Home ಮಹಾನಗರ ಪಾಲಿಕೆ ಶಿವಮೊಗ್ಗಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!

ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!

by EDITOR NEWS WARRIORS
0 comments
ಕಾರ್ಪೊರೇಷನ್ ಕರ್ಮಕಾಂಡ ಆಗುವುದೇ ಅಧಿಕಾರಿಗಳ ತಲೆದಂಡ..?!
ಶಿವಮೊಗ್ಗ ಮಹಾನಗರ  ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಫೇಸ್ 2 ಪ್ಯಾಕೇಜ್ ನಂಬರ್ 1 ರಲ್ಲಿ 41 ಕೋಟಿ 85 ಲಕ್ಷ 92 ಸಾವಿರ 192 ರೂ  ಜಿಎಸ್‌ಟಿ ಹೊರತುಪಡಿಸಿ ಮತ್ತು ಪ್ಯಾಕೇಜ್ ನಂಬರ್ 2 ರಲ್ಲಿ 18ಕೋಟಿ 79 ಲಕ್ಷ 99 ಸಾವಿರ 680 ರೂ   ಜಿ ಎಸ್ ಟಿ  ಹೊರತುಪಡಿಸಿ ಎರಡು ಕಾಮಗಾರಿಯನ್ನು ಆನಂದ್ ಪ್ರಮೋದ್ ಗುತ್ತಿಗೆದಾರರು ಬೆಂಗಳೂರು ಇವರಿಗೆ ದಿನಾಂಕ 23.04.2026 ರಂದು ಮುಖ್ಯ ಇಂಜಿನಿಯರ್ ಬೆಂಗಳೂರು ಕೆಲಸದ ಆದೇಶ ಕೊಟ್ಟಿರುತ್ತಾರೆ.
ಅದರಂತೆ ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 17 ಮತ್ತು ವಾರ್ಡ್ ನಂಬರ್ 3 ರಲ್ಲಿ ಹಾಗೂ ಇತರೆ ವಾರ್ಡ್ ಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸುತ್ತಾರೆ.
ಪತ್ರಿಕೆ ಗಮನಕ್ಕೆ ಬಂದ ಹಾಗೆ ಪ್ರಾರಂಭಗೊಂಡಿರುವ ಕಾಮಗಾರಿಗಳು ತುಂಬಾ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ.
 ರ‍್ಯಾಪ್ಟ್  ಮತ್ತು ಬೆಡ್ ಕಾಂಕ್ರೀಟ್ ಸೇರಿ 8 ಇಂಚು ಇರಬೇಕು ಆದರೆ 5 ಇಂಚು ಮಾತ್ರ ಹಾಕಿರುತ್ತಾರೆ.
ರಾತ್ರೋರಾತ್ರಿ ನಡೆಯುತ್ತಿದೆ ಕಳಪೆ ಕಾಮಗಾರಿ..!

ವಾರ್ಡ್ ನಂಬರ್ ಮೂರರಲ್ಲಿ ಡಾಂಬರೀಕರಣ ಮತ್ತು ಡ್ರೈನ್ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ಕೂಡಿದ್ದು ಸುಮಾರು 2 ಕೋಟಿಯ ಕಾಮಗಾರಿ ಹಳ್ಳ ಹಿಡಿಯುತ್ತಿದೆ. ಇಲ್ಲೂ ಕೂಡ  ರ‍್ಯಾಪ್ಟ್ ಮತ್ತು ಬೆಡ್ ಕಾಂಕ್ರೀಟ್ 8 ಇಂಚು ಇರಬೇಕು ಆದರೆ ಬರೀ 5 ಇಂಚು ಇದೆ ಸ್ವತಃ ಇವರದೇ ಇಂಜಿನಿಯರ್ ಚೆಕ್ ಮಾಡಿರುವ ಫೋಟೋ ನಮ್ಮ ಬಳಿ ಇದೆ. ಹಾಗೆ ಇಲ್ಲಿ ಬಳಸಿರುವ ಸ್ಟೀಲ್ ಕೂಡ ಕಳಪೆ ಗುಣಮಟ್ಟದ್ದಾಗಿದ್ದು ತೂಕದಲ್ಲಿ ವ್ಯತ್ಯಾಸವಿದೆ. ಹಾಗೆ ಬಳಸಿರುವ ಎಂ ಸ್ಯಾಂಡ್ ಗೆ ಡಸ್ಟ್ ಮಿಕ್ಸ್ ಮಾಡಿ ಕಾಂಕ್ರೀಟ್ ವಾಲ್ ಗಳಿಗೆ ಬಳಸುತ್ತಿದ್ದಾರೆ. ಅಲ್ಲದೆ ಈ ಕಾಮಗಾರಿಗಳನ್ನು ಕಳ್ಳರ ರೀತಿ ರಾತ್ರೋರಾತ್ರಿ ನಡೆಸುತ್ತಿದ್ದು ಯಾವುದೇ ಮಾಹಿತಿ ಇಲ್ಲದ ಇಂಜಿನರ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಅಲ್ಲದೆ ಶಾಖಾಧಿಕಾರಿಗಳು ಮತ್ತು ಮೂರನೇ ತಪಾಸಣೆ ವ್ಯಕ್ತಿ ಥರ್ಡ್ ಪಾರ್ಟಿ ಇಲ್ಲದೆ ಕಾಮಗಾರಿ ನಡೆಯುತ್ತಿದ್ದು ಇಲ್ಲಿಗೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ  ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಒಂದು ವೇಳೆ ಸ್ವೀಕರಿಸಿದರು ಕೂಡ ನಾವು ಊರಿನಲ್ಲಿ ಇಲ್ಲ ಎನ್ನುತ್ತಾರೆ ಇವರು ಊರಿನಲ್ಲಿ ಇಲ್ಲದ ಸಮಯದಲ್ಲಿ ಇವರು ಕಾಮಗಾರಿ ಹೇಗೆ ಮಾಡುತ್ತಾರೆ ಇವರಿಗೆ ಕಾಮಗಾರಿ ಮಾಡಲು ಅನುಮತಿ ನೀಡಿದವರು ಯಾರು ಇಲ್ಲಿ ಕಾಮಗಾರಿ ಗುಣಮಟ್ಟದಿಂದ  ಕೂಡಿದೆಯಾ ಎಂದು ನೋಡುವವರು ಯಾರು..?!

ಗೋಪಾಲದಲ್ಲೂ ಇದೇ ಕಥೆ..!

ಗೋಪಾಲದ ಕಾಲೇಜ್ ಒಂದರ ಮುಂದೆ ನಡೆಯುತ್ತಿರುವ ಕಾಮಗಾರಿ ಕೂಡ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು ಅಂದಾಜು ಪಟ್ಟಿಯನ್ನೇ ಈ ಕಾಮಗಾರಿ ಹೋಲುತ್ತಿಲ್ಲ ಇಲ್ಲೂ ಕೂಡ ಕಳಪೆ ಗುಣಮಟ್ಟದ ಸ್ಟೀಲನ್ನು ಬಳಸಿದ್ದು 8 ಇಂಚು ಬದಲಿಗೆ 5 ಇಂಚನ್ನು ಮಾತ್ರ ಹಾಕಿರುತ್ತಾರೆ.
ಪತ್ರಿಕೆ ದೂರು ನೀಡಿ ಹದಿನೈದು ದಿನವಾಗಿದ್ದರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಪರೋಕ್ಷವಾಗಿ ಇಲ್ಲಿನ ಅಧಿಕಾರಿಗಳು ಈ ಕಳಪೆ ಕಾಮಗಾರಿಗೆ ಅನುಮತಿ ನೀಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಒಂದು ಸಲ ಕಳಪೆ ಕಾಮಗಾರಿ ನಿರ್ಮಾಣ ಮಾಡುವುದು ಆನಂತರ ಹೇಳಿದಾಗ ಒಡೆದು ಸರಿ ಮಾಡುವುದು ಇದರ ನಷ್ಟವನ್ನು ಬರಿಸುವುದು ಯಾರು ಸ್ವಾಮಿ..?!
ಇದಕ್ಕೆಲ್ಲಾ ಸಂಬಂಧಪಟ್ಟಂತೆ ಫೋಟೋಗಳನ್ನು ಇಲ್ಲಿ ಹಾಕಲಾಗಿದೆ ಮಾನ್ಯ ಆಯುಕ್ತರು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಇಷ್ಟೊಂದು ದೊಡ್ಡ ಮಟ್ಟದ ಹಣ ಲೂಟಿಯಾಗುತ್ತಿದ್ದರು ತಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ..?! ತಾವು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಆಗ ಗೊತ್ತಾಗುತ್ತದೆ ಈ ಕಳಪೆ ಕಾಮಗಾರಿಯ ಹಣೆಬರಹ..
ಸರ್ಕಾರದಿಂದ ಬಂದಿರುವ ಕೋಟಿ ಕೋಟಿ ಹಣವನ್ನು ಲೂಟಿ ಮಾಡಲು ಇಳಿದಿರುವ ಪಾಲಿಕೆಯ ಭ್ರಷ್ಟ ಅಧಿಕಾರಿಗಳು..!
ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದಿಂದ ರಸ್ತೆ ಚರಂಡಿ ಕಾಮಗಾರಿಗಳಿಗೆ ಬಂದ ಹಣವನ್ನು ಲೂಟಿ ಮಾಡಲು ತೊಡಗಿದ್ದಾರೆ ಸ್ಥಳಕ್ಕೆ ಭೇಟಿ ನೀಡದೆ ಸ್ಥಳ ಪರಿಶೀಲನೆ ಮಾಡದೆ ಕಾಮಗಾರಿಗಳನ್ನು  ವೀಕ್ಷಣೆ ಮಾಡದೇ ನಿರ್ಲಕ್ಷ ತೋರಿ ಕಳಪೆ ಕಾಮಗಾರಿ ಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಲೋಕಾಯುಕ್ತದಂತಾ ತನಿಖಾ ಸಂಸ್ಥೆ ಇದರ ಬಗ್ಗೆ ಗಮನ ಹರಿಸಬೇಕು…
ಸಾರ್ವಜನಿಕರ ಹಣ ಲೂಟಿಯಾಗುತ್ತಿದೆ ಇದನ್ನು ಆಯುಕ್ತರು ತಪ್ಪಿಸಬೇಕು…
ರಘುರಾಜ್ ಎಚ್ ಕೆ… 9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...