ಇಂದು ವಾಮಾಚಾರದ ನಿಂಬೆಹಣ್ಣು ಮಾಟ ಮಂತ್ರ ರಾಜಕಾರಣಿಗಳು ಅಧಿಕಾರಸ್ಥರು ಕುಟುಂಬದಲ್ಲಿ ಆಗುವ ಗಲಾಟೆಗಳು ಆಸ್ತಿ ವಿಚಾರದಲ್ಲಿ ನಡೆದುಕೊಂಡು ಬಂದಿರುವ ಸಂಗತಿಯಾಗಿರುತ್ತದೆ .ಆದರೆ ಅದರ ಸಾಲಿಗೆ ತೀರ್ಥಹಳ್ಳಿ ಅಕ್ರಮ ಬಂಡೆ ಪ್ರದೇಶದಲ್ಲಿ ಮೇಲಿನಕುರುವಳ್ಳಿ ಸರ್ವೆ ನಂಬರ್ 75ರಲ್ಲಿ ಪುಷ್ಪಕ ವಿಮಾನ ದಲ್ಲಿ ತಾನೊಬ್ಬನೆ ಚಲಿಸಬೇಕೆಂದು ಅನೇಕ ವರ್ಷಗಳಿಂದ ಬಂಡೆಯ ಎಲ್ಲಾ ಅಕ್ರಮ ಅನೈತಿಕ ವ್ಯವಹಾರಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಧರ್ಮರಾಯ ದಿನವೊಂದಕ್ಕೆ ಅಕ್ರಮ ಬಂಡೆಯಲ್ಲಿ ಎರಡರಿಂದ 3ಲಕ್ಷ ರೂಪಾಯಿಗಳ ಆದಾಯ ಇದ್ದರೂ ತಾನು ಅಕ್ರಮ ಬಂಡೆ ಮಾಡುತ್ತಿದ್ದರು, ಪಕ್ಕದಲ್ಲಿ ಅಕ್ರಮ ಮಾಡುತ್ತಿರುವ ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮನವರ ಪರಮ ಭಕ್ತ ನೋರ್ವನಿಗೆ ತೊಂದರೆ ಕೊಡುವ ಮತ್ತು ಕಿರುಕುಳ ಕೊಡುವ ಉದ್ದೇಶದಿಂದ ಆತನ ಬಂಡೆಯಲ್ಲಿ ವಾಮಾಚಾರ ಮಾಡಿ ಲಿಂಬೆಹಣ್ಣನ್ನು ಇಟ್ಟಿರುವ ಸುದ್ದಿಯೊಂದು ಬಯಲಿಗೆ ಬಂದಿದೆ .…
ಮಂದಾರ್ತಿ ದುರ್ಗಾಪರಮೇಶ್ವರಿ ಭಕ್ತನು ಜಿದ್ದಾಜಿದ್ದಿಗೆ ನಿಂತು ತಾನು ಈವರೆಗೆ ಧಾರ್ಮಿಕವಾಗಿ ಯಾರಿಗೂ ಕಿರುಕುಳ ಕೊಡದೆ ಇದ್ದೇನೆ ನನ್ನ ಸುದ್ದಿಗೆ ಯಾರೇ ಬಂದರೂ ಅಮ್ಮನವರು ಕಾಪಾಡೇ ಕಾಪಾಡುತ್ತಾರೆ ಎಂದು ದುರ್ಗಾಪರಮೇಶ್ವರಿಯ ಮೇಲೆ ಹೊಣೆಹೊತ್ತು ಬಿಟ್ಟಿದ್ದಾರೆ .ಮೇಲಿನ ಕುರುವಳ್ಳಿಯ ಆಧುನಿಕ ಧರ್ಮರಾಯ ಗಣ್ಯರೊಬ್ಬರಿಗೆ 5ಲಕ್ಷ ಮೋಸ ಮಾಡಿದ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಘಟಾನುಘಟಿ ಕೊರಗಜ್ಜನ ದೇವಸ್ಥಾನದಲ್ಲಿ ಕೊಯ್ಲ ದಾಖಲಾಗಿತ್ತು ಇದರ ಫಲವಾಗಿ ಧರ್ಮರಾಯನ ಮೇಲೆ ಮೇಲಿಂದ ಮೇಲೆ ಪೆಟ್ಟು ಬೀಳಲು ಪ್ರಾರಂಭವಾಗಿದೆ ಎಂದು ಕುರುವಳ್ಳಿಯಲ್ಲಿ ನಡೆದ ಬಂಡೆಯವರ ಸಭೆಯಲ್ಲಿ ಅನೇಕರು ಧರ್ಮರಾಯನಿಗೆ ಅವಹೇಳನ ಮಾಡುತ್ತಿರುವುದು ಕೇಳಿ ಬಂದಿದೆ ..
.ಒಟ್ಟಿನಲ್ಲಿ ಮೇಲಿನಕುರುವಳ್ಳಿಯಲ್ಲಿ ಆಧುನಿಕ ಧರ್ಮರಾಯನ ದಿನಕ್ಕೊಂದು ಹೊಸ ಹೊಸ ಪ್ರಕರಣಗಳು ಧಾರಾವಾಹಿಯಂತೆ ಬಯಲಿಗೆ ಬರತೊಡಗಿದೆ….. ಇನ್ನು ಬೈಯಲಿಗೆ ಬರೋದು ಬಾಕಿ ಇದೆ….
ರಘುರಾಜ್ ಹೆಚ್.ಕೆ…9449553305…


1 comment
Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.