381
ಶಿವಮೊಗ್ಗ: ಆಶ್ವಥ್ ನಗರದ ಐದನೇ ತಿರುವಿನಲ್ಲಿರುವ ಹೊಮ್ಮರಡಿ ಕುಟುಂಬಕ್ಕೆ ಸೇರಿದ್ದ ಸಾನಿಧ್ಯ ಎಂಬ ಮನೆಯಲ್ಲಿ ಡಾ.ಜಯಶ್ರೀ ಮತ್ತು ಅವರ ಪುತ್ರ ಆಕಾಶ್ ನೇಣಿಗೆ ಶರಣಾಗಿದ್ದಾರೆ. ಡಾ. ಜಯಶ್ರೀ ಉಷಾ ನರ್ಸಿಂಗ್ ಎದುರಿನ ಹೊಮ್ಮರಡಿ ನರ್ಸಿಂಗ್ ಹೋಂ ನಡಿಸುತ್ತಿದ್ದರು ಆಕಾಶ್ ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿದ್ದರು.
ಇದೇ ಮನೆಯಲ್ಲಿ ಐವರು ಆತ್ಮಹತ್ಯೆ..!
ಅಶ್ವಥ್ ನಗರದ ಐದನೇ ತಿರುವಿನಲ್ಲಿರುವ ಸಾನಿಧ್ಯ ಎನ್ನುವ ಮನೆ ಐದು ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ. ಹಿಂದೆ ಈ ಮನೆಯನ್ನು ತೆಗೆದುಕೊಂಡವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಆ ಮನೆಯನ್ನು ಡಾ. ನಾಗರಾಜ್ ಅವರು ತೆಗೆದುಕೊಳ್ಳುತ್ತಾರೆ.ನಂತರ ಡಾ. ನಾಗರಾಜ್ ಅವರು ಕೂಡ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಇದು ಆತ್ಮಹತ್ಯೆ ಅಲ್ಲ ಅವರ ಪತ್ನಿ ಕೊಲೆ ಮಾಡಿ ಆತ್ಮಹತ್ಯೆಯ ರೀತಿ ರೂಪಿಸಿದ್ದಾರೆ ಎನ್ನುವ ಮಾತುಗಳು ಅಂದು ಕೇಳಿಬಂದಿದ್ದವು ಆದರೆ ಅದಕ್ಕೆ ನಿಖರವಾದ ಸಾಕ್ಷಿಗಳು ಇಲ್ಲವಾದ್ದರಿಂದ ಅದು ಆತ್ಮಹತ್ಯೆ ಎಂದು ಸಾಬೀತಾಯಿತು . ನಂತರ ಅದೇ ಮನೆಯಲ್ಲಿ ಡಾಕ್ಟರ್ ನಾಗರಾಜ್ ನಿಧನದ ನಂತರ ಡಾಕ್ಟರ್ ಜಯಶ್ರೀ ಪುತ್ರ ಆಕಾಶ್ ಜೊತೆಗೆ ವಾಸವಾಗಿದ್ದರು ಎಲ್ಲವೂ ಸರಿಯಾಗಿತ್ತು ಪುತ್ರ ಆಕಾಶ್ ಗೆ ಮದುವೆ ಮಾಡಿಕೊಟ್ಟರು. ಸೊಸೆ ಕೂಡ ಎಲ್ಲರೊಟ್ಟಿಗೂ ಬೆರೆತು ಚೆನ್ನಾಗಿ ಇದ್ದರು ಆದರೆ ಅದೊಂದು ದಿನ ತುಳಸಿ ಪೂಜೆ ಮುಗಿಸಿಕೊಂಡು ರಾತ್ರಿ ಮನೆಗೆ ಹೋದ ಸೊಸೆ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಇದು ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದ್ದು ಆರಾಮಾಗಿ ಓಡಾಡಿಕೊಂಡು ಇದ್ದ ಸೊಸೆ ರಿಲ್ಸ್ ಗಳನ್ನು ಮಾಡಿ ಖುಷಿಯಿಂದ ಇದ್ದಳು ತನ್ನ ತವರು ಮನೆಗೂ ಕೂಡ ಮಾತನಾಡಿದ್ದಳು ಆದರೆ ಆಕೆ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು ಈ ಪ್ರಕರಣದಲ್ಲೂ ಕೂಡ ಅಮ್ಮ ಮಗನ ಮೇಲೆ ಆರೋಪಗಳು ಬಂದಿದ್ದವು ಇದರಲ್ಲೂ ಕೂಡ ಸರಿಯಾದ ಸಾಕ್ಷಿ ಸಿಗದೇ ಆತ್ಮಹತ್ಯೆ ಎಂದೇ ಸಾಬೀತಾಯಿತು.
ಇದೀಗ ಅಮ್ಮ ಮಗನ ಸರದಿ :


