Home ಶಿವಮೊಗ್ಗಹಿಜಾಬ್- ಕೇಸರಿ ವಿವಾದದ ಮೂರು ದಿನಗಳ ರಜೆಯಲ್ಲಿ ಅದೊಂದು ಸರ್ಕಾರಿ ಶಾಲೆ ಮಾಡುತ್ತಿರುವುದೇನು?

ಹಿಜಾಬ್- ಕೇಸರಿ ವಿವಾದದ ಮೂರು ದಿನಗಳ ರಜೆಯಲ್ಲಿ ಅದೊಂದು ಸರ್ಕಾರಿ ಶಾಲೆ ಮಾಡುತ್ತಿರುವುದೇನು?

by EDITOR NEWS WARRIORS
0 comments

ರಾಜ್ಯಾದ್ಯಂತ ಹಿಜಾಬ್ ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ಇದರ ನಡುವೆಯೇ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೆರಿ ಹೊಸೂರು ಸರ್ಕಾರಿ ಪ್ರೌಢ ಶಾಲೆ ಈ ರಜೆಯಲ್ಲೂ ವಿಭಿನ್ನವಾಗಿ ಇತರ ಶಾಲೆಗಳಿಗೆ ಮಾದರಿಯಾಗುವ ಕಾರ್ಯ ಮಾಡಿದೆ.

ಏನಿದು ಸರ್ಕಾರಿ ಶಾಲೆಯ ಕಾರ್ಯ:

ಎಸ್ ಎಸ್ ಎಲ್ ಸಿ ಸೇರಿದಂತೆ 8 & 9 ನೇ ತರಗತಿಯ ಮಕ್ಕಳ ಮನೆಗೆ ಭೇಟಿ ಮಾಡಲು ಯೋಜನೆ ರೂಪಿಸಿ, ಆರಂಭಿಕವಾಗಿ ಗುಡ್ಡೇಕೇರಿಯ ಕಲ್ಕೋಡ್ ಮನೆಗೆ ಭೇಟಿ ಮಾಡಿ ನಂತರ ಗುಡ್ಡೇಕೇರಿ, ಕೆಂದಾಳಬೈಲು, ಹೊನ್ನೆತಾಳು, ಕುಂದಾ, ನಂಟೂರು, ಹೆಬ್ಬೈಲ್ , ತಿಪ್ಪೊಡ್ಲು, ಕುಂದಾದ್ರಿ, ಭಾಗದ ಮಕ್ಕಳ ಮನೆಗೆ ಭೇಟಿ ನೀಡಿದ ಶಾಲೆಯ ತಂಡ ಮಕ್ಕಳ ಮುಂದಿನ ಶೈಕ್ಷಣಿಕ ದೃಷ್ಟಿಯಿಂದ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ನೀಡುವುದರ ಜೊತೆಗೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ರೀತಿ ದಿನನಿತ್ಯ ಓದುವ ಕ್ರಮದ ಬಗ್ಗೆ ಹಾಗೂ ಪರೀಕ್ಷೆಗಳಿಗೆ ತಯಾರು ಆಗುವ ಬಗ್ಗೆ ಮನೆಯಲ್ಲಿನ ಇತರ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿ ಒಂದಷ್ಟು ಸೂಕ್ತ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ವೀರೇಶ್ ಟಿ, ರೇವತಿ ಹೆಚ್ ಬಿ ಬೀರಪ್ಪ ಇಟಗಿ, ಶೌಕತ್ ಆಲಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಮುಂತಾದವರು ಭಾಗವಹಿಸಿದ್ದರು,

ರಜೆಯನ್ನು ಇತರ ಸದುಪಯೋಗಪಡಿಸಿಕೊಂಡು ಇತರ ಶಾಲೆಗಳಿಗೂ ಮಾದರಿಯಾಗಿದ್ದು ಹೆಮ್ಮೆಯ ಸಂಗತಿ ಉಳಿದ ಶಾಲೆಯ ಶಿಕ್ಷಕರಿಗೆ ಇದು ಮಾದರಿಯಾಗಲಿ…

##########################################################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...