Wednesday, April 30, 2025
Google search engine
Homeಶಿವಮೊಗ್ಗಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ಮಹಿಳೆ ಹಾಗೂ ಬಾಲಕಿ...

ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ಮಹಿಳೆ ಹಾಗೂ ಬಾಲಕಿ ನಾಪತ್ತೆ ಪ್ರಕರಣ – ಕೇವಲ 07 ದಿನದಲ್ಲಿ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ – ನಾಪತ್ತೆ ಪ್ರಕರಣ ಸುಖಾ0ತ್ಯ – ನಾಪತ್ತೆ ಪ್ರಕರಣ ಶೀಘ್ರದಲ್ಲಿಯೇ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆಯೂ ಪೊಲೀಸ್ ಇಲಾಖೆಯ ಕರ್ತವ್ಯದ ಮೇಲೆ ಅಪಾರ ನಂಬಿಕೆಯೊಂದಿಗೆ ಆಶಾಭಾವನೆ ಮೂಡಿಸಿದೆ..!!

ಕಾರ್ಗಲ್ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ದಿನಾಂಕ 05/06/2022 ರಂದು ಓರ್ವ ಮಹಿಳೆ ಹಾಗೂ ಬಾಲಕಿ ನಾಪತ್ತೆ ದೂರು ಪ್ರಕರಣ ದಾಖಲಾಗಿತ್ತು.

ನಾಪತ್ತೆ ದೂರು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡಲೇ ಬೇಕು ಎಂಬ ಹಠದಿಂದ ಸವಾಲಾಗಿ ಸ್ವೀಕರಿಸಿದ ಸಾಗರ DYSP ರವರಾದ ರೋಹನ್ ಜಗದೀಶ್ ( ASP ) ರವರು ಕೂಡಲೇ ಕಾರ್ಯಪ್ರವತ್ತರಾಗಿ ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಶೀಘ್ರದಲ್ಲಿಯೇ ನಾಪತ್ತೆ ಪ್ರಕರಣ ಭೇದಿಸುವಂತೆ ಸಲಹೆ ಸೂಚನೆ ನೀಡಿದರು.

ಕೂಡಲೇ ನಾಪತ್ತೆ ಪ್ರಕರಣ ಭೇಧಿಸಲು ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರು ಪೊಲೀಸ್ ಸಹ ಸಿಬ್ಬಂದಿಗಳ ತಂಡದೊಂದಿಗೆ ಪತ್ತೆಕಾರ್ಯಕ್ಕೆ ಅಣಿಯಾದರು.

ಕೇವಲ 07 ದಿನಗಳಲ್ಲಿ ನಾಪತ್ತೆ ಪ್ರಕರಣ ಭೇಧಿಸಿ ನಾಪತ್ತೆ ಪ್ರಕರಣ ಸುಖಾ0ತ್ಯಕ್ಕೆ ಬ್ಯಾಕೋಡು ಸುತ್ತಮುತ್ತಲಿನ ಜನತೆ ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಪೊಲೀಸ್ ಇಲಾಖೆಯ ಪೊಲೀಸ್ ಕರ್ತವ್ಯದ ಮೇಲೆ ನಂಬಿಕೆ ಇಮ್ಮಡಿಗೊಳಿಸಿರುವ ಕುರಿತು ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಾಗರ DYSP (ASP ) ಶ್ರೀ ರೋಹನ್ ಜಗದೀಶ್ ” ನಾಪತ್ತೆ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ತಂಡ ರಚನೆ ಮಾಡಿ ನಾಪತ್ತೆ ಪ್ರಕರಣವನ್ನೂ ಪತ್ತೆಗಾಗಿ ಸೂಕ್ತ ಮಾರ್ಗದರ್ಶನ ನೀಡಿದೇವು. ಈ ನಾಪತ್ತೆ ಪ್ರಕರಣವನ್ನೂ ಕೇವಲ 07 ದಿನಗಳಲ್ಲಿ ಪತ್ತೆ ಹಚ್ಚಿ ಸುಖಾ0ತ್ಯಕ್ಕೆ ಕಾರಣರಾದ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...