ಕಾಂತರಾ ಚಲನಚಿತ್ರದ ಸಹಕಲಾವಿದ ಒಬ್ಬ ಹೃದಯವಾತದಿಂದ ನಿಧನವಾಗಿದ್ದು ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮಲೆನಾಡಿನಲ್ಲಿ ಚಿತ್ರೀಕರಣ ಬರದಿಂದ ಸಾಗುತ್ತಿದ್ದು ನಟ ರಿಶಭ್ ಶೆಟ್ಟಿ ತೀರ್ಥಳ್ಳಿಯ ಹತ್ತಿರದ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದಾರೆ ಉಳಿದಂತೆ ಕಲಾವಿದರು ತೀರ್ಥಳ್ಳಿಯ ಸುತ್ತಮುತ್ತ ಉಳಿದುಕೊಂಡಿದ್ದು ಕೇರಳ ಮೂಲದ ಸಹಕಲಾವಿದ ಆಗುಂಬೆಯ ಹೋಂಸ್ಟೇ ಒಂದರಲ್ಲಿ ಉಳಿದುಕೊಂಡಿದ್ದ ಆತ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾನೆ.
- ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದ್ದು ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಕಾಂತರಾ ಚಿತ್ರದಂಡಕ್ಕೆ ನಿರಂತರವಾಗಿ ಸಂಕಷ್ಟಗಳು ಎದುರಾಗುತ್ತಿದ್ದು ದೈವ ಮೂಲದ ಕಥೆ ಹೊತ್ತ ಚಿತ್ರ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು ಇದ್ದಕ್ಕಿದ್ದಂತೆ ರಿಷಬ್ ಶೆಟ್ಟಿ ಎನ್ನುವ ನಟ ಮನೆ ಮಾತಾಗಿದ್ದರು ಇದೀಗ ಕಾಂತಾರಾ 2 ಚಿತ್ರೀಕರಣ ವೇಳೆ ಹಲವು ದುರ್ಘಟನೆಗಳು ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.