Wednesday, April 30, 2025
Google search engine
Homeಶಿವಮೊಗ್ಗಮಣ್ಣಿನ ಗಣಪತಿ ಪೂಜಿಸಿ... ವಿಸರ್ಜನೆಗೆ ನಮ್ಮನ್ನು ಸಂಪರ್ಕಿಸಿ - ಎಸ್.ಕೆ ಶೇಷಾಚಲ.

ಮಣ್ಣಿನ ಗಣಪತಿ ಪೂಜಿಸಿ… ವಿಸರ್ಜನೆಗೆ ನಮ್ಮನ್ನು ಸಂಪರ್ಕಿಸಿ – ಎಸ್.ಕೆ ಶೇಷಾಚಲ.

ಶಿವಮೊಗ್ಗ : ವಾಸವಿ ಪಬ್ಲಿಕ್ ಸ್ಕೂಲ್ ವತಿಯಿಂದ ಸೆ.12ರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದು.

ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಾಸವಿ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿನಿ ಹಾಗು ವಾಸವಿ ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷೆ ತನುಶ್ರಿ ಗಣೇಶ ಚತುರ್ಥಿಯ ಅಂಗವಾಗಿ ಕಳೆದ ಎಂಟು ವರ್ಷಗಳಿಂದ ವಾಸವಿ ಪಬ್ಲಿಕ್ ಶಾಲೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದೇವೆ.

ನಮ್ಮಲ್ಲಿ ಪಡೆದ ಗಣಪತಿ ವಿಗ್ರಹಗಳನ್ನು ವಿಸರ್ಜಿಸಲು ಶಾಲೆಯ ಆವರಣದಲ್ಲಿ ಕೃತಕ ಕೆರೆಯನ್ನು ನಿರ್ಮಿಸಿ ಕೊಡಲಾಗುವುದು ಈ ಮೂಲಕ ಪರಿಸರ ಸಂರಕ್ಷಣೆ ಹಾಗು ನದಿಯ ನೈರ್ಮಲ್ಯ ಕಾಪಾಡುವುದು ನಮ್ಮ ಧ್ಯೇಯವಾಗಿದೆ
ಸೆ.12ರಿಂದ ಸಾರ್ವಜನಿಕರು ನಮ್ಮ ವಾಸವಿ ಪಬ್ಲಿಕ್ ನಲ್ಲಿ ದೊರೆಯುವ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಖರೀದಿ ಮಾಡಬಹುದು ಎಂದರು.


ನಂತರ ಮಾತನಾಡಿದ ಶಾಲೆಯ ಕಾರ್ಯದರ್ಶಿ ಎಸ್.ಕೆ ಶೇಷಾಚಲರವರು ನಮ್ಮ ಶಾಲೆಯ ಸುತ್ತ ಮುತ್ತ 500ಕ್ಕೂ ಹೆಚ್ಚು ಮನೆಗಳಿಗೆ ವಿಧ್ಯಾರ್ಥಿಗಳು ಭೇಟಿ ಮಾಡಿ ಮನೆಯಲ್ಲಿ ಇಡಲಾಗುವ ಗಣಪತಿಗಳನ್ನು ಶಾಲೆಯಲ್ಲಿರುವ ಕೃತಕ ಕೆರೆಗಳಲ್ಲಿ ವಿಸರ್ಜನೆ ಮಾಡಲು ಮನವಿ ಮಾಡಿದ್ದಾರೆ.
ಈ ಬಾರಿ ವಿಶೇಷವಾಗಿ ನೂರು ಕುಟುಂಬಗಳು ಒಟ್ಟಾಗಿ ಒಮ್ಮೆಲೆ  ನಾವು ವ್ಯವಸ್ಥೆ ಮಾಡುವ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಲಿದ್ದಾರೆ.


ಗಣಪತಿಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವುದರಿಂದ ನದಿಗೆ ಮಾರಕವಾಗುತ್ತದೆ
ನಮ್ಮ ಕೃತಕ ಕೆರೆಯಲ್ಲಿ ಸಾರ್ವಜನಿಕರು ಬಣ್ಣದ ಗಣಪತಿಗಳನ್ನು ಸಹ ವಿಸರ್ಜಿಸಬಹುದು.
ಮನೆಯಲ್ಲಿ ಇಟ್ಟಂತಹ ಗಣಪತಿಗಳನ್ನು ವಿಸರ್ಜನೆ ಮಾಡಲು ಆಗದೆ ಇರುವವರು ನಮ್ಮನ್ನು ಸಂಪರ್ಕಿಸದರೆ ನಮ್ಮ ವಿಧ್ಯಾರ್ಥಿಗಳು ಬಂದು ನಿಮ್ಮ ಪೂಜಾ ಪದ್ಧತಿಯ ನಂತರ ಗಣಪತಿ ತೆಗೆದುಕೊಂಡು ಬಂದು ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ ಎಂದು ತಿಳಿಸಿದರು.

ಮಣ್ಣಿನ ಗಣಪತಿ ಖರೀದಿ ಮಾಡಲು ಹಾಗು ವಿಸರ್ಜನೆ ಮಾಡಲು 9916514066 ಸಂಖ್ಯೆಗೆ ಕರೆ ಮಾಡಲು ಕೋರಿದ್ದಾರೆ.

ವರದಿ – ವಿನಯ್ ಕುಮಾರ್ ಹೆಚ್.ಎಮ್

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...