Home ರಾಜ್ಯಭಾವಪೂರ್ಣ ಶ್ರದ್ಧಾಂಜಲಿ…

ಭಾವಪೂರ್ಣ ಶ್ರದ್ಧಾಂಜಲಿ…

by EDITOR NEWS WARRIORS
0 comments

ಅಪ್ಪು ಅಪ್ಪ ಅಮ್ಮನಿಗೆ ಮುದ್ದಿನ ಕೂಸಿವನು
ಪ್ರೀತಿಯ ಸಹೋದರನಾಗಿ ಮಾದರಿಯಿವನು
ಕೂಡಿ ಬಾಳಿದ ಸುಸಂಸ್ಕೃತ ಪರಿವಾರದವನು
ಲೋಹಿತನಾಗಿ ಬಂದು ಪುನೀತನಾದ
ಬಾಲನಟನೆಯಲ್ಲಿ ಭಾಗ್ಯವಂತನಾದ
ಎರಡು ನಕ್ಷತ್ರದಲ್ಲಿ ಮಿನುಗಿ ಮರೆಯಾದll

ಮರೆಯದ ಬೆಟ್ಟದ ಹೂವಾದ
ಭಕ್ತ ಪ್ರಹ್ಲಾದನಾಗಿ ತಂದೆ ತಾಯಿಗೆ ಕಣ್ಮಣಿಯಾದ
ವೀರಕನ್ನಡಿಗ ,ಮೌರ್ಯ,ಪರಮಾತ್ಮ
ಚಕ್ರವ್ಯೂಹದಿಂದ ಧೃವತಾರೆಯಾದ
ದೊಡ್ಮನೆ ಹುಡುಗನಾಗಿ ಬಂದು ರಾಜಕುಮಾರನಂತೆ
ಕಂಗೊಳಿಸಿದ ಕಲಾಪ್ರೇಮಿಯಿವನುll

ಅಂಜನಿಪುತ್ರ,ನಟಸಾರ್ವಭೌಮ
ಯುವರತ್ನನಾಗಿ ಯುವಕರಿಗೆ ಬೆಳಕಾದ
ಚಲನಚಿತ್ರನಟ,ಹಿನ್ನೆಲೆಗಾಯಕ
ದೂರದರ್ಶನ ನಿರೂಪಕ ಮತ್ತು ನಿರ್ಮಾಪಕ
ಕನ್ನಡದ ಕೋಟ್ಯಾಧಿಪತಿ ನಿರೂಪಕನಾಗಿ
ಜನರನ್ನು ವಿಸ್ಮಯಗೊಳಿಸಿದll

ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿ
ಅತ್ಯುತ್ತಮ ಬಾಲ ಪ್ರಶಸ್ತಿ ಗಳಿಸಿ
ಯುವಕರಿಗೆ ಯುವರತ್ನವಾದ
ಕನ್ನಡದ ಮರೆಯದ ಮಾಣಿಕ್ಯನಿವನು
ಕಲಾಭಿಮಾನಿಗಳಿಗೆ ಮೇರು ನಟನಿವನು
ನೋಡುವ ಕಣ್ಣಿಗೆ ಆದರ್ಶವಾಗಿಹನುll

ಧೀರವಿಕ್ರಮನಂತೆ ಬಾಳಿ
ಎಂದೂ ಬಾರದ ಲೋಕಕ್ಕೆ ಕಾಣದಂತೆ ಮಾಯವಾದನು
ಮತ್ತೆ ಹುಟ್ಟಿ ಬರಲಿ ಈ ಕಲಾವಿದ
ನಮ್ಮ ಪವರ್ ಸ್ಟಾರ್ ಕನ್ನಡದ ಕಣ್ಮಣಿಗೆ ಪದಮಾಲೆಯ ಭಾವಪೂರ್ಣ ಶ್ರದ್ಧಾಂಜಲಿll

ಡಾ.ಎನ್, ಆರ್ ಮಂಜುಳ
ಕವಯಿತ್ರಿ ಮತ್ತು ಲೇಖಕಿ
ಶಿವಮೊಗ್ಗ…

Related Articles

Leave a Comment

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...