Wednesday, April 30, 2025
Google search engine
Homeರಾಜ್ಯಕಾಂತೇಶ್ ಏನು ಸ್ಪೆಷಲ್ ಅಲ್ಲ  - ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ*

ಕಾಂತೇಶ್ ಏನು ಸ್ಪೆಷಲ್ ಅಲ್ಲ  – ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ*

ಶಿವಮೊಗ್ಗ : ಹಾವೇರಿ ಗದಗ ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ಟಿಕೆಟ್ ಆಕಾಂಕ್ಷಿಯಾದ  ಕೆ.ಈ ಕಾಂತೇಶ್ ಬಿರುಸಿನ ಕ್ಷೇತ್ರ ಪ್ರವಾಸದಲ್ಲಿದ್ದಾರೆ.
ಈ ಬಗ್ಗೆ ಇಂದು ಬೊಮ್ಮನ ಕಟ್ಟೆ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಜನರು ಪಕ್ಷದ ಕಾರ್ಯಕರ್ತರು ಕಾಂತೇಶ್ ಈ ಬಾರಿ ಸ್ಪರ್ಧೆ ಮಾಡಲಿ ಎಂದು ಬಯಸಿದ್ದಾರೆ. ಆ ಕ್ಷೇತ್ರದ ಎಲ್ಲಾ ಸಮುದಾಯದ ಮಠಾಧಿಶರುಗಳು ಕಾಂತೇಶ್ ಗೆ ಆಶೀರ್ವಾದ ಮಾಡಿದ್ದಾರೆ. ಹಾಗೆಯೇ ಕೆಲವರು ಕೂಡ ಲೋಕಸಭೆಗೆ ಸ್ಪರ್ಧೆ ಮಾಡಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಕಾಂತೇಶ್ ಕೂಡ ಒಬ್ಬ ಆಕಾಂಕ್ಷಿ ಅಷ್ಟೆ ಅವರೇನು ಸ್ಪೆಷಲ್ ಅಲ್ಲ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

ಸಂಭ್ರಮದ ಖರ್ಚನ್ನು ಲೆಕ್ಕ ಹಾಕೋದು ಕಾಂಗ್ರೆಸ್ ನ ಮುಟ್ಠಾಳತನ.

ಮನೆಯ ಮಗನೊಬ್ಬ ಫಸ್ಟ್ ರ್ಯಾಂಕ್ ಬಂದಾಗ ತಂದೆ ಮಗನಿಗೆ ಸಿಹಿ ತಿನಿಸುತ್ತಾನೆ ಆಗ ಸಿಹಿ ಖರ್ಚಿನ ಬಗ್ಗೆ ಲೆಕ್ಕ ಹಾಕೋದು ಮುಟ್ಠಾಳತನ ಇದ್ದಂತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇಸ್ರೋ ಚಂದ್ರಯಾನದ – 3 ಯಶಸ್ಸಿನಿಂದ ಭಾರತದ ಕೀರ್ತಿ ಉನ್ನತ ಸ್ಥಾನಕ್ಕೆ ಹೋಗಿದೆ. ಭಾರತೀಯ ಸಂಸ್ಕೃತಿ, ಧರ್ಮವು ವಿಶ್ವದ ಗಮನ ಸೆಳೆಯುತ್ತಿರವುದು ಒಂದೆಡೆಯಾದರೆ ವಿಜ್ಙಾನ ಮತ್ತೊಂದೆಡೆ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ.

ಚಂದ್ರಯಾನದ-3 ಉಡಾವಣೆಗೆ ಸುಮಾರು 615 ಕೋಟಿ ವೆಚ್ಚವಾಗಿದೆ. ವಿಕ್ರಮ್ ಚಂದ್ರನ ಮೇಲೆ ಕಾಲಿಟ್ಟ ಯಶಸ್ಸನ್ನು ಭಾರತೀಯರು ವಿಶ್ವದೆಲ್ಲೆಡೆ ಸಂಭ್ರಮಿಸಿದ್ದಾರೆ. ಪ್ರಧಾನಿ ಮೋದಿಯವರು ವಿಜ್ಙಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ ಕಾಂಗ್ರೆಸ್ ಪಕ್ಷ ಸಿಹಿ ಹಂಚುವ ಸಮಯದಲ್ಲಿ ಖರ್ಚಿನ ಬಗ್ಗೆ ಮಾತನಾಡಿ ಮುಟ್ಠಾಳತನ ಪ್ರದರ್ಶಿಸಿದೆ ಎಂದರು.

ವರದಿ: ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...