
ಶಿವಮೊಗ್ಗ: ರಾಷ್ಟ್ರಾದ್ಯಂತ ಇಂದು ಮಹಾತ್ಮ ಗಾಂಧಿ ಜಯಂತಿ ಪ್ರತಿವರ್ಷದಂತೆ ಈ ವರ್ಷವೂ ಸಾಮಾನ್ಯವಾಗಿ ಮಧ್ಯ, ಮಾಂಸ ಮಾರಾಟ ನಿಷೇಧವಾಗಿರುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಎಂದಿನಂತೆ ಮಧ್ಯ ಮಾರಾಟ ನಿರಂತರವಾಗಿ ಬೆಳಿಗ್ಗೆಯಿಂದ ನಡೆಯುತ್ತಿದೆ. ಆದರೆ ವ್ಯತ್ಯಾಸ ಇಷ್ಟೆ ಮುಂಭಾಗದಿಂದ ಅಲ್ಲ ಹಿಂಬಾಗಿಲಿನಿಂದ ಅದರಲ್ಲೂ ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ , ಗಾಜನೂರು, ಮಂಡಗದ್ದೆ ಶಿವಮೊಗ್ಗದ ಕೆಲವೊಂದು ಭಾಗಗಳಲ್ಲಿ ಅಕ್ರಮ ಮಧ್ಯ ಮಾರಾಟ ಯಗ್ಗಿಲ್ಲದೆ ನಡೆಯುತ್ತಿದೆ… ಇದನ್ನು ತಡೆಯಬೇಕಾದ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.. ತೀರ್ಥಹಳ್ಳಿಯಲ್ಲಿ ಸಂತೋಷವಾಗಿ ಅಕ್ರಮ ಮದ್ಯವನ್ನು ಪ್ರತಿದಿನ ತಪ್ಪದೆ ಹಳ್ಳಿಹಳ್ಳಿಗೂ ಸರಬರಾಜು ಮಾಡುವ ವಿಷಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ.. ?? ಮತ್ತು ಕೆಲವು ಬೇರೆ ವಾಹನದಲ್ಲಿ ಮದ್ಯ ಅಕ್ರಮವಾಗಿ ಗ್ರಾಮೀಣ ಪ್ರದೇಶಕ್ಕೆ ನಂದಿನ ಹಾಲು ಬರುವ ಮುಂಚೆಯೇ ಸರಬರಾಜು ಆಗುತ್ತಿದೆ .ಅದು ಅಬಕಾರಿ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ . ತೀರ್ಥಹಳ್ಳಿಯಲ್ಲಿ ಒಬ್ಬನಿದ್ದಾನೆ ಲಂಚಬಾಕ ಅಬಕಾರಿ ಅಧಿಕಾರಿ ಆತನಿಗೆ ಲಂಚ ಕೊಟ್ಟರೆ ಮಧ್ಯದ ಬದಲಿಗೆ ವಿಷ ಮಾರಾಟ ಮಾಡಿದರು ಸುಮ್ಮನಾಗುತ್ತಾನೆ …ಇನ್ನು ಕೆಲವರಿದ್ದಾರೆ ಮಾತನಾಡುವುದು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗುತ್ತದೆ … ಅವರ ಎಲ್ಲ ಅಕ್ರಮಗಳನ್ನು ಜೋಪಾನವಾಗಿ ಸಂಗ್ರಹಿಸಿ ಇಡಲಾಗುತ್ತಿದೆ… ಮಾಡಿದ್ದುಣ್ಣೋ ಮಾರಾಯ….
ರಘುರಾಜ್ ಹೆಚ್.ಕೆ…9449553305….