Home ಶಿವಮೊಗ್ಗಪರಿಸರ ಪ್ರೇಮಿ,ಪ್ರಾಣಿ ಪ್ರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಇನ್ನಿಲ್ಲ..!

ಪರಿಸರ ಪ್ರೇಮಿ,ಪ್ರಾಣಿ ಪ್ರಿಯ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಇನ್ನಿಲ್ಲ..!

by EDITOR NEWS WARRIORS
0 comments

ಶಿವಮೊಗ್ಗ ನಂದನ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಸರಿಸುಮಾರು 40 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ನಂದನ್ ಎಂದೆ ಖ್ಯಾತಿಗಳಿಸಿದ ಅಪರೂಪದ ಛಾಯಾಗ್ರಾಹಕ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಇಡೀ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ.

ನಿನ್ನೆಷ್ಟೇ ಗೆಳೆಯ ಸ್ನೇಹಜೀವಿ ಸರಳ ವ್ಯಕ್ತಿತ್ವದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ಸಾವಿನ ನೋವಿನಲ್ಲಿದ್ದ ನಮಗೆ ಇಂದು ಇನ್ನೊಂದು ಆಘಾತ ಹಿರಿಯರು ಮಾರ್ಗದರ್ಶಕರು ಎಲ್ಲೇ ಸಿಕ್ಕರು ಆತ್ಮೀಯತೆಯಿಂದ ಮಾತನಾಡುತ್ತಾ ಒಂದಷ್ಟು ವಿಚಾರಗಳನ್ನು ಹರಟುತ್ತಾ ತಾವು ಪತ್ರಿಕಾ ರಂಗಕ್ಕೆ ಬಂದ ಪ್ರಾರಂಭದಲ್ಲಿ ಅನುಭವಿಸಿದ ನೋವುಗಳನ್ನು ನಂತರ ಎದುರಿಸಿದ ಸವಾಲುಗಳನ್ನು ವಿವರಿಸುತ್ತಾ ಯಾವುದೇ ಅಹಂ ಅಹಂಕಾರವಿಲ್ಲದೆ ಮಾತನಾಡುತ್ತಿದ್ದ ಗೆಳೆಯರಂತ ಹಿರಿಯರು ಇಂದು ಇಲ್ಲ ಎನ್ನುವುದೇ ಉಹಿಸಲು ಅಸಾಧ್ಯ ಆದರೆ ವಿಧಿಯ ಮುಂದೆ ಎಲ್ಲವೂ ಶೂನ್ಯ ರೈತ ಕುಟುಂಬದಲ್ಲಿ ಜನಿಸಿದ ನಂದನ್ 1994 ರಲ್ಲಿ ಪತ್ರಿಕೋದ್ಯಮಕ್ಕೆ ಬಂದು ವಿವಿಧ ಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ನಂತರ ಇಂಡಿಯನ್ ಎಕ್ಸ್ಪ ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಇತ್ತೀಚಿಗೆ ಒಂದು ಕಣ್ಣಿನ ಆಪರೇಷನ್ ಕೂಡ ಆಗಿತ್ತು ಅದರಿಂದ ಕೊಂಚ ಬಳಲಿದ್ದರು ಒಂದು ಕಣ್ಣು ಅಷ್ಟಾಗಿ ಕಾಣಿಸುತ್ತಿರಲಿಲ್ಲ ಅದರ ನೋವು ಅವರಿಗೆ ಇತ್ತು ಆದರೂ ತೋರಿಸಿಕೊಳ್ಳುತ್ತಿರಲಿಲ್ಲ ಮತ್ತದೇ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಿದ್ದರು ಅಪಾರ ಪರಿಸರ ಪ್ರೇಮಿ, ಪ್ರಾಣಿ ಪ್ರಿಯರು ಆಗಿದ್ದ ನಂದನ್ ಕೋವಿಡ್ ನಂತಹ ಭೀಕರ ಸಮಯದಲ್ಲೂ ಕೂಡ ಗಿಡಗಳಿಗೆ ನೀರು ಹಾಕುವುದರ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದರು ಹಾಗೆ ಎಲ್ಲೇ ಮರ ಕಡಿದರೂ ಕೂಡ ಅದನ್ನು ವಿರೋಧಿಸುತ್ತಿದ್ದರು ಒಮ್ಮೊಮ್ಮೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ನಮ್ಮಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಹಾಗೆ ಪ್ರಾಣಿ ಪ್ರಿಯರು ಆಗಿದ್ದ ನಂದನ್ ಯಾವುದಾದರೂ ಪ್ರಾಣಿಗಳಿಗೆ ತೊಂದರೆ ಆಗಿದ್ದರೆ ಅವುಗಳನ್ನು ಮನೆಗೆ ತಂದು ಔಷಧಿ ಹಚ್ಚಿ ಘೋಷಣೆ ಮಾಡುತ್ತಿದ್ದರು ಒಂದೆರಡು ಬಾರಿ ಮನೆಗೆ ಕರೆದುಕೊಂಡು ಹೋಗಿದ್ದ ನಂದನ್ ತಮ್ಮ ಅಮೋಘ ಕಣ್ಣಿನಲ್ಲಿ ತೆಗೆದ ಅಪರೂಪದ ಛಾಯಾ ಚಿತ್ರಗಳನ್ನು ತೋರಿಸುವುದರ ಜೊತೆಗೆ ಅವುಗಳ ಹಿಂದಿನ ವಿಷಯಗಳನ್ನು ಹಾಗೂ ಸಂದರ್ಭಗಳನ್ನು ವಿವರಿಸಿ ಹೇಳಿದ್ದರು .

ಭವಿಷ್ಯ ಅವರು ತೆಗೆದ ಛಾಯಾಚಿತ್ರಗಳ ವಿಷಯಗಳು ಹಾಗೂ ಸಂದರ್ಭಗಳನ್ನು ಇಟ್ಟುಕೊಂಡೆ ಒಂದಷ್ಟು ಸುದ್ದಿಗಳನ್ನು ಮಾಡಬಹುದು ಅಂತಹ ಅಪರೂಪದ ಛಾಯಾಗ್ರಾಹಕ ಎಂದರೆ ತಪ್ಪಾಗಲಾರದು.

ಇವರಿಗೆ ಸಾಕಷ್ಟು ಪ್ರಶಸ್ತಿಗಳು ಹರಿದು ಬಂದಿವೆ ಆದರೆ ಜನ ಪ್ರೀತಿಸುತ್ತಿದ್ದ ರೀತಿ ಪ್ರಶಸ್ತಿಗಳಿಗಿಂತ ಇವರಿಗೆ ಹೆಚ್ಚಾಗಿತ್ತು.

ಇಂದು ಅವರಿಲ್ಲ ಎನ್ನುವುದೇ ನೋವಿನ ಸಂಗತಿ ಆ ನಗು ಕಣ್ಣೆದುರಿಗೆ ಹಾಗೆ ಕಾಣುತ್ತಿದೆ ಮರೆಯಲು ಆಗುತ್ತಿಲ್ಲ ಮತ್ತೆ ಹುಟ್ಟಿ ಬನ್ನಿ ಎನ್ನಲಷ್ಟೇ ಸಾಧ್ಯ.

ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ‌ ಅವರ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ.

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...