Home ಶಿವಮೊಗ್ಗನುಡಿದಂತೆ ನಡೆದ ಸಚಿವ ಮಧು ಬಂಗಾರಪ್ಪ..!

ನುಡಿದಂತೆ ನಡೆದ ಸಚಿವ ಮಧು ಬಂಗಾರಪ್ಪ..!

by EDITOR NEWS WARRIORS
0 comments


ಅಕ್ಟೋಬರ್ 26ರಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ನಗರದ ತಾವರೆಕೊಪ್ಪ ಬಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ ಜಿಲ್ಲಾ ಎನ್ಎಸ್ ಯು ಐ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ , ಮಧು ಬಂಗಾರಪ್ಪನವರು ಭಾಗವಹಿಸಿ ಕೇಕ್ ಕತ್ತರಿಸಿ ನಿರಾಶ್ರಿತರಿಗೆ ಬೆಡ್ ಶೀಟ್ ಗಳನ್ನು ವಿತರಿಸಿ ಮಾತನಾಡುತ್ತಾ, ಹಲವಾರು ಕಾರಣಗಳಿಂದ ತಮ್ಮ ಕುಟುಂಬದಿಂದ ದೂರವಾಗಿ ಭಿಕ್ಷಾಟನೆ ಮಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ, ನಿಮ್ಮನ್ನು ಬಿಕ್ಷಾಟನೆಯಿಂದ ಮುಕ್ತಿಗೊಳಿಸಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿ ಆಹಾರ ಬಟ್ಟೆ ಮತ್ತು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿ ನಿಮ್ಮ ಬದುಕು ರೂಪಿಸುವ ಕಾರ್ಯ ಕೇಂದ್ರ ನಿರ್ವಹಿಸುತ್ತದೆ, ಇದು ಸಾಮಾಜಿಕ ಜವಾಬ್ದಾರಿ ಕೂಡ, ಸರ್ಕಾರ ನಿಮ್ಮ ಪುನರ್ವಸತಿಗಾಗಿ ಹಾಗೂ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸುತ್ತದೆ, ಇದರ ಸದುಪಯೋಗ ಪಡೆದು ನೀವುಗಳು ಉತ್ತಮ ನಡವಳಿಕೆ ಹೊಂದಿ ಮತ್ತೆ ನಿಮ್ಮ ಕುಟುಂಬ ಸೇರುವಂತೆ ಆಗಬೇಕು ಯಾರು ಅನಾಥರಾಗಿ ಬದುಕಬಾರದು ಯಾರು ಹಸಿವಿನಿಂದ ನರಳಬಾರದು ಎಲ್ಲರೂ ಸ್ವಂತ ಸೂರು ಹೊಂದಬೇಕು ಇದು ನಮ್ಮ ತಂದೆ ಬಂಗಾರಪ್ಪಜಿ ಅವರ ಕನಸು ಇದನ್ನು ನನಸು ಗೊಳಿಸಲು ನಾನು ಕೂಡ ಅವರ ಮಗನಾಗಿ ಪ್ರಯತ್ನಿಸುತ್ತೇನೆ ನಮ್ಮ ನಮ್ಮ ತಂದೆ ಬಂಗಾರಪ್ಪಜಿ ಇಲ್ಲದಿರಬಹುದು ಆದರೆ ಅವರ ಆದರ್ಶ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಸೌಭಾಗ್ಯ ನನಗಿದೆ ,ಈ ದಿನ ನಮ್ಮ ತಂದೆ ಬಂಗಾರಪ್ಪಜಿ ಅವರ 90ನೇ ಜನ್ಮದಿನಾಚರಣೆ , ಎನ್ ಎಸ್ ಯು ಐ ಕಾರ್ಯಕರ್ತರು ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಬೆಡ್ ಶೀಟ್ ನೀಡುವುದರ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.


ತಾವುಗಳು ನನ್ನಲ್ಲಿ ವಿನಂತಿಸಿದಂತೆ ನಾನು ಎಸ್, ಬಂಗಾರಪ್ಪ ಪೌಂಡೇಶನ್ ಹಾಗೂ ಎಸ್,ಬಂಗಾರಪ್ಪ ಅಭಿಮಾನಿ ಬಳಗ ದಿಂದ 65 ಇಂಚಿನ ಮಿನಿ ಹೋಮ್ ಥಿಯೇಟರ್ ಟಿವಿ ಯನ್ನು ಹಾಗೂ ಎಲ್ಲ 230 ನಿರಾಶ್ರಿತರಿಗೆ ಅತ್ಯುತ್ತಮ ಪಾದರಕ್ಷೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು ಅದರಂತೆ ಈ ದಿನ ಎಸ್ ಬಂಗಾರಪ್ಪಜಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಎನ್ ಎಸ್ ಯು ಐ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಸಚಿವ ಮಧು ಬಂಗಾರಪ್ಪನವರು ಮಾತು ಕೊಟ್ಟಂತೆ 65 ಇಂಚಿನ ಮಿನಿ ಹೋಂ ಥಿಯೇಟರ್ ಟಿವಿ ಹಾಗೂ ಎಲ್ಲಾ 230 ನಿರಾಶ್ರೀತರಿಗೂ ಪಾದರಕ್ಷೆಗಳನ್ನು ಈ ದಿನ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ಡಿ.ಮಂಜುನಾಥ್ ಮುಕ್ತಿಯರ್ ಅಹಮದ್ ಮುಹಿಬುಲ್ಲಖಾನ್ ಟಿ.ಡಿ. ಜಿತೇಂದ್ರಗೌಡ ಮಧುಸೂದನ್, ವಿಜಯ್ ಕುಮಾರ್, ಎಂ.ಬಿ. ರವಿಕುಮಾರ್ ಜ್ಯೋತಿ ಅರಳಪ್ಪ, ಟಿ, ಮಂಜಪ್ಪ ಗಿರೀಶ್ ರವಿ ಮುಂತಾದವರು ಉಪಸ್ಥಿತರಿದ್ದರು.

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!