Home ದಾವಣಗೆರೆPolice news : ಶಿವಮೊಗ್ಗದ ಅಳಿಯ ಈಗ ದಾವಣಗೆರೆಯ ಎಸ್ಪಿ..!

Police news : ಶಿವಮೊಗ್ಗದ ಅಳಿಯ ಈಗ ದಾವಣಗೆರೆಯ ಎಸ್ಪಿ..!

by EDITOR NEWS WARRIORS
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್ ಪಿ ಉಮಾ ಪ್ರಶಾಂತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಇತ್ತೀಚಿನ ದಿನಗಳಂತೂ ಗಾಂಜಾ, ಡ್ರಗ್ಸ್ ,ನಂತಹ ಪ್ರಕರಣಗಳು ಹೆಚ್ಚಾಗಿದ್ದು ಆಡಳಿತ ಪಕ್ಷ ಕಾಂಗ್ರೆಸ್ ನಾಯಕರುಗಳ ಗಲಾಟೆ ಅದರಲ್ಲೂ ಸಚಿವ ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳೇ ಗಾಂಜಾ ಡ್ರಗ್ಸ್ ನಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಾಗೂ ಗಲಾಟೆಗಳಲ್ಲಿ ನೇರವಾಗಿ ಭಾಗಿಯಾಗಿದ್ದು ಇಡೀ ಜಿಲ್ಲೆಯ ವಾತಾವರಣವನ್ನೇ ಹದಗೆಡಿಸಿದ್ದು  ಈ ಸಮಯದಲ್ಲಿ ಉಮಾ ಪ್ರಶಾಂತ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿ ಯಾರ ಮುಲಾಜಿಗೂ ಅಂಜದೆ ಎಲ್ಲರನ್ನು ಎಡೆಮುರಿಗೆ ಕಟ್ಟಿದರು ಇನ್ನೊಂದಷ್ಟು ಕ್ರಿಮಿನಲ್ ಗಳು ಬಾಕಿ ಇರುವಾಗ ಉಮಾ ಪ್ರಶಾಂತ್ ಅವರ ವರ್ಗಾವಣೆ ಎಲ್ಲರಲ್ಲೂ  ಅಚ್ಚರಿತರಿಸಿದೆ.

ದಾವಣಗೆರೆ ಜಿಲ್ಲೆಯ ಇತಿಹಾಸವೇ ಹಾಗೆ..!
ದಾವಣಗೆರೆ ಜಿಲ್ಲೆಯ ಇತಿಹಾಸವೇ ಹಾಗಿದೆ ಇಲ್ಲಿ ಎಲ್ಲದಕ್ಕೂ ಹೊಂದಿಕೊಂಡು ನಡೆಯಬೇಕು ಇಲ್ಲವಾದಲ್ಲಿ ಅವರಿಗೆ ವರ್ಗಾವಣೆ ಕಟ್ಟಿಟ್ಟ ಬುತ್ತಿ ಹಲವು  ಅಧಿಕಾರಿಗಳು ಇಲ್ಲಿ ತಮ್ಮ ವರ್ಗಾವಣೆ ಅವಧಿ ಮುಗ್ದಿದ್ದರು ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಕೆಲವರು ಬಂದ ಕೆಲವೇ ಸಮಯದಲ್ಲಿ ವರ್ಗಾವಣೆಯಾಗಿ ಹೋಗುತ್ತಿದ್ದಾರೆ ಅದರಲ್ಲಿ ಉಮಾ ಪ್ರಶಾಂತ್ ಕೂಡ ಒಬ್ಬರು ಎನ್ನಬಹುದು.
ಪೊಲೀಸ್ ಸಿಬ್ಬಂದಿಗಳ ಮೇಲೆ ಕ್ರಮ ತೆಗೆದುಕೊಂಡ ಕೀರ್ತಿ ಉಮಾ ಪ್ರಶಾಂತ್‎ ಅವರದ್ದು..!
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತರಾಗಿದ್ದ ಶಾಮನೂರು ವೇದಮೂರ್ತಿ ಸೇರಿದಂತೆ ಕಾಂಗ್ರೆಸ್ ನಾಯಕರಗಳೇ ಡ್ರಗ್ಸ್ , ಗಾಂಜಾದಂತಹ ಪ್ರಕರಣಗಳಲ್ಲಿ   ಸಿಕ್ಕಿಬಿದ್ದಿದ್ದರು. ಆದರೆ ಇವರನ್ನೆಲ್ಲ ಯಾರ ಮುಲಾಜಿಲ್ಲದೆ  ಜೈಲಿಗಟ್ಟಲಾಗಿತ್ತು‌ ಜೊತೆಗೆ ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಗಾಯತ್ರಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಯೂ‌ ಇಡೀ ರಾಜ್ಯದ ಗಮನ ಸೆಳೆದಿತ್ತು. ಮಾತ್ರವಲ್ಲ, ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಕೈ ಮಾಡಿದ್ದ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ರ ಮೂವರು ಪುತ್ರರೂ ಸೇರಿದಂತೆ ಆರು ಜನರನ್ನು ಪೊಲೀಸ್ ಇಲಾಖೆ ಬಂಧಿಸಿದ್ದು . ಹಲವು ಪೊಲೀಸ್ ಸಿಬ್ಬಂದಿಗಳು ಕೆಲವು ಕ್ರಿಮಿನಲ್ ಆಕ್ಟಿವಿಟೀಸ್ ಗಳಲ್ಲಿ ಭಾಗಿಯಾದಾಗ ಮುಲಾಜಿಲ್ಲದೆ ಅವರ ಮೇಲು ಕ್ರಮ ಕೈಗೊಂಡಿದ್ದರು ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದ ಹಲವರ ವಿರುದ್ಧ ನೇರವಾಗಿ ವಾರ್ನಿಂಗ್ ನೀಡಿದ್ದಲ್ಲದೆ ಕ್ರಮ ಕೂಡ ಕೈಗೊಂಡಿದ್ದರು. ಇದೀಗ ವರ್ಗಾವಣೆಯಾಗಿರುವ ಉಮಾ ಪ್ರಶಾಂತ್ ಅವರಿಗೆ ಸರ್ಕಾರ ನಿಗದಿತ ಜಾಗವನ್ನು ತೋರಿಸಿಲ್ಲ.
ಎಸ್ ಪಿ ಉಮಾ ಪ್ರಶಾಂತ್ ಜಾಗಕ್ಕೆ ಶೇಖರ್..!
ಮೂಲತಃ ಬಾಗಲಕೋಟೆ ಜಿಲ್ಲೆಯ ಬಿಳಿಗಿರಿ ತಾಲೂಕಿನ ನಾಗರಹಾಳ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಶೇಖರ್ ಹೆಚ್ ತೆಕ್ಕಣ್ಣನವರ್ 2008ರ ಕೆಪಿಎಸ್ ಬ್ಯಾಚಿನ ಅಧಿಕಾರಿ ವೃತ್ತಿಯಲ್ಲಿ ಪಶು ವೈದ್ಯರಾಗಿದ್ದ ಇವರು ಕಲಬುರ್ಗಿಯ ಚಿಂಚೋಳಿಯಲ್ಲಿ ಪಶು ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು ನಂತರ 2008ರ ಕೆಪಿಎಸ್ ಬ್ಯಾಚ್ ನ  ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
ಬೆಂಗಳೂರು ಗ್ರಾಮಾಂತರದಲ್ಲಿ ತನ್ನ ವೃತ್ತಿಜೀವನ ಪ್ರಾರಂಭಿಸಿದ ಶೇಖರ್ ಅವರು 2010 ರಿಂದ 12 ರವರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಡಿವೈಎಸ್ಪಿ ಆಗಿ 2012ರಿಂದ 14ರವರೆಗೆ ಹಿರಿಯೂರಿನಲ್ಲಿ ಡಿವೈಎಸ್ಪಿ ಯಾಗಿ ನಂತರ ಶಿವಮೊಗ್ಗದಲ್ಲಿ ಅಡಿಷನಲ್ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದರು. ಶಿವಮೊಗ್ಗದಿಂದ ಮೈಸೂರಿಗೆ ವರ್ಗಾವಣೆಯಾದ ಶೇಖರ್ ನಂತರ ಪದೋನ್ನತಿ  ಹೊಂದಿ ಬೆಂಗಳೂರು ನಗರದ ಗುಪ್ತ ವಾರ್ತೆ ವಿಭಾಗಕ್ಕೆ ಡಿಸಿಪಿಯಾಗಿ ಐದು ತಿಂಗಳು ಕಾರ್ಯ ನಿರ್ವಹಿಸಿದ್ದರು .
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರಕರಣದಲ್ಲಿ  ಅಮಾನತ್ತು ..!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ  ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್ ಅವರನ್ನು ಒಳಗೊಂಡಂತೆ ಐದು ಜನರನ್ನು ಅಮಾನತ್ತುಗೊಳಿಸಲಾಗಿತ್ತು ಅದರಲ್ಲಿ ಶೇಖರ್ ಕೂಡ ಒಬ್ಬರು.
ಶಿವಮೊಗ್ಗದ ಅಳಿಯ ಶೇಖರ್ :
ಶಿವಮೊಗ್ಗದ ಪ್ರಭಾವಿ ಕಾಂಗ್ರೆಸ್ ಮುಖಂಡರ ಸಹೋದರರ ಮಗಳನ್ನು ಶೇಖರ್ ಅವರಿಗೆ  ವಿವಾಹ ಮಾಡಿಕೊಟ್ಟಿದ್ದು ಹಾಗಾಗಿ ಶೇಖರ್ ಅವರಿಗೆ ಶಿವಮೊಗ್ಗದ ನೆಂಟು ಹೆಚ್ಚಿದೆ ಶಿವಮೊಗ್ಗದ ಅಳಿಯ ಈಗ ದಾವಣಗೆರೆಯ ಎಸ್ಪಿ ಆಗಿದ್ದಾರೆ. ಅವರನ್ನು ಶಿವಮೊಗ್ಗ ಜಿಲ್ಲೆಗೆ ‌ ಕರೆತರುವ ನಿರಂತರ ಪ್ರಯತ್ನ ನಡೆದಿತ್ತು ಆದರೆ ಕೊನೆಯ ಕ್ಷಣಗಳಲ್ಲಿ ಅದು ನೆರವೇರಲಿಲ್ಲ ಇದೀಗ ಪಕ್ಕದ ಜಿಲ್ಲೆ ದಾವಣಗೆರೆಗೆ ಬಂದಿದ್ದಾರೆ.
ಮೃದು ಸೌಮ್ಯ ಸ್ವಭಾವದ ವ್ಯಕ್ತಿ ಶೇಖರ್ :
ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಶೇಖರ್ ಅವರು ವೃತ್ತಿಯಲ್ಲಿ ಪಶು ವೈದ್ಯಾಧಿಕಾರಿ ಆಗಿದ್ದರಿಂದ ಮೃದು ಸೌಮ್ಯ ಸ್ವಭಾವದರಾಗಿದ್ದು  ಎಲ್ಲರೊಂದಿಗೂ ಉತ್ತಮವಾಗಿ ಬೆರೆತು ಕಾರ್ಯನಿರ್ವಹಿಸುವ ಗುಣ ಉಳ್ಳವರು ಇದೀಗ ದಾವಣಗೆರೆ ಜಿಲ್ಲೆಗೆ ಬಂದಿದ್ದು  ಇಲ್ಲಿ  ಪ್ರಸ್ತುತ ವಾತಾವರಣ ಸವಾಲಿನ ಕೆಲಸವಾಗಿದೆ.
ರಘುರಾಜ್ ಹೆಚ್‌ ಕೆ…9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!