Home ಭದ್ರಾವತಿಭದ್ರಾವತಿ ಡಬಲ್ ಮರ್ಡರ್ ಆರೋಪಿಗಳನ್ನು ನಿನ್ನೆ ಬಂಧಿಸಿದ ಪೊಲೀಸರು ಇಂದು ಅವರುಗಳ ಫೋಟೋ ಬಿಡುಗಡೆಗೊಳಿಸಿದ್ದಾರೆ..!..!

ಭದ್ರಾವತಿ ಡಬಲ್ ಮರ್ಡರ್ ಆರೋಪಿಗಳನ್ನು ನಿನ್ನೆ ಬಂಧಿಸಿದ ಪೊಲೀಸರು ಇಂದು ಅವರುಗಳ ಫೋಟೋ ಬಿಡುಗಡೆಗೊಳಿಸಿದ್ದಾರೆ..!..!

by EDITOR NEWS WARRIORS
0 comments
ಭದ್ರಾವತಿ : ಓಲ್ಡ್ ಟೌನ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಡಬಲ್ ಮರ್ಡರ್ ಗೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇಂದು ಅವರುಗಳ ಫೋಟೋ ಅನ್ನು ಬಿಡುಗಡೆಗೊಳಿಸಿದ್ದಾರೆ.
ಆರೋಪಿಗಳ ವಿವರ ಈ ಕೆಳಗಿನಂತಿದೆ :
1) ಮಂಜುನಾಥ್ ಸೈಲೆಂಟ್ ಶಶಿ ತಂದೆ ಕುಮಾರ 29 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 4 ನೇ ತಿರುವು ಭದ್ರಾವತಿ ಟೌನ್.
2) ಭರತ್ @ಸುಂಡು ತಂದೆ ಕುಮಾರ 32 ವರ್ಷ ನಗರ ಸಭೆಯಲ್ಲಿ ಟಾಟಾ ಎ ಸಿ ಗಾಡಿ ಚಾಲಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್.
3) ಸಂಜಯ್ @ ಕುಳ್ಳಿ ತಂದೆ ವಡಿವೇಲು 24 ವರ್ಷ ನಗರ ಸಭೆಯಲ್ಲಿ ಕೂಲಿ ಮತ್ತು ಡ್ರೈವರ್ ಕೆಲಸ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್.
4) ಸುರೇಶ್ @ ಸೂರಿ  ತಂದೆ ಕಲಾ 27 ವರ್ಷ ಕೂಲಿ ಕೆಲಸ ವಾಸ ಮನೆ ನಂ 1 ಬಿ ಬ್ಲಾಕ್ ಜೈ ಭೀಮ್ ನಗರ 2 ನೇ ತಿರುವು ಭದ್ರಾವತಿ ಟೌನ್.
5) ವೆಂಕಟೇಶ್ @ಕೆಂಚ ತಂದೆ ಕುಮಾರ್ 28 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್ . 
ಪ್ರೀತಿ ವಿಚಾರಕ್ಕೆ ನಡೆದ ಘಟನೆ ಎರಡು ಕೊಲೆಯಲ್ಲಿ ಅಂತ್ಯವಾಗಿದೆ ನಂದೀಶ್ ಹಾಗೂ ಸ್ಮೃತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಇವರಿಗೆ ಕಿರಣ್ ಮತ್ತು ಸುರೇಶ್ ಬೆಂಗಾವಲಾಗಿ ನಿಂತಿದ್ದರು ಕಳೆದ ಎರಡು ದಿನದ ಹಿಂದೆ ಈ ನವಜೋಡಿಗಳು ಊರನ್ನು ಬಿಟ್ಟು ‌ ದೂರದ ಹೈದರಾಬಾದ್ ‌ ಹೋಗಿ ‌ ಅಲ್ಲಿ ವಿವಾಹವಾಗಿ ‌ ಇದ್ದರು.
ಈ ಜೋಡಿ ನಾಪತ್ತೆಯಾದ ಬೆನ್ನಲ್ಲೇ ಭದ್ರಾವತಿಯಲ್ಲಿ ಎರಡು ಕುಟುಂಬಗಳ ಮಧ್ಯೆ  ದೊಡ್ಡಮಟ್ಟದ ಗಲಾಟೆಗೆ ವೇದಿಕೆ ಸಿದ್ಧವಾಗಿತ್ತು. ಇದನ್ನು ಅರಿತ ಓಡಿ ಹೋದ ಜೀವಗಳು ಊರಿಗೆ ವಾಪಸ್ ಬಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು ಠಾಣೆಯಲ್ಲಿ ಎಲ್ಲವೂ ಸರಿಹೋಯಿತು ಎಂದುಕೊಂಡು ಹೊರ ಬಂದಾಗ ಯುವತಿ ಯುವಕನ ಜೊತೆ ಹೋಗುತ್ತೇನೆ ಎಂದಳು ಆಗ ಕೆರಳಿದ ಯುವತಿಯ ಸಹೋದರ ಗ್ಯಾಂಗ್ ಕಟ್ಟಿಕೊಂಡು  ಈಕೆಯ ಪ್ರಿಯತಮನ ಸ್ನೇಹಿತರಾದ ‌ ಕಿರಣ್ ಹಾಗೂ ಸುರೇಶ್ ಮೇಲೆ ಇವರಿಂದಲೇ ಇವರು ಓಡಿ ಹೋಗಲು ಕಾರಣ ಇವರನ್ನು ಬದುಕಲು ಬಿಡಬಾರದು ಎಂದು  ಚಾಕುವಿನಿಂದ ಇರಿದಿದ್ದಾರೆ. ಈ ಘಟನೆಯಲ್ಲಿ ‌ ಕಿರಣ್ ಸ್ಥಳದಲ್ಲೇ  ಸಾವನ್ನಪ್ಪಿದ್ದರೆ ಸುರೇಶ್ ಆಸ್ಪತ್ರೆಗೆ ದಾಖಲಾಗಿದ್ದ ದುರಂತವೆಂದರೆ ಈ ಜಗಳವನ್ನು ಬಿಡಿಸಲು ಬಂದ 65 ವರ್ಷದ ವೃದ್ಧ ಮಂಜುನಾಥ್ ಇವರ ಏಟಿಗೆ ಮೃತಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ‌ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರೀತಿಸಿದ್ದೆ ತಪ್ಪಾ ‌ ಎಂದಾದರೆ ‌ ಅದಕ್ಕೆ ಬೆಂಬಲ ನೀಡಿದ್ದು ದೊಡ್ಡ ತಪ್ಪು ‌ ಎನ್ನುವಂತಾಗಿದೆ ಅದೆಲ್ಲಕ್ಕಿಂತ ಹೆಚ್ಚಾಗಿ ಗಲಾಟೆ ನೋಡಿಕೊಂಡು ಸುಮ್ಮನಿರಲಾರದೆ ಬಿಡಿಸಲು ಹೋಗಿದ್ದೆ ದೊಡ್ಡ ತಪ್ಪು ಎನ್ನುವಂತಾಗಿದೆ.
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...