Home ಶಿವಮೊಗ್ಗಆರೋಗ್ಯವಿಶಿಷ್ಟವಾಗಿ ನಡೆದ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ ಸಂಭ್ರಮ ಕಾರ್ಯಕ್ರಮ..!

ವಿಶಿಷ್ಟವಾಗಿ ನಡೆದ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ ಸಂಭ್ರಮ ಕಾರ್ಯಕ್ರಮ..!

by EDITOR NEWS WARRIORS
ಮನರಂಜಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನಕ್ಕು ನಗಿಸುವ ಆಟೋಟಗಳು, ಸಮಯ ಪಾಲನೆಗೆ, ಆಹಾರ ವ್ಯರ್ಥ ಮಾಡದಂತೆ ಪ್ರೇರೇಪಿಸುವ ಸ್ಪರ್ಧೆಗಳು, ಅರಿವನ್ನು ಹೆಚ್ಚಿಸುವ ಮಾಹಿತಿ ಕಾರ್ಯಾಗಾರ, ವ್ಯಂಗ್ಯಚಿತ್ರ ಪ್ರದರ್ಶನ, ಆತ್ಮೀಯ ಸನ್ಮಾನಗಳು ಹೀಗೆ ಹತ್ರು ಹಲವು ವಿಶಿಷ್ಟತೆಗಳಿಂದ ಕೂಡಿದ್ದ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ “ಸಂಭ್ರಮ-2025” ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಕೆ ಎಸ್ , ತೀವ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖಾ ಅಧಿಕಾರಿಗಳು ನೌಕರರ ಒತ್ತಡ ನಿರ್ವಹಣೆಗೆ ಸೇವೆಯ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗುವ ಮನೋಲ್ಲಾಸ ತುಂಬುವ ಪರಸ್ಪರ ಸಾಮರಸ್ಯ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಿಕೊಂಡು ಬರುತ್ತಿರುವ ತೀರ್ಥಹಳ್ಳಿ ಆರೋಗ್ಯ ಇಲಾಖಾ ನೌಕರರ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾಧ್ಯಕ್ಷ ವೈ ಜಿ ಶಶಿಕುಮಾರ್ ಮಾತನಾಡಿ ತೀರ್ಥಹಳ್ಳಿ ತಂಡದ ಸಂಘಟನಾತ್ಮಕ ಚಟುವಟಿಕೆಗಳು, ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಸಂಘಟಿಸುವ ಶಿಸ್ತು, ಕಾಳಜಿ ಉತ್ಸಾಹಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಆರೋಗ್ಯ ಇಲಾಖಾ ಸಂಘದ ರಾಜ್ಯ ಸಲಹೆಗಾರ ಮ ಸ ನಂಜುಂಡಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆ ಎರಡನೇ ಬಹುದೊಡ್ಡ ಇಲಾಖೆ. ಆದರೆ ಇಲ್ಲಿನ ಅಧಿಕಾರಿ ಸಿಬ್ಬಂದಿಗಳ ಸಮಸ್ಯೆಗಳೇನು ಎಂಬುದನ್ನ ಗಮನಿಸಿದೆ ಅದನ್ನು ಪರಿಹರಿಸದೇ ಕೇವಲ ಲೋಪಗಳನ್ನೇ ದೊಡ್ಡದಾಗಿ ಬಿಂಬಿಸುವ ಪ್ರವೃತ್ತಿಗಳು ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಮನೋಸ್ಥೈರ್ಯವನ್ನೇ ಕಸಿಯುತ್ತಿದೆ.ಅವರ ಸಮಸ್ಯೆಗಳನ್ನೂ ಕೇಳುವಂತಾಗಬೇಕು. ಇಲಾಖೆಯ ಉನ್ನತ ಅಧಿಕಾರಿಗಳು ಪ್ರತೀ ವರ್ಷವೂ ರಾಜ್ಯಾಧ್ಯಂತ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಲ್ಲಿ ಉತ್ಸಾಹ ತುಂಬುವ ಕಾರ್ಯವನ್ನೂ ಮಾಡಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಅಧ್ಯಕ್ಷ ಟಿ ವಿ ಸತೀಶ, ಆರೋಗ್ಯ ಇಲಾಖೆಯ ವರ್ಷಾವದಿ ಹಬ್ಬದಂತೆ ಸಂಭ್ರಮವನ್ನು ಸಾಮಾಜಿಕ ಮತ್ತು ಪರಿಸರಾತ್ಮಕ ಕಾಳಜಿಗಳೊಂದಿಗೆ ನಿರಂತರವಾಗಿ ಸಂಘಟಿಸಲಾಗುತ್ತಿದೆ. ಇದರ ಯಶಸ್ಸಿಗೆ ಇಲಾಖೆಯ ಎಲ್ಲಾ ಅಧಿಕಾರಿ, ನೌಕರರ ಸಹಕಾರ ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತನ್ ಇಲಾಖೆಯ ಕಾಯಕಲ್ಪ ಮತ್ತು ಎನ್ ಕ್ಯು ಎ ಎಸ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಸತತ ಮೂರು ವರ್ಷಗಳಿಂದ ಕಾರ್ಯಕ್ರಮದ ಸ್ವಾದಿಷ್ಟ ಭೋಜನ ವ್ಯವಸ್ಥೆಯ ಪ್ರಾಯೋಜಕತ್ವ ವಹಿಸುತ್ತಿರುವ ಸಂಘದ ಕಾರ್ಯಾಧ್ಯಕ್ಷೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್ ರವರನ್ನು ಕೃತಜ್ಞತೆಯಿಂದ ಗೌರವಿಸಲಾಯಿತು.
ತೊಂಬತ್ತೆರಡರ ಹರೆಯದ ನಿವೃತ್ತ ಶುಶ್ರೂಷಣಾಧಿಕಾರಿ ಜೆನ್ನಿಬಾಯಿ, ಎಂಬತ್ತೆಂಟರ ಹರೆಯದ ನಿವೃತ್ತ ಶಿಕ್ಷಕ, ಕಲಾವಿದ ಗೇರ್ ಗಲ್ ಚಂದ್ರಮೌಳೇಶ್ವರ ಭಟ್, ಮಂಕುತಿಮ್ಮನ ಕಗ್ಗದ ಅಭಿಮಾನಿ, ವಿಶಿಷ್ಟವಾಗಿ ಹಾಡುವ ಕೆಂಜಿಗುಡ್ಡೆ ಮುಕುಂದ, ಹಿರಿಯ ಶ್ರಮ ಜೀವಿ ಬೊಮ್ಮರಸಯ್ಯನ ಅಗ್ರಹಾರದ ನಾರಾಯಣ ಶೆಟ್ಟಿ , ತೀರ್ಥಹಳ್ಳಿ ರಕ್ತ ನಿಧಿಯ ಅರುಣ್ ರವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ನೈಂಟಿಗೇಲ್ ಪ್ರಶಸ್ತಿ ಪುರಸ್ಕೃತ ಜೆ ಸಿ ಆಸ್ಪತ್ರೆಯ ಮೇಟ್ರನ್ ಜಯಲಕ್ಷ್ಮಿ, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರಾದ ಪ್ರಾ ಆ ಸುರಕ್ಷಾಧಿಕಾರಿ ಭವ್ಯ, ಶುಶ್ರೂಷಣಾಧಿಕಾರಿ ಶೈಲಾ, ಪ್ರತಿಷ್ಡಿತ ಏಮ್ಸ್ ಸಂಸ್ಥೆಗೆ ಆಯ್ಕೆಯಾದ ಪ್ರತಿಭಾನ್ವಿತ ಶುಶ್ರೂಷಣಾಧಿಕಾರಿ ಕೈಲಾಶ್ ರನ್ನು ಅಭಿನಂದಿಸಲಾಯಿತು.
ವಯೋ ನಿವೃತ್ತಿ ಹೊಂದಿದ ಜೆ ಸಿ ಆಸ್ಪತ್ರೆಯ ಹಿರಿಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ದೇವಪ್ರಸಾದ್ ಮತ್ತಿತರ ಸಿಬ್ಬಂದಿಗಳನ್ನು ಆಶಾ ಕಾರ್ಯಕರ್ತೆಯರನ್ನು, ಮಾದರಿ ಗುತ್ತಿಗೆ,ಹೊರಗುತ್ತಿಗೆ ನೌಕರರನ್ನು ಗೌರವಿಸಲಾಯಿತು. ನೂತನವಾಗಿ ತಾಲ್ಲೂಕಿಗೆ ಆಗಮಿಸಿದ ವೈದ್ಯಾಧಿಕಾರಿ ಸಿಬ್ಬಂದಿಗಳನ್ನು ಸ್ವಾಗತಿಸಲಾಯಿತು. ಸಂಘದ ಕಾರ್ಯಚಟುವಟಿಕೆಗಳಿಗೆ ತುಂಬು ಸಹಕಾರ ನೀಡುತಿದ್ದ ನಿವೃತ್ತ ಹಿರಿಯ ಸಹೋದ್ಯೋಗಿಗಳನ್ನು ಸ್ಮರಿಸಲಾಯಿತು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಸಂಘದ ಕಾರ್ಯಾಧ್ಯಕ್ಷೆ ಗೀತಾ ಎಲ್, ಕಾರ್ಯದರ್ಶಿ ಈಶ್ವರ, ಖಜಾಂಚಿ ರಾಘವೇಂದ್ರ ಸಿ ಡಿ, ಸಾಗರ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಲೋಹಿತ್, ಜೆ ಸಿ ಆಸ್ಪತ್ರೆಯ ಮೇಟ್ರನ್ ಶಿವಿಗಂಗಮ್ಮ ವೇದಿಕೆಯಲ್ಲಿದ್ದರು.
ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಖ್ಯಾತ ವ್ಯಂಗಚಿತ್ರಕಾರ ಮೇಗರವಳ್ಳಿ ಸುಬ್ರಮಣ್ಯರ ಆಕರ್ಷಕ ವ್ಯಂಗ್ಯ ಚಿತ್ರ ಪ್ರದರ್ಶನವಿತ್ತು. ಪ್ಲಾಸ್ಟಿಕ್ ಮುಕ್ತ ಸ್ವಾದಿಷ್ಟ ಭೋಜನ ವ್ಯವಸ್ಥೆ ಇತ್ತು.
ತಾಲ್ಲೂಕಿನ ವಿವಿಧ ಸಂಸ್ಥೆಗಳ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಮೀಳ ಪ್ರಾರ್ಥಿಸಿ, ಗುರುಪ್ರಸಾದ್ ಸ್ವಾಗತಿಸಿ, ವಿನಾಯಕ ವಂದಿಸಿದರು.ಲಕ್ಷ್ಮೀ ಶ್ರೀಕಾಂತ್ ಮತ್ತು ವೇದಾಶ್ರೀ ಸೊಗಸಾಗಿ ನಿರೂಪಿಸಿದರು.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!