Home ಶಿವಮೊಗ್ಗಅಮೃತ ಮಹೋತ್ಸವ ವರ್ಷ.

ಅಮೃತ ಮಹೋತ್ಸವ ವರ್ಷ.

by Reporter Smg
0 comments

ಶಿವಮೊಗ್ಗ : ನಗರದ ಎಸ್.ಪಿ.ಎಮ್‌ ರಸ್ತೆಯ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಅಮೃತ ಮಹೋತ್ವಸವ ವರ್ಷ ಈ ಬಾರಿಯ ಗಣೇಶ ಚತುರ್ಥಿಗೆ ಆಚರಿಸಲಾಗುತ್ತಿದೆ, ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದ ಸಂಘದ ಕಾರ್ಯದರ್ಶಿ ಹೆಚ್.ಆರ್‌ ಸುಬ್ರಹ್ಮಣ್ಯ ಶಾಸ್ತ್ರಿ ಕಳೆದ 76 ವರ್ಷದಿಂದ ಶ್ರೀ ವಿದ್ಯಾಗಣಪತಿ ಸೇವಾ ಸಂಘದಿಂದ ನಗರದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ನಿರಂತರವಾಗಿ ಭಾರತೀಯ ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ,  ಗಣೇಶ ಚತುರ್ಥಿಯ ಅಂಗವಾಗಿ ಸೆ.19ರಿಂದ26ರ ವರೆಗೆ ಸಂಘದ ವತಿಯಿಂದ ಎಪ್ಪತ್ತಾರನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ ರಸ್ತೆಯಲ್ಲಿರುವ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಸಭಾ ಭವನದಲ್ಲಿ ಪ್ರತಿ ದಿನ ಸಂಜೆ 5.30 ಘಂಟೆಗೆ ಸರಿಯಾಗಿ ಸಂಗೀತ ಸೇವಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಸಂಗೀತ ಸೇವಾ ಕಾರ್ಯಕ್ರಮದ ವಿವರಗಳು.

ಸೆ.19 ವೇಣು ಮಾಧವರವರಿಂದ ಸ್ಯಾಕ್ಸೋಫೋನ್‌ ಕಾರ್ಯಕ್ರಮ.

ಸೆ.20 ವಿದುಷಿ ದಾತ್ರಿ ಕುಮಾರ್‌ ಹಾಸನ, ಸಂಗೀತ ಕಾರ್ಯಕ್ರಮ.

ಸೆ.21 ವಿದ್ವಾನ್‌ ಕಾರ್ತಿಕ್‌ ಹೊಸಹಳ್ಳಿ, ಸಂಗೀತ ಕಾರ್ಯಕ್ರಮ.

ಸೆ.22 ಚೆನ್ನೈನ ವಿದುಷಿ ವಸುಧಾ ರವಿಯವರ ಕರ್ನಾಟಕ ಶಾಸ್ರ್ತೀಯ ಸಂಗೀತ ಕಾರ್ಯಕ್ರಮ.

ಸೆ.23 ವಿದ್ವಾನ್‌ ವೈ.ಕಿ.ಶ್ರೀ ಲತಾರವರ ವೀಣಾವಾದನ ಕಾರ್ಯಕ್ರಮ.

ಸೆ.24 ಆಕಾಶವಾಣಿ ಹಾಗು ದೂರ ದರ್ಶನ ಕಲಾವಿದರಾದ ವಿದ್ವಾನ್‌ ವಿವೇಕ್‌ ಸದಾಶಿವಂ ರವರ ಸಂಗೀತ ಕಾರ್ಯಕ್ರಮ.

ಸೆ.25 ವಿದುಷಿ ಶ್ರೀಮತಿ ಮೇಧಾ ಮಂಜುನಾಥ್‌ ರವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ.

ಸಾರ್ವಜನಿಕರು ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...