Home ಶಿವಮೊಗ್ಗಆರೋಗ್ಯತೀರ್ಥಹಳ್ಳಿ : ಹೊನ್ನೆತಾಳು ಗ್ರಾಮದಲ್ಲಿ “”ವೈದ್ಯರ ದಿನದ ಪ್ರಯುಕ್ತ””ಯಶಸ್ವಿಯಾಗಿ ನಡೆದ ಉಚಿತ ರಕ್ತದಾನ ಶಿಬಿರ, ದಂತ ವೈದ್ಯಕೀಯ ತಪಾಸಣೆ, ಆರೋಗ್ಯ ತಪಾಸಣೆ..! ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದ ಡಿವೈಎಸ್ಪಿ ಶಾಂತವೀರ್..!!

ತೀರ್ಥಹಳ್ಳಿ : ಹೊನ್ನೆತಾಳು ಗ್ರಾಮದಲ್ಲಿ “”ವೈದ್ಯರ ದಿನದ ಪ್ರಯುಕ್ತ””ಯಶಸ್ವಿಯಾಗಿ ನಡೆದ ಉಚಿತ ರಕ್ತದಾನ ಶಿಬಿರ, ದಂತ ವೈದ್ಯಕೀಯ ತಪಾಸಣೆ, ಆರೋಗ್ಯ ತಪಾಸಣೆ..! ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದ ಡಿವೈಎಸ್ಪಿ ಶಾಂತವೀರ್..!!

by EDITOR NEWS WARRIORS
0 comments

ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ನಿನ್ನೆ ಅಂದರೆ ದಿನಾಂಕ 03-07-2022 ಭಾನುವಾರ ಬೆಳಿಗ್ಗೆ 11 ಗಂಟೆಗೆ ವೈದ್ಯರ ದಿನದ ಪ್ರಯುಕ್ತ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಮತ್ತು ಉಚಿತ ದಂತ ವೈದ್ಯಕೀಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ,ತಾಲ್ಲೂಕು ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ ,ಗ್ರಾಮ ಪಂಚಾಯಿತಿಯ ಎಲ್ಲ ಸಹಕಾರ ಸಂಘಗಳಿಂದ,ತಾಯಿ ಮನೆ ,ಜೆ ಸಿ ಐ ,ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿತ್ತು.

ಈ ಆರೋಗ್ಯ ಶಿಬಿರದಲ್ಲಿ 150 (ನೂರ ಐವತ್ತು )ಕ್ಕೂಹೆಚ್ಚು ಮಕ್ಕಳು ಮತ್ತು ಹಿರಿಯರನ್ನು ತಪಾಸಣೆ ಮಾಡಿ ಪರೀಕ್ಷಿಸಿ ಚಿಕಿತ್ಸೆಯನ್ನೂ ನೀಡಲಾಯಿತು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 25 ಹೆಚ್ಚು ಜನರು ರಕ್ತದಾನದಲ್ಲಿ ಪಾಲ್ಗೊಂಡು ವಿಶೇಷವಾಗಿ ತಾಲ್ಲೂಕಿನ ಡಿ ವೈ ಎಸ್ಪಿ ಶಾಂತವೀರ್ ಅವರು ರಕ್ತದಾನ ಮಾಡುವುದರ ಮುಖಾಂತರ ಸಮಾಜಕ್ಕೆ ಮಾದರಿಯಾಗಿದ್ದಾರೆ. ಜೇ ಸಿ ಐ ಮತ್ತು ತಾಯಿ ಮನೆಯ ಎಲ್ಲ ಪ್ರಮುಖರು ಸೇರಿ ವೈದ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ವಿಶೇಷವಾಗಿ ಮಕ್ಕಳ ತಜ್ಞರು ಡಾ. ವಿನಾಯಕ ಹೆಗ್ಡೆ ಅಶೋಕ ಸಂಜೀವಿನಿ ಆಸ್ಪತ್ರೆ ಶಿವಮೊಗ್ಗ ,ಅಶೋಕ ಸಂಜೀವಿನಿ ಆಸ್ಪತ್ರೆಯ ಪ್ರಮುಖ ವೈದ್ಯರು ಡಾ.ಹೇಮಂತ್ , ಇನ್ನೋರ್ವ ವೈದ್ಯರಾದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಡಾ.ಸುರೇಶ್ ಮತ್ತು ತೀರ್ಥಹಳ್ಳಿಯ ದಂತವೈದ್ಯೆ ತಜ್ಞರಾದ ಡಾ
ನಂದ ಕಿಶೋರ್ ಇವರು ಪಾಲ್ಗೊಂಡು ಕಾರ್ಯಕ್ರಮವನ್ನು
ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದ ಎಲ್ಲ ಸಂಘಟನೆಯ ಜವಾಬ್ದಾರಿ ತಾಯಿ ಮನೆಯ ಸುದರ್ಶನ್ ಇವರು ನೆರವೇರಿಸಿದರು.ರಕ್ತದಾನ ಶಿಬಿರದ ರೂವಾರಿಗಳು ಹನುಮಂತ ಇವರು ಅಚ್ಚುಕಟ್ಟಾಗಿ ಅವರ ತಂಡದಿಂದ ಕಾರ್ಯವನ್ನು ನಿರ್ವಹಿಸಿದರು.

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...