6
ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ (ಬಿಬಿಎಂಪಿ 7 ) ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ,ಎ,ಎಸ್ (ಕಿರಿಯ ಶ್ರೇಣಿ ) ಅಧಿಕಾರಿಯಾದ ಡಾಕ್ಟರ್ ಮೈತ್ರಿ ಅವರನ್ನು ರಾಜ್ಯ ಸರ್ಕಾರ ಕಳೆದ ವಾರ ಶಿವಮೊಗ್ಗದ ಉಪ ವಿಭಾಗ ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಹೆಚ್ ಸತ್ಯನಾರಾಯಣ ಅವರಿಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಸ್ಥಳ ತೋರಿಸಿರಲಿಲ್ಲ.
ಕೆಇಟಿ ಮರೆಹೋದ ಜಿಹೆಚ್ ಸತ್ಯನಾರಾಯಣ..?!
ಆದರೆ ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪವಿಭಾಗಅಧಿಕಾರಿ ಜಿಹೆಚ್ ಸತ್ಯನಾರಾಯಣ ಈ ಆದೇಶವನ್ನು ಪ್ರಶ್ನಿಸಿ ಕೆಇಟಿ ಮರೆ ಹೋಗಿದ್ದರು ಎನ್ನಲಾಗುತ್ತಿದ್ದು ಅವರ ಆಕ್ಷೇಪಣೆ ಪ್ರಸ್ತುತ ಅವರು ಜಿಲ್ಲಾ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದು ಖಜಾಂಚಿಯಾಗಿ ಆಯ್ಕೆಯಾಗಿದ್ದರು ಇದನ್ನೇ ಆಧಾರವಾಗಿಟ್ಟುಕೊಂಡು ಕೆಇಟಿ ಮರೆ ಹೋದ ಸತ್ಯನಾರಾಯಣ ನೌಕರರ ಸಂಘದ ಚುನಾವಣೆಯಲ್ಲಿ ಗೆದ್ದು ಪದಾಧಿಕಾರಿಗಳಾದವರನ್ನು ಅವರ ಅವಧಿ ಮುಗಿಯುವವರೆಗೂ ನಿರ್ದಿಷ್ಟ ಕಾರಣಗಳಿಲ್ಲದೆ ವರ್ಗಾವಣೆ ಮಾಡುವಂತಿಲ್ಲ ಒಂದು ವೇಳೆ ನಿರ್ದಿಷ್ಟ ಕಾರಣ ಇದ್ದು ವರ್ಗಾವಣೆ ಮಾಡಿದರೆ ವರ್ಗಾವಣೆಯ ಸ್ಥಳ ತೋರಿಸಬೇಕು ಆದರೆ ಸತ್ಯನಾರಾಯಣ ಪ್ರಕರಣದಲ್ಲಿ ಸರ್ಕಾರ ವರ್ಗಾವಣೆ ಮಾಡಿದೆ ವಿನಃ ಅವರಿಗೆ ಬೇರೆ ಸ್ಥಳವನ್ನು ತೋರಿಸಿಲ್ಲ ಇದೇ ಮಾನದಂಡ ಇಟ್ಟುಕೊಂಡು ಸತ್ಯನಾರಾಯಣ್ ಪ್ರಶ್ನಿಸಿದ್ದಾರೆ.
ವರ್ಗಾವಣೆಗೆ ತಡೆ..?!
ಸತ್ಯ ನಾರಾಯಣ್ ವರ್ಗಾವಣೆಗೆ ತಡೆ ಬಿದ್ದಿದ್ದು ರಿಲೀವ್ ಆಗದಂತೆ ಆದೇಶ ಬಂದಿದೆ ಎನ್ನಲಾಗುತ್ತಿದೆ.
ಡಾಕ್ಟರ್ ಮೈತ್ರಿಗೆ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ ಸತ್ಯನಾರಯಣ..!
ಶಿವಮೊಗ್ಗಕ್ಕೆ ಉಪವಿಭಾಗ ಅಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ಡಾಕ್ಟರ್ ಮೈತ್ರಿಗೆ ಸತ್ಯನಾರಾಯಣ ಚಾರ್ಜ್ ನೀಡಿರಲಿಲ್ಲ ಡಾಕ್ಟರ್ ಮೈತ್ರಿಯವರು ಸರ್ಕಾರದ ಆದೇಶ ಪಾಲಿಸಬೇಕಾಗಿತ್ತು ಹಾಗಾಗಿ ಅವರು joining report ಮಾಡಿಕೊಂಡಿದ್ದೇನೆ ಆದರೆ ಕಚೇರಿಯ ದಾಖಲೆಗಳು, ಸ್ವತ್ತುಗಳು, ಕಡತಗಳು ಸಂಪೂರ್ಣವಾಗಿ ನನಗೆ ಹಸ್ತಾಂತರವಾಗಿಲ್ಲ ಎಂದು ವರದಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಹಳೆಯ ಅಧಿಕಾರಿ ಚಾರ್ಜ್ ನೀಡಿಲ್ಲ ಎನ್ನುವ ಕಾರಣಕ್ಕೆ ತಮ್ಮ ಕೆಲಸವನ್ನು ನಿಲ್ಲಿಸುವಂತಿಲ್ಲ ಇಲ್ಲಿ ಡಾ. ಮೈತ್ರಿ ಅವರು ತಮ್ಮ ಕೆಲಸ ಮಾಡಿದ್ದಾರೆ.
ವರ್ಗಾವಣೆ ರಕ್ಷಣೆ ಕಾಯ್ದೆ ಸತ್ಯನಾರಾಯಣ್ ಗೆ ವರವಾಯಿತು..!
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಿಗೆ ವರ್ಗಾವಣೆ ರಕ್ಷಣೆ transfer protection ಇದೆ 2025/ 26ರ ವರ್ಗಾವಣೆ ಮಾರ್ಗಸೂಚಿಯ guideline 8(5 )ಪ್ರಕಾರ ಸಂಘದ ಪದಾಧಿಕಾರಿಯನ್ನು ಅವರ ಅವಧಿ ಮುಗಿಯುವವರೆಗೂ ವರ್ಗಾವಣೆ ಮಾಡಬಾರದೆಂದು ಹೇಳಲಾಗಿದೆ. ಇತ್ತೀಚಿನ ಹೈಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಿಗೂ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಅವಧಿ ಮುಗಿಯುವವರೆಗೂ ವರ್ಗಾವಣೆ ಮಾಡಬಾರದು ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಸರ್ಕಾರ ವರ್ಗಾವಣೆ ಮಾಡಬಹುದು 2025ರ ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟ ಮತ್ತು ನಿರ್ದಿಷ್ಟವಾಗಿ ಸಾರ್ವಜನಿಕ ದೂರು ಇದ್ದರೆ ಸಂಘದ ಪದಾಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೇಳಲಾಗಿದೆ.
ಆದರೆ ಕೇವಲ ಅಸ್ಪಷ್ಟ ಆಧಾರವಿಲ್ಲದ ದೂರಿನ ಮೇಲೆ ವರ್ಗಾವಣೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.

