370
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಯಥೇಚ್ಛವಾಗಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಪತ್ರಿಕೆಗೆ ಬಂದ ಮಾಹಿತಿಯ ಆಧಾರದ ಮೇಲೆ ಪತ್ರಿಕಾ ತಂಡ ತಾಲೂಕಿನ ಮೇಗರವಳ್ಳಿ ಸಮೀಪ ಇರುವ ಬಗ್ಗೋಡಿಗೆ ಮರಳು ಕೋರೆಗೆ ದಿಡೀರ್ ಭೇಟಿ ನೀಡಿದಾಗ ಅಲ್ಲಿ ಸಾವಿರಾರು ಲೋಡ್ ಮರಳನ್ನು ತೆಗೆದು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡುಬಂದಿದ್ದು ಕೆಲವು ಕಡೆ ಮರಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದಾರೆ ಅದರಲ್ಲೂ ಪ್ರಮುಖವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಾಗಗಳೇ ಮರಳು ದಾಸ್ತಾನಿಗೆ ಮೀಸಲಿಟ್ಟಂತೆ ಆಗಿದೆ ಇದನ್ನು ಕಣ್ಣಾರೆ ಕಂಡ ಪತ್ರಿಕಾ ತಂಡ ತಡ ಮಾಡದೆ ಸಂಬಂಧಪಟ್ಟ ಇಲಾಖೆಗಳಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮರಳನ್ನು ಸೀಜ್ ಮಾಡಿ ಸುಮೋಟೋ ಪ್ರಕರಣವನ್ನು ದಾಖಲು ಮಾಡಿಕೊಂಡು ಎಫ್ ಐ ಆರ್ ದಾಖಲಿಸಿದ್ದಾರೆ . ಹಾಗೆ ಅರಣ್ಯ ಇಲಾಖೆಯವರು ಕೂಡ ಎಫ್ ಐ ಆರ್ ದಾಖಲಿಸಿದ್ದು ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಎಲ್ಲಾ ಅಧಿಕಾರಿಗಳ ಜೊತೆಗೂಡಿ ಆ ಸ್ಥಳಕ್ಕೆ ಮತ್ತೆ ಹೋಗದಂತೆ ಬೃಹದ್ದಾಕಾರದ ಟ್ರಂಚ್ ಹೊಡಿಸಿದ್ದಾರೆ .

ಮರಳು ಕೋರೆಗಳು ಹರಾಜು ಆಗದ ಕಾರಣ ಈ ರೀತಿ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು ಕುಶಾವತಿ ಹಳ್ಳ,ಶಿರುಪತಿ, ನರಟೂರು, ದಬ್ಬಣಗದ್ದೆ, ಆರಗ, ಹುಣಸವಳ್ಳಿ, ಪೀರನಗುಡ್ಡೆ, ಹಿರೇಸರ, ಆಂದಿನಿ, ಬಗ್ಗುಡುಗೆ ಸಮೀಪ ಅಕ್ಕಪಕ್ಕದಲ್ಲಿ ,ಅರೇಹಳ್ಳಿ, ಹೆದ್ದೂರು ಭಾಗದಲ್ಲಿ ನಿರಂತರವಾಗಿ ಪಿಕಪ್ ಗಳಲ್ಲಿ ಹಗಲು ರಾತ್ರಿ ಎನ್ನದೆ ವಾಹನಗಳು ಹಳ್ಳ ಮತ್ತು ನದಿ ಗಳಿಂದ ಜೆಸಿಬಿ ಯಂತ್ರಗಳಿಂದ ಮರಳನ್ನು ತೆಗೆಯುತ್ತಿದ್ದು. ಪ್ರತಿ ದಿನ ಲಕ್ಷಾಂತರ ವಹಿವಾಟು ನಡೆಯುತ್ತದೆ ಸರ್ಕಾರದ ಬಕ್ಕಸಕ್ಕೆ ಒಂದು ನಯಾ ಪೈಸೆ ಹಣ ಬರುತ್ತಿಲ್ಲ .

ಗಣಿ ಮತ್ತು ಭೂವಿಜ್ಞಾನ ಇಲಾಖೆ ಪಾತ್ರವೇನು …?!
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇರುವುದು ಶಿವಮೊಗ್ಗದಲ್ಲಿ ಆದರೆ ಮೊದಲೇ ಅಲ್ಲಿ ಸಿಬ್ಬಂದಿಗಳ ಕೊರತೆ ಸಾಕಷ್ಟು ಸಮಸ್ಯೆಗಳು ಇದರ ನಡುವೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬರುವಷ್ಟರಲ್ಲಿ ಅಲರ್ಟ್ ಆಗುತ್ತಾರೆ ಹಾಗಾಗಿ ಮಾತೃ ಇಲಾಖೆ ಗಣಿ ಇಲಾಖೆಗೆ ನೇರವಾಗಿ ವಾಹನಗಳು ಸಿಗುವುದು ಕಷ್ಟ.
ಅರಣ್ಯ, ಕಂದಾಯ, ಪೋಲಿಸ್, ಗ್ರಾಮ ಪಂಚಾಯಿತಿ ಪಾತ್ರವೇನು..?!
ಅರಣ್ಯ ಇಲಾಖೆ , ಕಂದಾಯ ಇಲಾಖೆ ವ್ಯಾಪ್ತಿ ಒಳಗೆ ಅಕ್ರಮ ಮರಳನ್ನು ದಾಸ್ತಾನು ಮಾಡಿಟ್ಟು ಅಲ್ಲಿಂದ ಮರಳನ್ನು ಸಾಗಾಟ ಮಾಡುತ್ತಾರೆ ಇದನ್ನು ನೋಡಿಕೊಳ್ಳಬೇಕಾದ ವಾಚರ್ ಗಳು, ಗಾರ್ಡ್ ಗಳು, ಈ ಭಾಗಗಳ ಗಸ್ತಿನ ಜವಾಬ್ದಾರಿ ಇರುವ ಅರಣ್ಯ ಇಲಾಖೆ ಸಿಬ್ಬಂದಿ ಗಳು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಬೇಕು ಆದರೆ ಸ್ಥಳೀಯರ ಒತ್ತಡಕ್ಕೆ ಮಣಿದು ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಿಲ್ಲ ಮೇಲಾಧಿಕಾರಿಗಳು ಕೂಡ ಇದರ ಬಗ್ಗೆ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದೆ ಅವರ ಕೆಲಸಕ್ಕೆ ತೊಂದರೆ ಆಗಬಹುದು ಎಚ್ಚರವಿರಲಿ ಮಲೆನಾಡಿನ ಭಾಗದಲ್ಲಿ ಇರುವ ಆಗುಂಬೆ ಹಾಗೂ ಮಾಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಆದರೂ ಕೂಡ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಉಳಿದ ಇಲಾಖೆಗಳ ಸಹಕಾರ ತೆಗೆದುಕೊಂಡು ಮರಳು ಮಾಫಿಯಾವನ್ನು ನಿಯಂತ್ರಣಕ್ಕೆ ತರಬೇಕು.
ತೀರ್ಥಳ್ಳಿಯ ಕಲ್ಲು ಗಣಿಗಾರಿಕೆ ಬಗ್ಗೆ ಬರಿಯೋದು ಸಾಕಷ್ಟಿದೆ ಈಗಾಗಲೇ ಸಾಕಷ್ಟು ಬಾರಿ ಬರೆದು ಆಗಿದೆ ಇಲಾಖೆ ಕ್ರಮ ಕೂಡ ತೆಗೆದುಕೊಂಡಿದೆ ಆದರೂ ಕೂಡ ಮಾಜಿ ಸಚಿವರೊಬ್ಬರು ಇವರ ಪರವಾಗಿ ಧರಣಿ ಕೂತುಕೊಳ್ಳುವುದು ಎಷ್ಟು ಸರಿ ಮಾಜಿ ಸಚಿವರು ತುಂಬಾ ಸಬ್ಯರು ದುಷ್ಟರಲ್ಲ, ಭ್ರಷ್ಟರಲ್ಲ, ಆದರೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಅಕ್ರಮಕ್ಕೆ ಅವರು ಸಾಥ್ ನೀಡುತ್ತಿದ್ದಾರೆ. ಆರು ಎಕ್ರೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲುವುದು ಯಾವಾಗ ಮಾಜಿ ಸಚಿವರೇ ಇದರಲ್ಲಿ ಭಾಗಿಯಾದ ಬಾಗಿ ಆಗಿರುವ ಪ್ರತಿಯೊಬ್ಬರ ಮಾಹಿತಿಯನ್ನು ಮುಂದಿನ ಸುದ್ದಿಯಲ್ಲಿ ಬಿತ್ತರಿಸಲಾಗುವುದು….