Thursday, May 1, 2025
Google search engine
Homeರಾಜ್ಯಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿಯೇ ಅತ್ಯಂತ ದೊಡ್ಡ ಧ್ವಜದ ಕಟ್ಟೆ ಉದ್ಘಾಟನೆ ..! ಅದು ಯಾವ ಜಿಲ್ಲೆಯ...

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿಯೇ ಅತ್ಯಂತ ದೊಡ್ಡ ಧ್ವಜದ ಕಟ್ಟೆ ಉದ್ಘಾಟನೆ ..! ಅದು ಯಾವ ಜಿಲ್ಲೆಯ ಯಾವ ಶಾಲೆ ಅದರ ವಿಶೇಷತೆಗಳೇನು?

ಧ್ವಜದ ಸ್ತಂಭದ ವಿಶೇಷತೆಗಳು.
ಸಾರನಾಥದ ಅಶೋಕ ಸ್ತಂಭದ ಮೂಲ ಸ್ವರೂಪದಂತೆ, ರಾಷ್ಟ್ರ ಲಾಂಛನವನ್ನು ಪೈಬರ್ ಕಲಾಕೃತಿಯಲ್ಲಿ ರೂಪಸಿಲಾಗಿದೆ..
ಧ್ವಜ ಸ್ತಂಭದ ನಾಲ್ಕು ಮೂಲೆಗಳಿಗೂ ರಾಷ್ಟ್ರ ಲಾಂಛನದಲ್ಲಿ ಇರುವ ಪ್ರಾಣಿಗಳಾದ
ಸಿಂಹ, ಗೂಳಿ,ಕುದುರೆ, ಆನೆ, ಗಳನ್ನು ಅಳವಡಿಸಲಾಗಿದೆ,
ರಾಷ್ಟ್ರ ಲಾಂಛನ 7 ಅಡಿ ಎತ್ತರವಿದೆ,
12*12 ಅಡಿಯ ಧ್ವಜದ ಸ್ತಂಭ ನಿರ್ಮಾಣ ಮಾಡಿದ್ದು, ಕಪ್ಪು ಗ್ರಾನೈಟ್ ಹಾಕಲಾಗಿದೆ..
ನೂತನ ಧ್ವಜದ ಸ್ತಂಭಕ್ಕೆ ಹೊಂದಿಕೊಂಡಂತೆ, ಕೆಳಗಿನಿಂದ ಮೇಲೆ ಹತ್ತಲು 18 ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗ :ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಆದರ್ಶ್ ಎಚ್ಎಂ ಹೊಸೂರ್ ತಮ್ಮ ಅಜ್ಜ ದಿ” ಕಾಡಪ್ಪ ಗೌಡ್ರು ಹೊಸೂರು, ತಂದೆ, ದಿ/ ಮಂಜುನಾಥ್ ಗೌಡ್ರು ಹೊಸೂರು ಇವರ ಸವಿನೆನಪಿಗಾಗಿ, ತಾಯಿ ಶ್ರೀಮತಿ ಸರಸ್ವತಿ ಮಂಜುನಾಥ್ ಗೌಡ್ರು ಇವರ ಆರ್ಶ್ರೀವಾದದೊಂದಿಗೆ, ಸಹೋದರಿಯರಾದ ಶ್ರೀಮತಿ ಶಿಲ್ಪ , ಶ್ರೀಮತಿ ಸೀಮಾ ಇವರ ಸಹಕಾರದಿಂದ ನಿರ್ಮಾಣ ಸುಮಾರು 1 ಲಕ್ಷ ರೂ ವೆಚ್ಚ ಹಣ ವೆಚ್ಚಮಾಡಿ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ದೊಡ್ಡ ಧ್ವಜದ ಕಟ್ಟೆ ಎನ್ನುವ ಹಿರಿಮೆಯೂ ಜೊತೆಗೆ ಶಿವಮೊಗ್ಗ ಜಿಲ್ಲೆಯ ಅತಿದೊಡ್ಡ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ನಿನ್ನೆ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಪ್ಪ ಇಟಗಿ ಅವರ ನೇತೃತ್ವದಲ್ಲಿ ನಡೆದ ಧ್ವಜರೋಹಣ ಕಾರ್ಯಕ್ರಮ ದಲ್ಲಿ ನೂತನ ಧ್ವಜದ ಕಟ್ಟೆಯನ್ನು ದಾನಿಗಳಾದ ಶ್ರೀಮತಿ ಸರಸ್ವತಿ ಮಂಜುನಾಥ್ ಗೌಡ್ರು ಉದ್ಘಾಟನೆ ಮಾಡಿ, ಗೌರವಾರ್ಥವಾಗಿ ಧ್ವಜಾರೋಹಣ ಮಾಡಿ ಗೌರವ ವಂದನೆ ಸಲ್ಲಿಸಿದರು.

ಈ ಸಮಯದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಓಣಿಮನೆ, ಮಂಜುನಾಥ್ ಹೆಗಡೆ ಗುಡ್ಡೇಕೇರಿ, ಜಯೇಶ್ ಹೆಗಡೆ ಹೊಸೂರು, ಹಸಿರುಮನೆ ಮಹಾಬಲೇಶ್, ಗ್ರಾ ಪಂ ಸದಸ್ಯರಾದ ಶಶಾಂಕ್ ಹೆಗಡೆ ಗುಡ್ಡೇಕೇರಿ, ಬಾಳೆಹಳ್ಳಿ ಪ್ರಭಾಕರ್, ಸಂದೇಶ್ ಜವಳಿ, ನಿತ್ಯಾನಂದ ಅಣಗೋಡು, ಪಟೇಲ್ ವೆಂಕಟೇಶ್ ಹೆಗಡೆ, ದಾನಿಗಳಾದ ಆದರ್ಶ್ ಹೊಸೂರು ಮುಖ್ಯ ಶಿಕ್ಷಕರಾದ ಮಂಜು ಬಾಬು ಹೆಚ್ ಪಿ ಹಾಗೂ ಮಕ್ಕಳು ಶಿಕ್ಷಕರು ಹಾಜರಿದ್ದರು,

ಈ ರಾಷ್ಟ್ರ ಧ್ವಜ ಸ್ತಂಭದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ರಾಷ್ಟ್ರ ಧ್ವಜ ಸ್ತಂಭದ ಕಲ್ಪನೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ವೀರೇಶ್ ಅವರದ್ದಾಗಿದ್ದು ಎಲ್ಲಾ ಶಿಕ್ಷಕರು ವಿಶೇಷ ಸಹಕಾರ ನೀಡಿದ್ದು, ಇದರ ವಿನ್ಯಾಸ ವನ್ನು ಮಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರಕಲಾ ಶಿಕ್ಷಕರಾದ, ಜಗದೀಶ್ ಶೀಲವಂತರ್ ಮಾಡಿರುತ್ತಾರೆ..

ಸರ್ವರಿಗೂ ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೆರಿ ಶಾಲೆ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇಲ್ಲಿಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಸ್ಥಳೀಯರ, ಪೋಷಕರ, ಸಹಕಾರದೊಂದಿಗೆ ಯಾವುದೇ ಸರ್ಕಾರಿ ಶಾಲೆಗೆ ಕಡಿಮೆ ಇಲ್ಲದ ಹಾಗೆ ಅಭಿವೃದ್ಧಿಪಡಿಸಿದ್ದಾರೆ. ಈಗ ಇನ್ನೊಂದು ಗರಿ ಮೂಡಿದಂತಾಗಿದೆ. ಇದೇ ತರಹ ಎಲ್ಲಾ ಸರ್ಕಾರಿ ಶಾಲೆಗಳು ಪ್ರಯತ್ನಪಟ್ಟರೆ ಪೋಷಕರು ಕೂಡ ಖಾಸಗಿ ಶಾಲೆಗಳನ್ನು ಬಿಟ್ಟುಸರ್ಕಾರಿ ಶಾಲೆಗಳತ್ತ ಮುಖ ಮಾಡುವುದರಲ್ಲಿ ಸಂಶಯವಿಲ್ಲ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...