ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳ ಪಾಡು ಹೇಳುವವರಿಲ್ಲ ಕೇಳುವವರಿಲ್ಲದಾಗಿದೆ. ರೋಗಿಗಳು ಚೀಟಿ ಮಾಡಿಸಲು ಹರಸಾಹಸ ಪಡುತ್ತಿದ್ದೂ, ಒಂದೇ ಕೌಂಟರ್ ನಲ್ಲಿ ಎರಡು ಕಂಪ್ಯೂಟರ್ ಇದ್ದೂ, ಒಬ್ಬ ರೋಗಿ ಚೀಟಿ ಮಾಡಿಸಲು ಕನಿಷ್ಠ ಎರಡೂ ಗಂಟೆ ಸಾಲಾಗಿ ನಿಂತು ಕಾಯುವ ಪರಿಸ್ಥಿತಿಯಿದ್ದೂ ಎಷ್ಟೋ ರೋಗಿಗಳು ಸಾಲಿನಲ್ಲೇ ಅಸ್ವಸ್ಥರಾಗಿ ಬೀಳುತ್ತಿರುವ ಸನ್ನಿವೇಶಗಳು ಸರ್ವೇ ಸಾಮಾನ್ಯವಾಗಿದೆ.
ಗಂಟೆಗಟ್ಟಲೇ ಸಾಲಾಗಿ ನಿಂತು ಚೀಟಿ ಪಡೆದು ರೋಗಿಗಳು ಸಂಬಂಧ ಪಟ್ಟ ವೈದ್ಯರ ಕೊಠಡಿಗೆ ತೆರಳಿದರೇ ಕರ್ತವ್ಯ ಸಮಯ ಮೀರಿದ ಕಾರಣ ವೈದ್ಯರು ಊಟಕ್ಕೆ ತೆರಲಿರುವುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬ ನೋವು ಬಡ ರೋಗಿಗಳ ಪಾಡು.
ಚೀಟಿಗಾಗಿ ಕಾದು ಕಾದು ಸುಸ್ತಾದ ರೋಗಿಗಳು ಕೊನೆಗೂ ಚೀಟಿ ಪಡೆದು ವೈದ್ಯರ ಸಲಹೆ ಪಡೆದು ಲ್ಯಾಬ್ ಗೆ ಹೋದರೇ ಲ್ಯಾಬ್ ಬಂದ್ ಆಗಿರುತ್ತದೆ.
ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಸಾಗರ ಉಪ ವಿಭಾಗೀಯ ಆಸ್ಪತ್ರೆ ಮಾತ್ರಾ ರೋಗಿಗಳಿಗೆ ಸುಲಲಿತವಾಗಿ ಸೇವಾ ಸೌಲಭ್ಯ ನೀಡುವಲ್ಲಿ ಸಂಪೂರ್ಣ ಹಿಂದೇ ಉಳಿದಿದೆ.
ಕೂಡಲೇ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಚೀಟಿ ನೀಡುವ ಸೇವಾ ಕೌಂಟರ್ ತೆರೆದು ತ್ವರಿತವಾಗಿ ರೋಗಿಗಳಿಗೆ ಚೀಟಿ ವಿತರಣೆ ಮಾಡುವತ್ತ ಕ್ರಮಕ್ಕೆ ಮುಂದಾಗಲಿ ಅತ್ಯುತ್ತಮ ಸೇವಾ ಮನೋಭಾವನೆಯುಳ್ಳ ಅರೋಗ್ಯ ರಕ್ಷಾ ಸಮಿತಿ.
ಲ್ಯಾಬ್ ನಲ್ಲಿ ಕರ್ತವ್ಯ ನಿರತರು ರೋಗಿಗಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೂ, ಎಲ್ಲೋ ಖಾಸಗಿ ಲ್ಯಾಬ್ ಜೊತೆಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಲ್ಯಾಬ್ ಸಿಬ್ಬಂದಿಗಳು ಒಳ ಒಪ್ಪಂದ ಮಾಡಿಕೊಂಡಿರುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
” ಸಾಗರದ ಆಸ್ಪತ್ರೆ ಒಂದು ಸಮಸ್ಯೆ ಹತ್ತಾರು ” ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ, ಜನಸ್ನೇಹಿ ಶಾಸಕರಾದ ಸನ್ಮಾನ್ಯ ಶ್ರೀ ಹರತಾಳು ಹಾಲಪ್ಪ ರವರು ಸಾಗರದ ಉಪ ವಿಭಾಗೀಯ ಆಸ್ಪತ್ರೆ ಮೇಜರ್ ಸರ್ಜರಿ ತೀರಾ ಅವಶ್ಯಕತೆ ಹಾಗೂ ಅನಿವಾರ್ಯವಿದೆ.
ಓಂಕಾರ ಎಸ್.ವಿ. ತಾಳಗುಪ್ಪ…
ರಘುರಾಜ್ ಹೆಚ್.ಕೆ..9449553305….


1 comment
Этот информационный обзор станет отличным путеводителем по актуальным темам, объединяющим важные факты и мнения экспертов. Мы исследуем ключевые идеи и представляем их в доступной форме для более глубокого понимания. Читайте, чтобы оставаться в курсе событий!
Углубиться в тему – https://vyvod-iz-zapoya-1.ru/