ಸಾಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜರುಗುವ ಸಾರ್ವಜನಿಕ ಕಾರ್ಯಕ್ರಮಗಳಾದ ಜಾತ್ರೆ, ನಾಟಕ, ಕ್ರೀಡೆ, ಸಮಾರಂಭಗಳಲ್ಲಿ ರಾಜಾರೋಷವಾಗಿ ” ಗುಂಡಾಲಿ ” ಜೂಜು ನೆಡೆಯುತ್ತಿದ್ದೂ, ಕರ್ನಾಟಕ ರಾಜ್ಯ ಸರ್ಕಾರ ” ಲಾಟರಿ ” ನಿಷೇಧ ಜಾರಿಯಲ್ಲಿದ್ದರೂ ” ಲಾಟರಿ ” ನಿಷೇಧ ಸುಗ್ರೀವಾಜ್ಞೆ ಗಾಳಿಗೆ ತೂರಿ ಸಾಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ನೆಡೆಯುತ್ತಿರುವ, ನೆಡೆಸುತ್ತಿರುವ ” ಗುಂಡಾಲಿ ” ಜೂಜಾಟಕ್ಕೆ ಬ್ರೇಕ್ ಹಾಕಬೇಕಾಗಿದ್ದ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಗಪ್ ಚುಪ್ ನಡೆ ಹಿಂದೇ ಮಾಮೂಲಿ ಪಡೆಯುತ್ತಿರುವ ಗಂಭೀರ ಆರೋಪಗಳು ಕೇಳಿ ಬರುತ್ತಿರುವುದು ಬೆತ್ತಲೆ ಜಗತ್ತು ಪೊಲೀಸ್ ಇಲಾಖೆಯ ಬೇಜವಾಬ್ದಾರಿತನಕ್ಕೆ ಛೀಮಾರಿ ಹಾಕುತ್ತಿರುವುದು ಕಟುಸತ್ಯವಾಗಿರುವುದು ವಾಸ್ತವ ಸಂಗತಿಯಾಗಿದೆ.
ಧಕ್ಷ ಪ್ರಾಮಾಣಿಕ ಜನಸ್ನೇಹಿ ಕ್ರಿಮಿನಲ್ ಗಳ ಸಿಂಹಸ್ವಪ್ನ, ಹತ್ತು ಹಲವು ಪೊಲೀಸ್ ಇಲಾಖೆಯ ವ್ಯವಸ್ಥೆ ಸುಧಾರಣೆಯ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಸಾಗರ ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆಯ ಸಮುಖದಲ್ಲಿಯೇ ಅವ್ಯಾಹತವಾಗಿ ಸಾಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೇ ನಿರ್ಭಯವಾಗಿ ನೆಡೆಯುತ್ತಿರುವ ” ಗುಂಡಾಲಿ ” ಜೂಜು ಬ್ರೇಕ್ ಹಾಕುವಂತೆ ಸಾಗರದ ಪ್ರಜ್ಞಾವಂತ ನಾಗರಿಕರು ಮನವಿ ಮಾಡಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ…