474
ಹಿಂದೆ ಪತ್ರಿಕೆ ಪ್ರಕಟಿಸಿದ ಸುದ್ದಿ..!
ಶಿವಮೊಗ್ಗ: ಗಾಡಿಕೊಪ್ಪ ಸರ್ವೆ ನಂಬರ್ 15 ರ ವಿವಾದಿತ ಜಾಗದ ಪಕ್ಕದ ಇರುವ ಸರ್ವೆ ನಂಬರ್ 22/2B ಮತ್ತು 22/2C ಜಾಗದಲ್ಲಿ ಸರಿ ಸುಮಾರು 13 ಅಂತಸ್ತಿನ 238 ಅಪಾರ್ಟ್ಮೆಂಟ್ ಗಳನ್ನು ಕಟ್ಟಿಸುತ್ತೇನೆಂದು ಸತ್ಯನಾರಾಯಣ ಅವರ ಜೊತೆ ಒಪ್ಪಂದ ಮಾಡಿಕೊಂಡು ಕೆಲಸ ಶುರುಮಾಡಿದ ಹುಬ್ಬಳ್ಳಿ ಮೂಲದ ಗದಿಗಯ್ಯ ಹಿರೇಮಠ್ ಎನ್ನುವ ವ್ಯಕ್ತಿ ತನ್ನದೇ ಆದ ಜಿಬಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎನ್ನುವ ಸಂಸ್ಥೆಯ ಮೂಲಕ ಗಾಂಧಿನಗರದಲ್ಲಿ ಬಾಡಿಗೆ ಕಚೇರಿಯನ್ನು ಮಾಡಿಕೊಂಡು ಅಪಾರ್ಟ್ಮೆಂಟ್ ಕಾಮಗಾರಿಗೆ ಕೈ ಹಾಕಿದ ಆದರೆ ಅಪಾರ್ಟ್ಮೆಂಟ್ ಮಾಡುವ ಎಬಿಸಿಡಿ ಗೊತ್ತಿರದ ಈತ ಮೊದಲೇ ತನ್ನ ಇನ್ನೊಂದು ಅಪಾರ್ಟ್ಮೆಂಟ್ ನಲ್ಲಿ ಸಾಕಷ್ಟು ಗೊಂದಲ ಮಾಡಿಕೊಂಡಿದ್ದ ಅದರ ನಡುವೆ ಇಷ್ಟು ದೊಡ್ಡ ಪ್ರಾಜೆಕ್ಟ್ ಗ ಕೈ ಹಾಕಿದ ಇವನಿಗೆ ದಂಪತಿಗಳಿಬ್ಬರೂ ಸಾಥ್ ನೀಡಿದ್ದರು.

ಅಪಾರ್ಟ್ಕಾಮೆಂಟ್ ಕಾಮಗಾರಿ ಪ್ರಾರಂಭ ಮಾಡಲು ಬೇಕಾದ ಸರಿಯಾದ ಅನುಮತಿ ಪತ್ರಗಳನ್ನು ಪಡೆದುಕೊಳ್ಳದೆ ಪ್ರಾಧಿಕಾರಗಳ ನಿಯಮಗಳನ್ನು ಉಲ್ಲಂಘನೆ ಮಾಡಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಶುರುಮಾಡುತ್ತಾನೆ ಇದು ಸಾಲದೆಂಬಂತೆ ಇಲ್ಲಿ ಪಿಲ್ಲರ್ ಮಾಡಲು ತೆಗೆದ ಮಣ್ಣನ್ನು ಹಾಗೂ ಕಲ್ಲನ್ನು ಕೂಡ ಹೊರಗಡೆ ಯಾವುದೇ ಜಿಪಿಎಸ್ ಇಲ್ಲದೆ ಗಣಿ ಮತ್ತು ಭೂವಜ್ಞಾನ ಇಲಾಖೆಯ ಅನುಮತಿ ತೆಗೆದುಕೊಳ್ಳದೆ ಸರ್ಕಾರಕ್ಕೆ ರಾಜಧನ ಕಟ್ಟದೆ ಹೊರಗಡೆ ಮಾರಾಟ ಮಾಡುತ್ತಾನೆ ಆಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಾಕ್ಷಿ ಸಮೇತ ಸಿಕ್ಕಿಬಿಡುತ್ತಾನೆ ಅದರ ದಂಡವೇ ಸುಮಾರು ಒಂದು ಕೋಟಿಗೂ ಅಧಿಕವಾಗುತ್ತದೆ. ಅದು ಇನ್ನೂ ಕಟ್ಟಿಲ್ಲ . ಪ್ರತಿಷ್ಠಿತ ವ್ಯಕ್ತಿಗಳ ಹತ್ತಿರ ಕೋಟಿ ಕೋಟಿ ಲೂಟಿ ಮಾಡಿದ್ದಾನೆ ಕೆಲವರ ಬಳಿ ಈತ ಮಾತನಾಡಿರುವ ಆಡಿಯೋ ವಿಡಿಯೋ ಕೂಡ ಇದೆ.
ಕಾಮಗಾರಿ ನಿರ್ಮಾಣ ಮಾಡುವಲ್ಲಿ ಲೋಪ..!
*) ನಿಯಮಗಳ ಪ್ರಕಾರ ಅಪಾರ್ಟ್ಮೆಂಟ್ ಕಾಮಗಾರಿ ನಿರ್ಮಾಣ ಮಾಡುತ್ತಿಲ್ಲ.
*)ಸಂಬಂಧಪಟ್ಟ ಪ್ರಾಧಿಕಾರಗಳಿಂದ ಸರಿಯಾದ ಅನುಮತಿಗಳನ್ನು ತೆಗೆದುಕೊಂಡಿಲ್ಲ.
*)ರೇರಾ ನಿಯಮದ ಪ್ರಕಾರ ಅಪಾರ್ಟ್ಮೆಂಟ್ ಕೊಳ್ಳುವ ಗ್ರಾಹಕರ ಹಣ ರೇರಾ ಖಾತೆಗೆ ಹೋಗಬೇಕು ಆದರೆ ಇಲ್ಲಿ ಹಿರೇಮಠ್ ನೇರವಾಗಿ ತನ್ನ ಖಾತೆಗೆ ಹಣವನ್ನು ತೆಗೆದುಕೊಂಡಿದ್ದಾನೆ.
*)ಜೊತೆಗೆ ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳಲ್ಲಿ ಅನುಮತಿಗಳನ್ನೇ ತೆಗೆದುಕೊಂಡಿಲ್ಲ.
*)ಕಳಪೆ ಗುಣಮಟ್ಟದ ವಸ್ತುಗಳನ್ನು ಅಪಾರ್ಟ್ಮೆಂಟ್ ಕಾಮಗಾರಿಗೆ ಬಳಸುತ್ತಿದ್ದಾನೆ.
ಇದೆಲ್ಲವನ್ನು ಪತ್ರಿಕೆ ವಿಸ್ತಾರವಾಗಿ ಹಿಂದೆ ಪ್ರಕಟ ಮಾಡಿತ್ತು ಅಪಾರ್ಟ್ಮೆಂಟ್ ಕೊಳ್ಳುವ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿತ್ತು ಕೆಲವರು ಹುಷಾರಾದರು ಕೆಲವರು ಅವರು ಈಗ ಕಂಗಾಲಾಗಿದ್ದಾರೆ .
ಹಿಂದೆ ಪತ್ರಿಕೆ ಪ್ರಕಟಿಸಿದ ಸುದ್ದಿ..!
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ರೆಡಿಯಾಗಿದ್ದಾರೆ…!
ಈತನ ವಂಚನೆ ಲಕ್ಷ ಗಳಲ್ಲಿ ಇಲ್ಲ ಕೋಟಿಗಟ್ಟಲೆ ಇದೆ ಒಂದು ಅಂದಾಜಿನ ಪ್ರಕಾರ 35 ರಿಂದ 40 ಕೋಟಿ ವಂಚಿಸಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ .
ಈತನ ವಂಚನೆಯ ಜಾಲಕ್ಕೆ ಶಿವಮೊಗ್ಗದ ಪ್ರತಿಷ್ಠಿತ ವೈದ್ಯರು, ವ್ಯಾಪಾರಸ್ಥರು, ಕೆಲವು ರಾಜಕಾರಣಿಗಳು, ನಿವೃತ್ತ ಸರ್ಕಾರಿ ನೌಕರರು ಇದ್ದು ಶಿವಮೊಗ್ಗ ಸೇರಿದಂತೆ ಸಾಗರ ,ಶಿರಸಿ, ಹುಬ್ಬಳ್ಳಿಯಲ್ಲಿ ಕೂಡ ಈತನ ವಂಚನೆಯ ಜಾಲ ಹರಡಿದೆ. ಅಲ್ಲಿರುವವರಿಗೂ ಕೂಡ ಈತ ಹಣ ನೀಡಬೇಕು ಪತ್ರಿಕೆ ಜೊತೆ ಕೆಲವರು ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ ದೂರು ನೀಡಲು ರೆಡಿಯಾಗಿದ್ದಾರೆ.
ದಂಪತಿಗಳಿಬ್ಬರು ಇವನಿಗೆ ಸಾಥ್..!