Wednesday, April 30, 2025
Google search engine
Homeರಾಜ್ಯಕಮಲ್ ಪಂತ್ ಔಟ್ ಪ್ರತಾಪ್ ರೆಡ್ಡಿ ಇನ್ ..!!ವರ್ಗಾವಣೆಗೆ ಪ್ರಮುಖ ಕಾರಣಗಳೇನು..?

ಕಮಲ್ ಪಂತ್ ಔಟ್ ಪ್ರತಾಪ್ ರೆಡ್ಡಿ ಇನ್ ..!!ವರ್ಗಾವಣೆಗೆ ಪ್ರಮುಖ ಕಾರಣಗಳೇನು..?

ಪ್ರತಾಪ್ ರೆಡ್ಡಿ..

ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಅವರನ್ನು ರಾಜ್ಯ ಸರ್ಕಾರ ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ಜಾಗಕ್ಕೆ ನೂತನ ಕಮಿಷನರ್ ಆಗಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆಗಿದ್ದ ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿಲಾಗಿದೆ.

ಹಲವು ದಿನಗಳ ಅನುಮಾನಗಳಿಗೆ ತೆರೆಎಳೆದ ಸರ್ಕಾರ::

ಚಂದ್ರು ಪ್ರಕರಣದಲ್ಲಿ ಕಮಲ್ ಪಂತ್ ಹಾಗೂ ಗೃಹ ಸಚಿವರ ಹೇಳಿಕೆ ನಡುವೆ ವ್ಯತ್ಯಾಸ ಕಂಡು ಆ ಸಮಯದಲ್ಲಿಯೇ ಕಮಲ್ ಪಂತ್ ವರ್ಗಾವಣೆ ಆಗಬೇಕೆಂದು ಆಡಳಿತ ಪಕ್ಷ ಬಿಜೆಪಿಯಲ್ಲಿ ಹಲವು ನಾಯಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.

ಕೊನೆಗೂ ಕಮಿಷನರ್ ಬದಲಾವಣೆ ಮಾಡಿದ ಸರ್ಕಾರ:

ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ ನಂತರ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿ ಕೊಳ್ಳುತ್ತಿದ್ದರು. ಇದರಿಂದ ಸರ್ಕಾರಕ್ಕೂ ಹಾಗೂ ಕಮಿಷನರ್ ನಡುವೆ ಉತ್ತಮ ಸಂಬಂಧ ಇಲ್ಲಾ ಎನ್ನುವ ಅಂಶ ಬಹಿರಂಗಗೊಂಡಿತ್ತು. ಹಲವು ಸಂದರ್ಭಗಳಲ್ಲಿ ಕಮಿಷನರ್ ಹೇಳಿಕೆ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತ್ತು. ಇದು ಕಮಿಷನರ್ ಬದಲಾವಣೆಗೆ ಪ್ರಮುಖ ಕಾರಣ ಎನ್ನುತ್ತವೆ ಕೆಲವು ಮೂಲಗಳು…

ಪ್ರತಾಪ್ ರೆಡ್ಡಿ ಸ್ಥಾನಕ್ಕೆ ಅಲೋಕ್ ಕುಮಾರ್:

ನೂತನ ಕಮಿಷನರ್ ಆಗಿ ಆಯ್ಕೆಯಾದ ಪ್ರತಾಪ್ ರೆಡ್ಡಿ ಸ್ಥಾನಕ್ಕೆ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಎಸ್ಪಿ ಆಗಿ ಎಂಎಲ್ ಅನುಚೇತ್ ವರ್ಗಾವಣೆ:

ಸಿಐಡಿ ಎಸ್ಪಿ ಆಗಿ ಎಂಎಲ್ ಅನುಚೇತ್ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೆ ಪ್ರಮುಖ ಕಾರಣಗಳು::

ಇತ್ತೀಚಿನ ಕೆಲವು ಪ್ರಕರಣಗಳು, ಕಾನೂನು ಸುವ್ಯವಸ್ಥೆ, ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು, ಓಸಿ ಇಸ್ಪೀಟ್ ಅಂತಹ ಅಕ್ರಮ ದಂಧೆಗಳು ಪೋಲಿಸರ ಉಪಸ್ಥಿತಿಯಲ್ಲಿ ನಡೆಯುತ್ತಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ವನ್ನು ತಂದೊಡ್ಡಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಪ್ರಮುಖ ಕಾರಣವಾಗಿದೆ. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬೆಂಗಳೂರು ನಗರವನ್ನು ಅಪರಾಧ ಚಟುವಟಿಕೆಗಳಿಂದ ಅಕ್ರಮ ಚಟುವಟಿಕೆಗಳಿಂದ ಮುಕ್ತಿ ಮಾಡಲು ಅಪರಾಧಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲು ಈ ಆಂತರಿಕ ವರ್ಗಾವಣೆ ಎನ್ನಲಾಗುತ್ತಿದೆ.ಪತ್ರಿಕೆ ಕೂಡ ಹಿಂದೆ ಚಂದ್ರು ಪ್ರಕರಣ ವಾದಾಗ “ಕಮಲ್ ಪಂತ್ ವರ್ಗಾವಣೆ ಸಾಧ್ಯತೆ” ಎನ್ನುವ ಶಿರೋನಾಮೆಯಡಿಯಲ್ಲಿ ವರದಿ ಪ್ರಕಟಿಸಿತ್ತು ಅದು ಈಗ ನಿಜವಾಗಿದೆ…

ರಘುರಾಜ್ ಹೆಚ್ .ಕೆ …

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305…


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...