ.

ವಸತಿ ಗೃಹ ತೆರವುಗೊಳಿಸಿ ದಂಡ ವಿಧಿಸುತ್ತಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..?

ವಸತಿ ಗೃಹ ತೆರುವು ಗೊಳಿಸಲು ಸೂಚನೆ ನೀಡಿದ್ದು ವಸತಿಗೃಹ ತೆರವು ಬೆನ್ನಲ್ಲೇ ಸಾಕಷ್ಟು ಸಮಯ ಹಿಡಿದಿದ್ದರಿಂದ ಅದಕ್ಕೆ ದಂಡ ವಿಧಿಸುತ್ತಾರಾ..? ಬೇರೆಯವರಿಗೆ ಅನ್ವಯಿಸಿದ ನಿಯಮಗಳು ಷಡಾಕ್ಷರಿಯವರಿಗೂ ಅನ್ವಯಿಸುತ್ತವೆ.. ಅದನ್ನು ಅಧಿಕಾರಿಗಳು ಪಾಲಿಸುತ್ತಾರಾ..?! ಅಥವಾ ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯ ಮಾತಿಗೆ ಬೆಂಡಾಗಿ ಸುಮ್ಮನಿರುತ್ತಾರ..?! ಕಾದುನೋಡಬೇಕು…..

ರಘುರಾಜ್ ಹೆಚ್.ಕೆ..9449553305…..

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!