Wednesday, April 30, 2025
Google search engine
Homeರಾಜ್ಯಅವರ ಟೀಮ್ ನಲ್ಲಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತೀಯರಿದ್ದಾರೆ - ಡಿ.ಎಸ್ ಅರುಣ್.

ಅವರ ಟೀಮ್ ನಲ್ಲಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತೀಯರಿದ್ದಾರೆ – ಡಿ.ಎಸ್ ಅರುಣ್.

ಶಿವಮೊಗ್ಗ : ರಾಜ್ಯ ಸರ್ಕಾರ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಪರಿಷತ್ ಸದಸ್ಯ ಡಿ.ಎಸ್ ಅರುಣ್ ತಿಳಿಸಿದ್ದಾರೆ.

ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಎಸ್ ಅರುಣ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲಾ ಮಕ್ಕಳ ಪಠ್ಯದಲ್ಲಿ ಇದ್ದಂತಹ ಚಕ್ರವರ್ತಿ ಸೂಲಿಬೆಲೆ, ಡಾ.ಹೆಡಗೆವಾರ್ ಮತ್ತು ಶತಾವಧಾನಿ ಗಣೇಶ್ ರವರು ಬರೆದಿರುವಂತ ಪಠ್ಯಗಳನ್ನು ತೆಗೆದು ಹಾಕಿ ಸಂಭ್ರಮಿಸಿದ್ದಾರೆ ಈ ಮೂಲಕ ಸಿದ್ಧರಾಮಯ್ಯ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.


ತೆಗೆದು ಹಾಕಲಾದ ಪಠ್ಯವನ್ನು ಬರೆದವರು ತಮ್ಮ ಬದುಕಿನ ಬಗ್ಗೆ ಬರೆದುಕೊಂಡಿಲ್ಲ ಬದಲಾಗಿ ದೇಶ ಭಕ್ತರ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಸಿದ್ದರು. ಇಂದಿನ ಮಕ್ಕಳಿಗೆ ಭಗತ್ ಸಿಂಗ್, ಸುಖದೇವ್,ರಾಜಗುರು, ಸಾವಿತ್ರಿ ಬಾಯಿ ಪುಲೆಯವರ ಬಗ್ಗೆ ಹೇಳಬಾರದ ಎಂದು ಕೇಳಿದ್ದಾರೆ.


ಭೂ ಕೈಲಾಸ ತೆಗೆದು ನೆಹರು ಮಗನಿಗೆ ಬರೆದ ಪತ್ರ ಎಂಬ ಪಾಠ ಸೇರಿದ್ದಾರೆ, ಡಾ.ಹೆಡಗೆವಾರ್  ಬರೆದಿರುವ  ಆದರ್ಶ ಪುರುಷರು ಪಾಠ ತೆಗದು ಉರುಸ್ ಗಳಲ್ಲಿ ಭಾವೈಕ್ಯತೆ ಎಂಬ ಪಾಠ ಸೇರಿಸಿದ್ದಾರೆ ಈ ಮೂಲಕ ಒಂದು ಧರ್ಮದ ಓಲೈಕೆ ಮಾಡಿದ್ದಾರೆ.


ಪಠ್ಯ ಪರಿಷ್ಕರಣೆ ಮಾಡುವ ಮುನ್ನ ಶಿಕ್ಷಣ ತಜ್ಙರ ಸಲಹೆ ಪಡೆದುಕೊಳ್ಳ ಬೇಕು ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿ ಕೂತವರೇ ಶಿಕ್ಷಣ ತಜ್ಙರಂತೆ ವರ್ತಿಸಿದ್ದಾರೆ.
ಸಿದ್ಧರಾಮಯ್ಯ ಟೀಮ್ ನಲ್ಲಿ ಶಿಕ್ಷಣ ತಜ್ಙರ ಬದಲಾಗಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತಿಯ ಸಿದ್ದಾಂತ ಒಪ್ಪರುವ ಎಡ ಪಂಕ್ತೀಯರು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸರ್ಕಾರಿ ಶಾಲೆ ಮಕ್ಕಳು ಏನು ಕೊಟ್ಟರೂ ಓದುತ್ತಾರೆ ಎಂಬ ಮನೋಭಾವನೆ ಯಿಂದ ಹಾಗು ರಾಜ್ಯದ ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸರ್ಕಾರದ ಕೆಲಸವನ್ನು ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು.

ವರದಿ – ವಿನಯ್ ಕುಮಾರ್ವಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...