Friday, May 2, 2025
Google search engine
Homeರಾಜ್ಯಶಿವಮೊಗ್ಗದಲ್ಲಿ ತಲೆಯೆತ್ತಿರುವ ಅನಧಿಕೃತ ಕಾಲೇಜುಗಳು..!

ಶಿವಮೊಗ್ಗದಲ್ಲಿ ತಲೆಯೆತ್ತಿರುವ ಅನಧಿಕೃತ ಕಾಲೇಜುಗಳು..!

ಶಿವಮೊಗ್ಗ: ನಗರದ ಹೊರವಲಯದ ಶರಾವತಿ ಡೆಂಟಲ್ ಕಾಲೇಜ್ ಪಕ್ಕ ಮಲೆನಾಡು ಕಾಲೇಜ್ ಎನ್ನುವ ಹೆಸರಿನ ಕಾಲೇಜ್ ನೋಂದಾವಣೆಯಾಗಿದ್ದು ಆದರೆ ಅದನ್ನು ದಾವಣಗೆರೆ ಮೂಲದ ಸರ್ ಎಂವಿ ಸಂಸ್ಥೆ ಖರೀದಿಗೆ ತೆಗೆದುಕೊಂಡಿದ್ದು ಅದನ್ನು ಸರ್ ಎಂವಿ ಸಂಸ್ಥೆಯ ಹೆಸರಿನಲ್ಲಿ ನಡೆಸಲು ಶಿಕ್ಷಣ ಇಲಾಖೆಗೆ ಅನುಮತಿಗಾಗಿ ಕೋರಿದೆ.

ಆದರೆ ಸರ್ ಎಂವಿ ಕಾಲೇಜಿಗೆ ಶಿಕ್ಷಣ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಆದರೆ ಇವರು ಈಗಾಗಲೇ ಈ ಕಾಲೇಜಿನ ಹೆಸರಿನಲ್ಲಿ ಬೋರ್ಡ್ ಗಳನ್ನು ಹಾಕಿಕೊಂಡು ಕಾಲೇಜಿಗೆ ಅಡ್ಮಿಶನ್ ಪ್ರಾರಂಭ ಮಾಡಿದ್ದಾರೆ.

ಹಾಗೆ ಕಾಲೇಜಿನ ಹೆಸರಿನಲ್ಲಿ ಜಾಹೀರಾತುಗಳನ್ನು ನೀಡಿದ್ದಾರೆ .

ಇದು ಸರೀನಾ..? ಕಾಲೇಜಿಗೆ ಅನುಮತಿನೆ ಸಿಕ್ಕಿಲ್ಲ ಜಾಹೀರಾತು ನೀಡಲು ಹೇಗೆ ಸಾಧ್ಯ ..?ಹಾಗೂ ಅಡ್ಮಿಶನ್ ತೆಗೆದುಕೊಳ್ಳುವುದು ಹೇಗೆ ಸಾಧ್ಯ..? ಜಾಹೀರಾತು ನೀಡಿರುವ ಬಗ್ಗೆ ಡಿ ಡಿ ಪಿ ಯು ಕೃಷ್ಣಪ್ಪ ಅವರನ್ನು ಪತ್ರಿಕೆ ಮಾತನಾಡಿಸಿದಾಗ ಇದರ ಬಗ್ಗೆ ದಿನಾಂಕ 14/6 /24ರಂದು ನೋಟಿಸ್ ನೀಡಿದ್ದೇವೆ ಆ ನೋಟಿಸ್ ಗೆ ಉತ್ತರ ನೀಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಆ ನೋಟಿಸ್ ಗೆ ಯಾವುದೇ ಉತ್ತರವನ್ನು ಸಂಸ್ಥೆ ನೀಡಿಲ್ಲ ಇದನ್ನು ಮತ್ತೆ ಪರಿಶೀಲಿಸಿ ಮತ್ತೆ ನೋಟಿಸ್ ನೀಡಿ ಕಾನೂನಿನ ನಡೆಯಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೆ ಮುಂದುವರಿದು ಇನ್ನೂ ಪರ್ಮಿಷನ್ನೇ ಸಿಗದೇ ಕಾಲೇಜ್ ಅಡ್ಮಿಶನ್ ಪ್ರಾರಂಭ ಮಾಡಿರುವುದು ಹಾಗೂ ಬೋರ್ಡ್ ಗಳನ್ನು ಹಾಕಿಕೊಂಡಿರುವುದರ ಬಗ್ಗೆ ಕೇಳಿದಾಗ ಅದರ ವಿರುದ್ಧವೂ ಕೂಡ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹೀಗೆ ಹಲವು ಕಾಲೇಜುಗಳು ಶಿವಮೊಗ್ಗದಲ್ಲಿ ತಲೆ ಎತ್ತಿವೆ ಪರ್ಮಿಷನ್ ಇರುವುದು ಬೇರೆ ಸಂಸ್ಥೆಗೆ ಆದರೆ ಕಾಲೇಜ್ ಪ್ರಾರಂಭವಾಗುವುದೆ ಬೇರೆ ಸಂಸ್ಥೆಯ ಹೆಸರಿನಲ್ಲಿ ಇದರ ಬಗ್ಗೆ ಡಿಡಿಪಿಯು ಕಠಿಣ ಕ್ರಮ ತೆಗೆದುಕೊಳ್ಳಬೇಕು ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪತ್ರಿಕೆ ನೀಡಲು ಸಿದ್ದ ಈ ದಂದೆಗೆ ಫುಲ್ ಸ್ಟಾಪ್ ಬೀಳಬೇಕು ಎನ್ನುವುದು ಪತ್ರಿಕೆಯ ಕಳಕಳಿ…

RELATED ARTICLES
- Advertisment -
Google search engine

Most Popular

Recent Comments

Latest news
ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..!