Thursday, May 1, 2025
Google search engine
Homeರಾಜ್ಯತಾಳಗುಪ್ಪದಲ್ಲಿ ಸರಣಿ ಕಳ್ಳತನ - ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ - ತಾಳಗುಪ್ಪ ರೈಲ್ವೆ...

ತಾಳಗುಪ್ಪದಲ್ಲಿ ಸರಣಿ ಕಳ್ಳತನ – ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ – ತಾಳಗುಪ್ಪ ರೈಲ್ವೆ ನಿಲ್ದಾಣವೇ ಕೊನೆಯ ನಿಲ್ದಾಣವಾಗಿರುವುದೇ ನೇರ ಕಾರಣ – ಮೂರನೇ ಕಣ್ಣು (C. C. CAMERA ) ಗಳನ್ನೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸದೇ ಇರುವುದೇ ಸರಣಿ ಕಳ್ಳತನಕ್ಕೆ ರಹದಾರಿ..!! ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕಳ್ಳ ಯಾರು..? ಬಂಗಾರದ ಅಂಗಡಿಯಲ್ಲಿ ಕದ್ದ ಬಂಗಾರ ವೆಷ್ಟು.. ?

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಪೇಟೆಯಲ್ಲಿ ನಿರಂತರ ಸರಣಿ ಕಳ್ಳತನ ನೆಡೆಯುತ್ತಿದ್ದೂ, ಪೊಲೀಸ್ ಇಲಾಖೆಯೂ ಕಳ್ಳರಿಗೆ ಬಲೆ ಬೀಸುವಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.

ಸರಣಿ ಕಳ್ಳತನ ಹಿಂದೇ ತಾಳಗುಪ್ಪದಲ್ಲಿ ಕೊನೆಯ ರೈಲ್ವೆ ನಿಲ್ದಾಣವಾಗಿರುವುದೇ ಪ್ರಮುಖ ಕಾರಣವಾಗಿದೆ. ರಾತ್ರಿ ಸುಮಾರು 10:00 ಗಂಟೆಯಿಂದ 11:00 ಗಂಟೆ ಒಳಗೆ ಬರುವ ಬೆಂಗಳೂರು ರೈಲು ಇದೆ ರೈಲು ಮುಂಜಾನೆ 05:00 ಗಂಟೆಗೆ ಪುನಃ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುತ್ತದೆ. ಏತನ್ಮಧ್ಯೆ ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಬರುವ ಕಳ್ಳರು ತಾಳಗುಪ್ಪ ಪೇಟೆಯಲ್ಲಿನ ಅಂಗಡಿಗಳನ್ನೂ ಸರಣಿ ಕಳ್ಳತನ ಮಾಡಿ ಅಂಗಡಿಗಳನ್ನೂ ದೋಚಿ ಮುಂಜಾನೆ 05:00 ಗಂಟೆಗೆ ಹೊರಡುವ ರೈಲಿಗೆ ಹೋಗುತ್ತಿದ್ದಾರೆ.

ನಿನ್ನೆ ರಾತ್ರಿಯೂ ಸಹ ತಾಳಗುಪ್ಪ ಪೇಟೆಯಲ್ಲಿ ಸರಣಿ ಕಳ್ಳತನ ನೆಡೆದಿದ್ದೂ, ಬಂಗಾರದ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಹಸ್ಯ ಕ್ಯಾಮೆರಾದಲ್ಲಿ ಸರಿಯಾದ ಕಳ್ಳ ಯಾರು ?

ಬಂಗಾರದ ಅಂಗಡಿಯಲ್ಲಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುವ ಕಳ್ಳ ಯಾರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗ ವಾಗಬೇಕಾಗಿದೆ…

ಪೊಲೀಸ್ ಇಲಾಖೆಯೂ ಕಳ್ಳತನವಾಗಿರುವ ಸ್ಥಳದಲ್ಲಿದ್ದೂ, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಬೆರಳಚ್ಚುಗಾರರು, ಶ್ವಾನದಳ ಶಿವಮೊಗ್ಗ ನಗರದಿಂದ ಹೊರಟಿರುವ ಮಾಹಿತಿ ದೊರೆತಿದೆ.

ರೈಲ್ವೆ ಅಧಿಕಾರಿಗಳಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಮೂರನೇ ಕಣ್ಣು (C. C. CAMERA ) ಗಳನ್ನೂ ಅಳವಡಿಸುವಂತೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ…9449553305…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...