Thursday, May 8, 2025
Google search engine
Homeರಾಜ್ಯNews warriors exclusive news: ತೀರ್ಥಹಳ್ಳಿ ಮೇಲಿನ ಕುರುವಳ್ಳಿಯಲ್ಲಿ ನಿಲ್ಲುತ್ತಿಲ್ಲ ಅಕ್ರಮ ಕಲ್ಲುಗಣಿಗಾರಿಕೆ..! ಇದರಲ್ಲಿ ಇದಿಯಾ...

News warriors exclusive news: ತೀರ್ಥಹಳ್ಳಿ ಮೇಲಿನ ಕುರುವಳ್ಳಿಯಲ್ಲಿ ನಿಲ್ಲುತ್ತಿಲ್ಲ ಅಕ್ರಮ ಕಲ್ಲುಗಣಿಗಾರಿಕೆ..! ಇದರಲ್ಲಿ ಇದಿಯಾ ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ..?! ಇಲ್ಲದಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಸುಮ್ಮನೆ ಕೂತಿರುವುದು ಏಕೆ..?! ಶಿವಮೊಗ್ಗದಲ್ಲಿ ದಕ್ಷ,ಪ್ರಾಮಾಣಿಕ, ಖಡಕ್ ಎಸ್ಪಿ ಮಿಥುನ್ ಕುಮಾರ್ ಜಿ ,ಕೆ ಇದ್ದರು ಸ್ಪೋಟಕ ಬಳಸಿ ನಡೆಸುತ್ತಿರುವ ಕಲ್ಲುಗಣಿಗಾರಿಕೆ ನಿಲ್ಲುತ್ತಿಲ್ಲ ಏಕೆ..?!

ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿಯಲ್ಲಿ ನಿರಂತರವಾಗಿ ಅಕ್ರಮವಾಗಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ, ತೀರ್ಥಹಳ್ಳಿಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಕಂಡು ಕಾಣದಂತೆ ಕೇಳಿಸಿಕೊಂಡು ಕೇಳದಂತೆ ಮೌನವಾಗಿ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕೆಲವು ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ ಈ ಗಣಿಗಾರಿಕೆಯಲ್ಲಿ ಇದಿಯಾ ಎನ್ನುವ ಅನುಮಾನ ಹುಟ್ಟಿದೆ..?! ಏಕೆಂದರೆ ಪತ್ರಿಕೆ ನಿರಂತರವಾಗಿ ಈ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವರದಿ ಪ್ರಕಟಿಸುತ್ತಿದ್ದು ಸಾಕ್ಷಿ ಸಮೇತ ವರದಿ ನೀಡಿದ್ದರೂ ಕೂಡ ಇಲ್ಲಿಯವರೆಗೂ ಅಂತ ಕ್ರಮವೇನು ಕೈಗೊಂಡಿಲ್ಲ…

ವರದಿ ಬಂದಾಗ ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಮೇಲಿನ ಅಧಿಕಾರಿಗಳಾದ ಎಸ್ ಬಿ ಅವರು ನಿರ್ದೇಶನ ನೀಡಿದಾಗ ಒಂದಷ್ಟು ಆ ಕಡೆ ಹೋಗಿಬಂದು ಹೆದರಿಸಿ ,ಬೆದರಿಸಿ ಬರುವುದು ಬಿಟ್ಟರೆ ಉಳಿದಂತೆ ಯಾವುದೂ ನಿಂತಿಲ್ಲ. ನಿರಂತರವಾಗಿ ರಾತ್ರಿ ಮತ್ತು ಬೆಳಗಿನ ಜಾವ ಸ್ಪೋಟಕ ಬಳಸಿ ಅಕ್ರಮ ಕಲ್ಲುಗಾಣಿಗಾರಿಕೆ ನಡೆಸುತ್ತಿದ್ದಾರೆ.

ಇದರ ಸದ್ದು ತೀರ್ಥಹಳ್ಳಿಯ ಪಟ್ಟಣದ ತುಂಬಾ ಕೇಳಿಸುತ್ತದೆ ಕಲ್ಲುಗಣಿಗಾರಿಕೆಯ ಸಮೀಪ ವಾಸಿಸುವ ಮನೆಗಳ ಹತ್ತಿರ ಕೇಳಿ ವಿಚಾರಿಸಿದರೂ ಕೂಡ ಹೇಳುತ್ತಾರೆ.. ಆದರೂ ಪಾಪ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಕ್ಷ ಅಧಿಕಾರಿಗಳಿಗೆ ಹಾಗೂ ತೀರ್ಥಹಳ್ಳಿಯ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಯಾಕೋ ಕೇಳಿಸುತ್ತಿಲ್ಲ..

ಶಿವಮೊಗ್ಗದಲ್ಲಿ ದಕ್ಷ ಪ್ರಾಮಾಣಿಕ ಖಡಕ್‌ ಅಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಇದ್ದರೂ ಕೂಡ ಏಕೋ ತೀರ್ಥ‌ಹಳ್ಳಿಯ ಅಕ್ರಮ ಕಲ್ಲು ಗಣಿಗಾರಿಕೆ ಇಲ್ಲಿವರೆಗೂ ನಿಯಂತ್ರಣಕ್ಕೆ ಬರುತ್ತಿಲ್ಲ..

ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗಕ್ಕೆ ಬಂದು ಚಾರ್ಜ್ ತೆಗೆದುಕೊಂಡ ನಂತರ ಇಲ್ಲಿಯವರೆಗೂ ಹಲವು ಅಕ್ರಮಗಳನ್ನು ತಡೆಗಟ್ಟಿದ್ದಾರೆ. ಆದರೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿ ಮಾತ್ರ ಈ ಅಕ್ರಮ ಕಲ್ಲು ಗಣಿಗಾರಿಕೆ ಅದರಲ್ಲೂ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಇಲ್ಲಿಯವರೆಗೂ ತಡೆಗಟ್ಟಲು ಆಗುತ್ತಿಲ್ಲ…

ಸ್ಪೋಟಕ ಬಳಸದೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ ಅದೆಲ್ಲ ಕಟ್ಟುಕಥೆ…

ಇನ್ನು ಮುಂದಾದರೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲುತ್ತಾ ಕಾದುನೋಡಬೇಕು…. ಪತ್ರಿಕೆ ಮಾತ್ರ ನಿರಂತರವಾಗಿ ವರದಿ ಪ್ರಕಟಿಸುತ್ತಲೇ ಇರುತ್ತದೆ …

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Latest news
ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ....