Home ಶಿವಮೊಗ್ಗShivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್ಯಾರೆ ಎನ್ನದ ಆಡಳಿತ ಮಂಡಳಿ..!

Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್ಯಾರೆ ಎನ್ನದ ಆಡಳಿತ ಮಂಡಳಿ..!

by EDITOR NEWS WARRIORS
0 comments
Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್ಯಾರೆ ಎನ್ನದ ಆಡಳಿತ ಮಂಡಳಿ..!

ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂಬರ್ 21 ರೆವಿನ್ಯೂ ವಾರ್ಡ್ ನಂಬರ್ 31 ಮಿಷನ್ ಕಾಂಪೌಂಡ್ ನಲ್ಲಿರುವ ಸಮುದಾಯ ಭವನದ ಹಿಂಭಾಗದಲ್ಲಿ ಸಂತ ಥಾಮಸ್ ಆಡಳಿತ ಮಂಡಳಿ ಕ್ರಾಸ್ ಸ್ತಂಭಗಳನ್ನು ನಿರ್ಮಾಣ ಮಾಡಿದ್ದು ಈ ಜಾಗ ವಿವಾದದ ಕೇಂದ್ರ ಬಿಂದುವಾಗಿದೆ.
ಏಕೆಂದರೆ ಇದೇ ಜಾಗದ ಹತ್ತಿರ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇದ್ದಕ್ಕಿದ್ದಂತೆ ಜಾಗವನ್ನು ಉಳಿಸಿಕೊಳ್ಳುವ ನೆಪದಲ್ಲಿ ಅನಧಿಕೃತವಾಗಿ ಕ್ರಾಸ್ ಸ್ತಂಭಗಳ ನಿರ್ಮಾಣ ಮಾಡಿದ್ದು ಈಗ ದೊಡ್ಡ ಮಟ್ಟದ ಸುದ್ದಿಯಾಗಿದ್ದು ಕ್ರಿಶ್ಚಿಯನ್ ಸಮುದಾಯದ ಹಲವರು ಈ ನಡವಳಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ.
ತಿಳುವಳಿಕೆ ಪತ್ರ ಕೊಟ್ಟು ಸುಮ್ಮನಾಗಿರುವ ಮಹಾನಗರ ಪಾಲಿಕೆ..!
ಇಲ್ಲಿ ಇದ್ದಕ್ಕಿದ್ದಕ್ಕೆ ರಾತ್ರೋರಾತ್ರಿ ಅನಧಿಕೃತವಾಗಿ ಕ್ರಾಸ್ ಸ್ತಂಭಗಳ ನಿರ್ಮಾಣ ಮಾಡಿದ್ದು ಅದಕ್ಕೆ ಪೂರಕವಾಗಿ ಕಟ್ಟಡಕ್ಕೆ ಬೆಡ್ ಕಾಂಕ್ರೀಟ್ ಹಾಕಿ ಹಳೆಯ ಮನೆಯನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡುತ್ತಿರುವುದು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಾಗ ಅವರು ಇವರಿಗೆ ತಿಳುವಳಿಕೆ ಪತ್ರ ನೀಡಿ ಯಾವುದೇ ರೀತಿಯ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕ್ರಾಸ್ ಸ್ತಂಭಗಳನ್ನು ನಿರ್ಮಾಣ ಮಾಡಿದ್ದು ಸರಿಯಲ್ಲ ಇದನ್ನು ತೆರವುಗೊಳಿಸಬೇಕು ಹಾಗೂ ಪರವಾನಿಗೆ ಪಡೆಯದೆ ರಾತ್ರೋರಾತ್ರಿ ಹಳೆ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಿರುವ ಹೊಸ ಕಟ್ಟಡದ ಭಾಗವನ್ನು ಮತ್ತು ಅದಕ್ಕೆ ಕಟ್ಟಿರುವ ಕಾಂಪೌಂಡ್ ಅನ್ನು ತೆರವುಗೊಳಿಸಿ ಸದರಿ ಆಸ್ತಿಗೆ ಸಂಬಂಧಪಟ್ಟಂತ ಸಂಪೂರ್ಣ ದಾಖಲೆಗಳು ತಮ್ಮ ಮಾಲೀಕತ್ವದಲ್ಲಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಪರವಾನಿಗೆಗಳನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದ್ದರು.

 

ಪಾಲಿಕೆಯ ಪತ್ರಗಳಿಗೆ ಕ್ಯಾರೆ ಎನ್ನದ ಆಡಳಿತ ಮಂಡಳಿ ..!
ಮಹಾನಗರ ಪಾಲಿಕೆ ಕೂಡ ನಿರಂತರವಾಗಿ ಪತ್ರಗಳನ್ನು ತಲುಪಿಸಿದರೂ ಕೂಡ ಆ ಪತ್ರಗಳಿಗೆ ಉತ್ತರಿಸದೆ ಯಾವುದೇ ದಾಖಲಾತಿಗಳನ್ನು ಹಾಜರಿಪಡಿಸದೆ ನಿರ್ಲಕ್ಷ ತೋರಿದ್ದು  ಆಡಳಿತ ಮಂಡಳಿಯವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ತಾತ್ಕಾಲಿಕ ಆಜ್ಞೆಗೆ ಮುಂದಾದ ಪಾಲಿಕೆ..!
ನಿರಂತರ ತಿಳುವಳಿಕೆ ಪತ್ರಗಳನ್ನು ನೀಡಿದ್ದರು ಕೂಡ ಕ್ರಮಗಳನ್ನು ಕೈಗೊಳ್ಳದಿರುವ ನಿರ್ಲಕ್ಷ ತೋರಿರುವ ಆಡಳಿತ ಮಂಡಳಿಯ ವಿರುದ್ಧ ಪಾಲಿಕೆ ಪೌರ ನಿಗಮಗಳ ಕಾಯಿದೆ 1976ರ ಪ್ರಕಾರ ತಾತ್ಕಾಲಿಕ ಆಜ್ಞೆಗೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅನಧಿಕೃತವಾಗಿ ನಿರ್ಮಿಸಿರುವ ಕ್ರಾಸ್ ಸ್ತಂಭಗಳನ್ನು ತೆರವುಗೊಳಿಸುತ್ತಾ ಸಂತ ಥಾಮಸ್ ಸಮುದಾಯ ಭವನದ ಆಡಳಿತ ಮಂಡಳಿ..!
ಒಂದು ಕಡೆ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಇನ್ನೊಂದು ಕಡೆ ಆ ಜಾಗವನ್ನು ಉಳಿಸಿಕೊಳ್ಳಲು ಈ ರೀತಿ ಇದ್ದಕ್ಕಿದ್ದ ಹಾಗೆ ಆಡಳಿತ ಮಂಡಳಿಯವರು ಕ್ರಾಸ್ ಸ್ತಂಭಗಳನ್ನು ನಿರ್ಮಾಣ ಮಾಡಿರುವುದು ಕ್ರಿಶ್ಚಿಯನ್ ಸಮುದಾಯದ ಪ್ರಭುದ್ಧರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಾಗ ಉಳಿಸಿಕೊಳ್ಳಲು ಕೃತಕ ಸ್ಮಶಾನ ನಿರ್ಮಾಣ ಮಾಡಿರುವ ತಂತ್ರ ಸರಿಯಲ್ಲ ಎನ್ನುವುದು ಇವರ ವಾದ,
ಪಾಲಿಕೆಯ ತಿಳುವಳಿಕೆ ಪತ್ರಕ್ಕೆ ಬೆಲೆ ನೀಡಿ ಸಂತ ಥಾಮಸ್ ಆಡಳಿತ ಮಂಡಳಿಯವರು ಈ ಅನಧಿಕೃತ ಕೃತಕ ಸ್ಮಶಾನಗಳನ್ನು ಕ್ರಾಸ್ ಸ್ತಂಭಗಳನ್ನು ತೆರವುಗೊಳಿಸುತ್ತಾರ .? ಇದಕ್ಕೆ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುತ್ತಾರಾ..? ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಡದೆ ಸಮಸ್ಯೆ ಬಗೆಹರಿಯುತ್ತಾ..? ಕಾದು ನೋಡಬೇಕು…
ರಘುರಾಜ್ ಹೆಚ್ ಕೆ.. 9449553305…

Related Articles

Latest news
Shivamogga Big news : ವಿವಾದಿತ ಸ್ಥಳದಲ್ಲಿ (ಕೃತಕ ಸ್ಮಶಾಣ) ಕ್ರಾಸ್ ಸ್ತಂಭಗಳ ನಿರ್ಮಾಣ..! ಪಾಲಿಕೆಯ ಪತ್ರಗಳಿಗೆ ಕ್... ಶಿವಮೊಗ್ಗವನ್ನು ‘ಟೂರಿಸಂ ಹಬ್’ ಆಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರಿಗೆ ಮಲೆನಾಡು ಪ್ರದೇಶ ಅಭಿ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..!