ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪಾಲಿಕೆಯ ಸದಸ್ಯರುಗಳು ತಾವೇ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಂಡು ಆಡಿಟ್ ನಲ್ಲಿ ಅಬ್ಜೆಕ್ಷನ್ ಬಂದರೆ ಹಣವನ್ನು ಪುನಃ ನೀಡುವುದಾಗಿ ಒಪ್ಪಿಕೊಂಡು ತಮ್ಮ ವೈಯಕ್ತಿಕ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಪಾವತಿಸಿಕೊಂಡಿದ್ದಾರೆ.

ಆದರೆ ಮುನ್ಸಿಪಾಲ್ ಆಕ್ಟ್ನನಲ್ಲಿ ಪಾಲಿಕೆಯ ಸದಸ್ಯರುಗಳಿಗೆ ತಮ್ಮ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಬರಿಸಿಕೊಳ್ಳಬೇಕು ಎನ್ನುವ ಯಾವುದೇ ಆದೇಶವಿಲ್ಲ ಹಾಗೆ ಸರ್ಕಾರದಿಂದ ಕೂಡ ಯಾವುದೇ ಆದೇಶ ಇರುವುದಿಲ್ಲ. ಆದರೂ ಇವರು ಸಾರ್ವಜನಿಕ ತೆರಿಗೆ ಹಣದಲ್ಲಿ ಈ ತರಹ ತಮ್ಮ ವೈಯಕ್ತಿಕ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಪಾವತಿಸಿಕೊಳ್ಳುತ್ತಿರುವುದು ಕಾನೂನು ಬಾಹಿರ ಕೃತ್ಯವಾಗಿದ್ದು ಇದು ಖಂಡನೀಯವಾಗಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ…

ಇದರ ಬಗ್ಗೆ ನ್ಯೂಸ್ ವಾರಿಯರ್ಸ್ ಪತ್ರಿಕೆ ತನಿಖಾ ವರದಿಯ ರೂಪದಲ್ಲಿ ವರದಿಯನ್ನು ಪ್ರಕಟಿಸಿತ್ತು ನ್ಯೂಸ್ ವಾರಿಯರ್ಸ್ ಪತ್ರಿಕೆ ಜೊತೆ ಮಾತನಾಡಿದ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರು ಇದು ಕಾನೂನು ಬಾಹಿರ ಕೃತ್ಯವಾಗಿದ್ದು ಸರ್ಕಾರದಿಂದ ಯಾವುದೇ ಆದೇಶವಿಲ್ಲ ಹಾಗೂ ಮುನ್ಸಿಪಾಲ್ ಆಕ್ಟ್ನನಲ್ಲಿ ಇದಕ್ಕೆ ಯಾವುದೇ ರೀತಿಯ ರೆಗ್ಯುಲೇಷನ್ ಪಾಸ್ ಆಗಿಲ್ಲ ಆದ್ದರಿಂದ ನಾನು ಸರ್ಕಾರಕ್ಕೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು….
ಪತ್ರಿಕೆ ವರದಿಯ ನಂತರ ಆಮ್ ಆದ್ಮಿ ಪಾರ್ಟಿ ಇಂದು ಇದೆ ವಿಷಯವಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಕೂಡಲೇ ಇದು ಇಲ್ಲಿಗೆ ನಿಲ್ಲಬೇಕು. ಹಾಗೂ ಇಲ್ಲಿಯವರೆಗೆ ಇವರು ಬರಿಸಿಕೊಂಡಿರುವ ಚಿಕಿತ್ಸೆ ವೆಚ್ಚವನ್ನು ಮರುಪಾವತಿಸಿಕೊಳ್ಳಬೇಕು ಹಾಗೂ ಅಂತ ಸದಸ್ಯರ ವಿರುದ್ಧ ಮುಖದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಜನಜಾಗೃತಿ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು. ಒಂದು ವೇಳೆ ಇದು ಆಗದಿದ್ದರೆ ಮಹಾನಗರ ಪಾಲಿಕೆಯಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ….

ರಘುರಾಜ್ ಹೆಚ್.ಕೆ..9449553305…


1 comment
Хочу поделиться полезной информацией. Обнаружил отличный ресурс на полезный портал. Нашел ответы на многие свои вопросы.
Про каудексные растения, их специфику и уход можно почитать в этом разделе. Очень необычные и красивые растения.
Ссылка ниже:
[url=https://raregreen.ru/category/sukulenti-i-kaktusi/]https://raregreen.ru/category/sukulenti-i-kaktusi/[/url]
Всем удачи в выращивании!