Wednesday, April 30, 2025
Google search engine
Homeಶಿವಮೊಗ್ಗNews warriors Big impact : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಯಿತು ವೀರ ಶಿವಮೂರ್ತಿ...

News warriors Big impact : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಯಿತು ವೀರ ಶಿವಮೂರ್ತಿ ವೃತ್ತ..!

ಶಿವಮೊಗ್ಗ: ನಗರದ ನೆಹರು ಸ್ಟೇಡಿಯಂ ವೃತಕ್ಕೆ ವೀರ ಶಿವಮೂರ್ತಿ ವೃತ್ತ ಎಂದು ಹೆಸರಿಡಲಾಗಿತ್ತು . ಹಿಂದೆ ಅದನ್ನು ಕಲ್ಲಿನ ಬೋರ್ಡ್ ನಲ್ಲಿ ಬರೆದು ಹಾಕಲಾಗಿತ್ತು ಆದರೆ ಸ್ಮಾರ್ಟ್ ಸಿಟಿಯವರು ಹಾಗೂ ಮಹಾನಗರ ಪಾಲಿಕೆ ಅವರು ರಸ್ತೆಯ ಕೆಲಸ ಮಾಡುವಾಗ ಆ ವೃತ್ತದ ಫಲಕವನ್ನು ತೆಗೆದುಹಾಕಿದ್ದರು. ನಂತರ ಆಟೋ ಚಾಲಕರ ಸಂಘದವರು ಒಂದು ತಗಡು ಬೋರ್ಡನ್ನು ಹಾಕಿದ್ದರು. ಇದರ ವಿರುದ್ಧ ಹಲವು ಹಿಂದೂಪರ ಸಂಘಟನೆಗಳು ಹೋರಾಟಗಾರರು ಕೋಟೆ ರಾಜು, ರಂಜಿತ್ ರಂತಹ ಸಾಮಾಜಿಕ ಕಳಕಳಿ ಉಳ್ಳವರು ಸ್ಮಾರ್ಟ್ ಸಿಟಿ ಯೋಜನೆಯ ನೀತಿಯನ್ನು ವಿರೋಧಿಸಿದ್ದರು. ಇದರ ಬಗ್ಗೆ ವಿಸ್ತಾರವಾಗಿ ನಮ್ಮ ಪತ್ರಿಕೆ ಸುದ್ದಿ ಪ್ರಕಟಿಸಿದ್ದು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪನವರು, ಹಾಲಿ ಶಿವಮೊಗ್ಗ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ಚೆನ್ನಿ ಅವರು, ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿಯ ಎಂ ಡಿ ಆಗಿರುವ ಮಾಯಣ್ಣ ಗೌಡ ಅವರ ಗಮನಕ್ಕೆ ತರಲಾಗಿತ್ತು . ಹಾಗೂ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ಒಳಗೆ ಸ್ಮಾರ್ಟ್ ಸಿಟಿಯ ಯೋಜನೆ ಅಡಿಯಲ್ಲಿ ಈ ವೃತ್ತವನ್ನು ನಿರ್ಮಿಸಬೇಕು ಎಂದು ಹಿಂದುಪರ ಸಂಘಟನೆಗಳ ಆಗ್ರಹವಾಗಿತ್ತು.

ಕೂಡಲೇ ಸುದ್ದಿಗೆ ಹಾಗೂ ಹಿಂದೂಪರ ಸಂಘಟನೆಗಳ ಆಗ್ರಹಕ್ಕೆ ಸ್ಪಂದಿಸಿರುವ ಸ್ಮಾರ್ಟ್ ಸಿಟಿ ಎಂ ಡಿ ಹಾಗೂ ಶಾಸಕ ಚನ್ನಬಸಪ್ಪನವರು ವೀರ ಶಿವಮೂರ್ತಿ ವೃತ್ತ ನಿರ್ಮಿಸಿದ್ದಾರೆ. ಅವರಿಗೆ ಹಿಂದೂಪರ ಸಂಘಟನೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಯಾರು ಈ ಶಿವಮೂರ್ತಿ ..?

ಹಿಂದೆ 1945 ರಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರುತ್ತಿತ್ತು.

ಆದರೆ ಗಣಪತಿ ಮೂರ್ತಿ ಮೆರವಣಿಗೆ ವಿಸರ್ಜನೆ ಸಂದರ್ಭದಲ್ಲಿ ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತು ಆದರೆ 1947ರಲ್ಲಿ ಧರ್ಮಸಿಂಗ್ ಎಂಬುವರು ಮಸೀದಿ ಮುಂದೆ ತುತ್ತೂರಿ ಉದುತ್ತಾ ಮುಂದೆ ಸಾಗಿದರು. ಆಗ ಗಲಾಟೆ ಸಂಭವಿಸಿತು ಈ ಗಲಾಟೆಯಲ್ಲಿ ಶಿವಮೂರ್ತಿ ಎಂಬ 24 ವಯಸ್ಸಿನ ಯುವಕನ ಹತ್ಯೆಯಾಯಿತು .

ಮುಂದೆ ಈತನ ನೆನಪಿಗಾಗಿ ನೆಹರು ಸ್ಟೇಡಿಯಂ ವೃತ್ತಕ್ಕೆ ವೀರ ಶಿವಮೂರ್ತಿ ವೃತ್ತ ಎಂದು ಹೆಸರಿಡಲಾಯಿತು.ಆದರೆ ಮಹಾನಗರ ಪಾಲಿಕೆಯವರ ಸ್ಮಾರ್ಟ್ ಸಿಟಿ ಅವರ ಅಚತುರ್ಯದಿಂದ ಈ ವೃತ್ತಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ ಆದರೆ ಈಗ ಇಂದು ಶಿವಮೊಗ್ಗ ನಗರದಾದ್ಯಂತ ಭವ್ಯ ಮೆರವಣಿಗೆಯ ಮೂಲಕ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ದಿನವಾದ ಇಂದು ಆ ನಾಮಫಲಕ ಲೋಕಾರ್ಪಣೆ ಗೊಳ್ಳುತ್ತಿರುವುದು ವಿಶೇಷವಾಗಿದೆ.

ರಘುರಾಜ್ ಹೆಚ್.ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...