Tuesday, May 6, 2025
Google search engine
Homeರಾಜ್ಯಜಾನವಾರುಗಳಿಗೆ ಮಿತಿ ಮೀರಿದ ಗಂಟುರೋಗ ಕಾಯಿಲೆ - ತಾಳಗುಪ್ಪ ಜಾನವಾರು ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಗಗನಕುಸುಮ...

ಜಾನವಾರುಗಳಿಗೆ ಮಿತಿ ಮೀರಿದ ಗಂಟುರೋಗ ಕಾಯಿಲೆ – ತಾಳಗುಪ್ಪ ಜಾನವಾರು ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಗಗನಕುಸುಮ – ರೈತರ ಮನವಿಗೆ ಕೂಡಲೇ ಸ್ಪಂದನೆ ನೀಡಿದ ಶಾಸಕ ಕುಮಾರ್ ಬಂಗಾರಪ್ಪ ರವರ ಸರ್ಕಾರಿ ಆಪ್ತ ಸಹಾಯಕ ಉಮೇಶ್ ಗೌಡರ್..!!

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ಹಾಗೂ ತಾಳಗುಪ್ಪ ಹೋಬಳಿಯ ವ್ಯಾಪ್ತಿಯಲ್ಲಿ ಜಾನವರುಗಳಿಗೆ ಗಂಟು ರೋಗ ಕಾಯಿಲೆ ಮಿತಿಮೀರಿದ್ದು ಇದರಿಂದ ಜಾನವರುಗಳು ತೀವ್ರ ವೇದನೆ ಪಡುತ್ತಿದ್ದೂ, ರೈತರ ಉಪ ಕಸುಬು ಆದ ಹೈನುಗಾರಿಕೆ ತೀವ್ರ ಸಂಕಷ್ಟದಲ್ಲಿದೆ.

ಗೋವು ರಕ್ಷಕರೆಂದು ಮತ ಪಡೆದು ಕೇಂದ್ರ & ರಾಜ್ಯ ಸರ್ಕಾರದ ಅಧಿಕಾರದ ಗದ್ದುಗೆ ಬಿಜೆಪಿ ಸರ್ಕಾರ, ಜಾನವರು ಆಸ್ಪತ್ರೆಗೆ ಪೂರಕವಾದ ಕೊರತೆಯಿರುವ ವೈದ್ಯರು, ನಿರೀಕ್ಷಕರು, ಸಿಬ್ಬಂದಿಗಳನ್ನೂ ನೇಮಕ ಮಾಡದೇ ಮೂಕಪ್ರಾಣಿಗಳಾದ ಜಾನವಾರುಗಳ ಸೇವೆಗೆ ಘನ ಸರ್ಕಾರ ನೇಮಕ ಮಾಡದೇ ಮೂಕರಂತಾದ ಬಿಜೆಪಿ ಸರ್ಕಾರದ ವಿರುದ್ಧ ನೊಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಳಗುಪ್ಪದ ಜಾನವರು ಆಸ್ಪತ್ರೆಯಲ್ಲಿ ವೈದ್ಯರ ಅಲಭ್ಯ ಬಗ್ಗೆ ಮೊಬೈಲ್ ಮೂಲಕ ಜಾನವಾರುಗಳಿಗೆ ಗಂಟು ರೋಗದ ಬಗ್ಗೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ರವರ ಸರ್ಕಾರಿ ಆಪ್ತ ಸಹಾಯಕರಾದ ಉಮೇಶ್ ಗೌಡರ್ ರವರ ಬಳಿ ಮಾಹಿತಿ ತಿಳಿಸಿದಾಗ, ಕೂಡಲೇ ಉತ್ತಮ ಸ್ಪಂದನೆ ನೀಡಿದ ಕುಮಾರ್ ಬಂಗಾರಪ್ಪ ರವರ ಆಪ್ತ ಸಹಾಯಕ ಉಮೇಶ್ ಗೌಡರ್ ತಾಳಗುಪ್ಪ ಜಾನವರು ಆಸ್ಪತ್ರೆಗೆ ನಿಯೋಜನೆ ಮಾಡಿದ ವೈದ್ಯರಿಗೆ ವಾರದಲ್ಲಿ ಎರಡೂ ದಿನವಾದರೂ ತಾಳಗುಪ್ಪ ಜಾನವಾರು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಸಾಗರ ಉಪ ನಿರ್ದೇಶಕರು ಜಾನವರು ವಿಭಾಗದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಮಾಹಿತಿ ನೀಡಿದರು.

ಓಂಕಾರ ಎಸ್. ವಿ. ತಾಳಗುಪ್ಪ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!