Wednesday, April 30, 2025
Google search engine
Homeಶಿವಮೊಗ್ಗThirthalli Breaking : ಗಣಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಅಕ್ರಮವಾಗಿ ಕಲ್ಲು ತುಂಬುತ್ತಿದ್ದ ನಾಲ್ಕು ಟಿಪ್ಪರ್...

Thirthalli Breaking : ಗಣಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಅಕ್ರಮವಾಗಿ ಕಲ್ಲು ತುಂಬುತ್ತಿದ್ದ ನಾಲ್ಕು ಟಿಪ್ಪರ್ ಗಳು ವಶ..!

ತೀರ್ಥಹಳ್ಳಿ : ನಗರದ ಮೇಲಿನ ಕುರುವಳ್ಳಿಯ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸರ್ವೇ ನಂಬರ್ 38 ಹಾಗೂ 64 ರಲ್ಲಿ  ಹತ್ತರಿಂದ ಹದಿನೈದು ಎಕರೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಲಕ್ಷಾಂತರ ಮೌಲ್ಯದ ಕಲ್ಲು ಲೂಟಿಯಾಗಿದೆ. ಅದೇ ಸರ್ವೇ ನಂಬರ್ 75ರಲ್ಲಿ ಗಣಿ ಗುತ್ತಿಗೆ ಮುಗಿದು ಎರಡುವರೆ ವರ್ಷ ಕಳೆದಿದೆ ಆದರೂ ಆಕ್ರಮವಾಗಿ ಕಲ್ಲನ್ನು ತೆಗೆಯುವವರ ಸಂಖ್ಯೆ ಕಡಿಮೆಯಾಗಿಲ್ಲ ದಿನನಿತ್ಯ 6  ಎಕ್ರೆ ಜಾಗದಲ್ಲಿ  ಲಕ್ಷಾಂತರ ಮೌಲ್ಯದ ಕಲ್ಲನ್ನು ಅಕ್ರಮವಾಗಿ ತೆಗೆಯುತ್ತಿದ್ದಾರೆ.

ಇದೇ ವಿಚಾರವಾಗಿ ಪತ್ರಿಕೆ ನಿರಂತರವಾಗಿ ವರದಿ ಮಾಡಿತ್ತು ವರದಿಯ ಫಲಶ್ರುತಿಯಾಗಿ ಸರ್ವೆ ನಂಬರ್ 38ನ್ನು ಸರ್ಕಾರ ಗುತ್ತಿಗೆ ನೀಡಿದೆ. ಆದರೆ ಆ ಗುತ್ತಿಗೆ ನೀಡಿದವರಿಗೂ ಸರಿಯಾಗಿ ನಡೆಸಲು ಬಿಡದೆ ಈ ಅಕ್ರಮಕಾರರು ದಿನನಿತ್ಯ ಲೂಟಿ ಹೊಡೆಯುತ್ತಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರಿಕೆ ನಿರಂತರವಾಗಿ ಇದರ ಬಗ್ಗೆ ಮಾಹಿತಿ ನೀಡುತ್ತಿದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಹೀಗೆ ಒಂದು ವಾರದ ಹಿಂದೆ ಕೂಡ ದಾಳಿ ನಡೆಸಿ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದರು.  ಸಿಬ್ಬಂದಿಗಳ ತಂಡ ಇಂದು ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ತೀರ್ಥಹಳ್ಳಿಯ ನಗರ ಠಾಣೆಗೆ ಒಪ್ಪಿಸಿದ್ದಾರೆ ತೀರ್ಥಹಳ್ಳಿ ನಗರ ಠಾಣೆಯಲ್ಲಿ ಈ ಲಾರಿಗಳನ್ನು ವಶಪಡಿಸಿಕೊಂಡು ಕೆಸ್ ದಾಖಲಿಸುತ್ತಾರ ಅಥವಾ ಯಾರ ಮುಲಾಜಿಗಾದರೂ ಒಳಗಾಗಿ ಲಾರಿಗಳನ್ನು ಬಿಟ್ಟು ಕಳಿಸುತ್ತಾರಾ ಕಾದುನೋಡಬೇಕು.

ಯಾರದು ಈ ಲಾರಿಗಳು..?

ರೇಣುಕಾಂಬ ಎನ್ನುವ ಹೆಸರಿನ ಆರು ಲಾರಿಗಳು ವೈ ರೇಣುಕಾ, ವೈ ಗಣಪತಿ ,ವಿನಯ ವೈ ,ನಾಗೇಂದ್ರ ,ವಸಂತ ವೈ ಸಹೋದರಿಗೆ  ಸೇರಿದೆ. ಇವರಿಗೆ ಗಣಿ ಗುತ್ತಿಗೆ ಇಲ್ಲ ಆದರೂ ಕೂಡ ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ ಇವರ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಕೇಸ್ ಅನ್ನು ದಾಖಲಿಸಿ, ಲಾರಿಗಳನ್ನು ಸೀಜ್ ಮಾಡಿ ಅಕ್ರಮಕ್ಕೆ ತಡೆ ಹಾಕಬೇಕು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೀರ್ಥಹಳ್ಳಿಯ ಪೊಲೀಸ್ ಇಲಾಖೆ ಈ ಅಕ್ರಮಕಾರರಿಗೆ ಬಿಸಿ ಮುಟ್ಟಿಸಬೇಕು‌.

ಪದೇ ಪದೇ ಹಣ ಕೊಡುತ್ತೇವೆ ಹಣ ಕೊಡುತ್ತೇವೆ ಎಂದು ಹೇಳುತ್ತಾರಲ್ಲ ಅದು ಯಾರಿಗೆ ಎಂದು ಗೊತ್ತಾಗಬೇಕು.

ಒಂದು ವೇಳೆ ಯಾರಿದಾದರೂ ಮುಲಾಜಿಗೆ ಒಳಗಾಗಿ ಹಿಡಿದಿರುವ ಗಾಡಿಗಳನ್ನು ಗಣಿ ಇಲಾಖೆ ಬಿಟ್ಟರೆ ಗಣಿ ಇಲಾಖೆ ಮೇಲೆಯೇ ಈ ಹಣದ ಆರೋಪ ಬರುತ್ತದೆ ನೆನಪಿರಲಿ.

ರಘುರಾಜ್ ಹೆಚ್‌.ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...