41
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿ ಹೊನ್ನೆತಾಳು ಗ್ರಾಮ ಪಂಚಾಯತ್ ಚಂಗಾರು ಗ್ರಾಮದ ಸುಮಾರು 56 ವರ್ಷ ವಯಸ್ಸಿನ ರಮೇಶ ಎನ್ನುವ ವ್ಯಕ್ತಿ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದು ಈತನ ಕಡೆಯವರು ಸ್ಥಳೀಯ ಆಗುಂಬೆ ಠಾಣೆಯಲ್ಲಿ ದೂರು ನೀಡಿದ್ದರು.
ರಮೇಶನ ಕಡೆಯವರು ನೀಡಿದ ದೂರಿನ ಮೇರೆಗೆ ರಮೇಶನನ್ನು ಹುಡುಕಲು ಪ್ರಾರಂಭಿಸಿದ ಪೊಲೀಸರಿಗೆ ಇಂದು ರಮೇಶ ಚಂಗಾರು ಗ್ರಾಮದ ಹೊಸಪೇಟೆಯ ಕಲ್ಲು ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದು.
ಈ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು ಮೂಲತಃ ಕೃಷಿ ಕುಟುಂಬದವನಾದ ರಮೇಶ ಒಂದಷ್ಟು ಬಡ್ಡಿ ವ್ಯವಹಾರವನ್ನು ಮಾಡುತ್ತಿದ್ದ ಎನ್ನಲಾಗುತ್ತಿದೆ.
ಆದರೆ ಈ ಸಾವಿಗೆ ಕಾರಣವೇನು..?! ಬಡ್ಡಿ ವ್ಯವಹಾರ ಮುಳುವಾಯಿತಾ..?! ಅಥವಾ ಸ್ಥಳೀಯರ ಗುಸು– ಗುಸು ಪಿಸು — ಪಿಸು ನಿಜಾನಾ..?! ಪೊಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ….
ರಘುರಾಜ್ ಹೆಚ್ ಕೆ..9449553305…


