ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಜಿ ಸಚಿವರ ಪರಮಾಪ್ತ ,ಬಲಗೈ ಬಂಟ, ತಲೆಮರಿಸಿಕೊಂಡಿದ್ದು ಇವರ ಮೇಲೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಏನಿದು ಪ್ರಕರಣ :
ತೀರ್ಥಹಳ್ಳಿ ಮೂಲದ ಶಿಕ್ಷಕಿ ಒಬ್ಬರು ಬೆಂಗಳೂರಿನ ಪ್ರತಿಷ್ಠಿತ ಶಾಲೆ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಪರಿಚಯವಾದ ಮಾಜಿ ಸಚಿವರ ಆಪ್ತ (ಸಿಎಸ್ಆರ್ ಪಂಡ್) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಇಂದ ನಿಮ್ಮ ಶಾಲೆಗೆ 100 ಕೋಟಿ ಹಣ ಕೊಡಿಸುತ್ತೇನೆ ಆದರೆ ನೀವು ಈಗ ನನಗೆ 80 ಲಕ್ಷ ಹಣ ನೀಡಬೇಕು ನಂತರ ಬಂದ 100 ಕೋಟಿಯಲ್ಲಿ 50/50 ಕೋಟಿ ಹಂಚಿಕೊಳ್ಳೋಣ ಎಂದು ಹೇಳಿ ಒಂದು ಸಲ ತನ್ನ ಅಕೌಂಟಿಗೆ 25 ಲಕ್ಷ ಮತ್ತೊಂದು ಸಲ 10 ಲಕ್ಷ ಹಾಕಿಸಿಕೊಂಡು ನಂತರ ಅವರಿಗೆ ಯಾವುದೇ ಹಣವನ್ನು ಕೊಡಿಸದೆ ವಂಚಿಸಿದ್ದು ವಿಧಿ ಇಲ್ಲದೆ ಆ ಶಿಕ್ಷಕಿ ಇವರ ವಿರುದ್ಧ ದೂರು ದಾಖಲಿಸಿದ್ದು ಎಫ್ ಐ ಆರ್ ದಾಖಲಾದ ಬೆನ್ನಲ್ಲೇ ಈ ವ್ಯಕ್ತಿ ಕಳೆದ ಒಂದುವರೆ ತಿಂಗಳಿಂದ ನಾಪತ್ತೆಯಾಗಿದ್ದು ನಿನ್ನೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೂಡ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ.
ಬಹುತೇಕ ಈ ವ್ಯವಹಾರ ಕಳೆದ 6 ತಿಂಗಳಿಂದ ನಡೆಯುತ್ತಿದ್ದು ಮಾಜಿ ಸಚಿವರ ಪಾತ್ರ ಇದರಲ್ಲಿ ಇದೆಯಾ..? ಎನ್ನುವ ಚರ್ಚೆ ತೀರ್ಥಹಳ್ಳಿಯಲ್ಲಿ ನಡೆಯುತ್ತಿದೆ…
ಮಲೆನಾಡಿನಲ್ಲಿ ಮನಿ ಫ್ರಾಡ್ ..!
ಸಭ್ಯರು, ಸುಸಂಸ್ಕೃತರು ,ಇರುವ ತೀರ್ಥಹಳ್ಳಿ ಅಂತಹ ಮಲೆನಾಡಿನ ಹೆಬ್ಬಾಗಿಲಿನಲ್ಲಿ ಇತ್ತೀಚಿಗೆ ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು ಅದು ಬೇರೆಯವರಿಗೆ ಸದಾ ಬುದ್ಧಿವಾದ ಹೇಳುವ ಮಾಜಿ ಸಚಿವರ ಆಪ್ತರೇ ಮನಿ ಫ್ರಾಡ್ ನಲ್ಲಿ ಇರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ .
ಜೊತೆಗೆ ಯಾರು ಈ ಸಚಿವರ ಆಪ್ತ ಯಾವ ಠಾಣೆಯಲ್ಲಿ ಈತನ ಮೇಲೆ ಎಫ್ ಐ ಆರ್ ದಾಖಲಾಗಿದೆ..?! ಎನ್ನುವ ಎಲ್ಲಾ ಮಾಹಿತಿಯೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ…