Home ರಾಜ್ಯಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ..!!!! ಭಾವೈಕ್ಯತೆಯ ಪ್ರತೀಕದತ್ತ ಸೈದೂರು..!!!

ಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ..!!!! ಭಾವೈಕ್ಯತೆಯ ಪ್ರತೀಕದತ್ತ ಸೈದೂರು..!!!

by EDITOR NEWS WARRIORS
0 comments

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೈದೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಮೊಹರಂ ಆಚರಣೆ ನೆಡೆದುಕೊಂಡು ಬರುತ್ತಿದ್ದೂ, ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸವಿಲ್ಲದ್ದಿದ್ದರೂ, ಅನಾದಿ ಕಾಲದಿಂದ ಈ ಮೊಹರಂ ಆಚರಣೆ ಮಾಡುತ್ತಿರುವುದು ವಿಶೇಷ.

ಈ ಮೊಹರಂ ಹಬ್ಬ ಆಚರಣೆಯ ಖರ್ಚಿಗಾಗಿ ಸೈದೂರು ಗ್ರಾಮಸ್ಥರು ಪ್ರತಿ ಕುಟುಂಬದಿಂದ ವರಾಡ ( ವಂತಿಗೆ ) ಹಣ ಒಟ್ಟು ಮಾಡಿ ಹೊರ ಊರಿನಿಂದ ಮುಸ್ಲಿಂ ಜನಾಂಗದ ಹಿರಿಯನ್ನು ಕರೆ ತಂದು ” ಅಲ್ಲಾಭಿ ” ದೇವರ ಪೂಜೆಗಾಗಿ ನೇಮಿಸಿಕೊಂಡು ವಂತಿಗೆ ಹಣದಲ್ಲಿ ಪೂಜೆ ಸಲ್ಲಿಸುವ ಮುಸ್ಲಿಂ ಜನಾಂಗದವರಿಗೆ ಗೌರವ ಧನವನ್ನೂ ನೀಡುತ್ತಾರೆ.

ಪ್ರತಿ ಮನೆಯಿಂದ ಕಟ್ಟಿಗೆಯನ್ನೂ ಒಟ್ಟು ಮಾಡಿ ಅಲ್ಲಾಭಿ ದೇವರ ಮುಂದೇ ಅತೀ ದೊಡ್ಡದಾದ ಗುಂಡಿಯಲ್ಲಿ ತಾವುಗಳು ತಂದ ಕಟ್ಟಿಗೆಯನ್ನೂ ಹಾಕಿ ಸಣ್ಣದಾಗಿ ಬೆಂಕಿಯನ್ನೂ ಹಾಕುತ್ತಾರೆ. ಕೊನೆಯ ದಿನದಲ್ಲಿ ಹೊಂಡದಲ್ಲಿರುವ ಕಟ್ಟಿಗೆಗೆ ಬೆಂಕಿಯನ್ನೂ ದೊಡ್ಡದಾಗಿ ಹಾಕಿ, ಕೆಂಡದಲ್ಲಿ ಊರಿನ ಗ್ರಾಮಸ್ಥರು ಹಾಯುತ್ತಾರೆ.

ಕೊನೆಯ ದಿನದಲ್ಲಿ ಇಡೀ ಊರಿಗೆ ಊರು ಸೇರಿ ಅಡುಗೆ ಮಾಡಿ ಅನ್ನಸಂತರ್ಪಣೆ ನೆರವೇರಿಸುತ್ತಾರೆ. ಈ ಅನ್ನಸಂತರ್ಪಣೆ ಸೇವೆಯಲ್ಲಿ ಜಾತಿ ಧರ್ಮ ಭೇದವಿಲ್ಲದೇ ಪ್ರಸಾದ ಎಂದು ಸೇವಿಸುತ್ತಾರೆ.

ಮತ್ತೊಂದು ವಿಶೇಷವೇನಂದರೆ, ಮೊಹರಂ ಹಬ್ಬವು 5 ದಿನಗಳ ಕಾಲ ನೆಡೆಯುತ್ತದೆ. ಈ ಸಂದರ್ಭದಲ್ಲಿ ಸೈದೂರು ಗ್ರಾಮದ ಗ್ರಾಮಸ್ಥರು ಸರತಿಯಂತೆ ಪ್ರತಿ ಮನೆಯ ಒಬ್ಬರಂತೆ 5 ದಿನಗಳ ಕಾಲ 24 ಗಂಟೆಗಳ ಅವಧಿಯಲ್ಲಿ 05 ಜನರು ಅಲ್ಲಾಭಿ ದೇವರ ಕಾವಲು ಕಾಯುತ್ತಾರೆ.

ಸೈದೂರು ಎಂಬ ಹೆಸರು ಪುರಾತನ ಕಾಲದಲ್ಲಿ ರಾಜ ಮನೆತನದವರಾದ ” ಸೈಯದ್ ” ಎಂಬುವವರು ಈ ಊರಿನಲ್ಲಿ ವಾಸವಿರುವ ಕಾರಣ ಈ ಊರಿಗೆ ” ಸೈದೂರು ” ಎಂದು ಕರೆಯಲಾಗುತ್ತಿದೆ ಎಂದು ಹಿರಿಯರು ಹೇಳುತ್ತಿರುವ ಮಾಹಿತಿ.

ಅಲ್ಲಾಭಿ ” ದೇವರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ರು ಎನ್ನದೇ ಪ್ರತಿ ವರ್ಷ ಸಹಸ್ರಾರು ಭಕ್ತರು ಹತ್ತು ಹಲವಾರು ಸಮಸ್ಯೆಗಳ ಈಡೇರಿಕೆಗೆ ಅಲ್ಲಾಭಿ ದೇವರಲ್ಲಿ ಹರಕೆಯನ್ನೂ ಮಾಡುತ್ತಿದ್ದೂ, ಹರಕೆ ಈಡೇರಿದ ಪ್ರತಿಫಲವಾಗಿ ಭಕ್ತರು ಬೆಳ್ಳಿ ಬಂಗಾರದ ಸಾಮಾನುಗಳನ್ನೂ ನೀಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಅಲ್ಲಾಭಿ ದೇವರಿಗೆ ಸಕ್ಕರೆಯನ್ನೂ ಭಕ್ತರು ಮನೆಯಿಂದ ತಂದು ದೇವರ ಮುಂದೇ ಮುಸ್ಲಿಂ ಜನಾಂಗದ ಪೂಜೆ ನಿರತವರಿಂದ ” ಓದುಕೆ ” ಮಾಡಿ ನವಿಲು ಗರಿಯ ಗುಚ್ಚದೊಂದಿಗೆ ತಲೆಗೆ ಮುಟ್ಟಿಸಿಕ್ಕೊಂಡು ಆಶೀರ್ವಾದ ಪಡೆಯುತ್ತಾರೆ.

ಮೊಹರಂ ಕೊನೆಯ ದಿನದಂದು ಅಲ್ಲಾಭಿ ದೇವರ ಮುಂಭಾಗ ಹಾಕಿರುವ ಕಟ್ಟಿಗೆ ರಾಶಿ ಬೆಂಕಿ ಹಾಕಿ ಭಕ್ತರು ತಂದ ಉಪ್ಪು ಮತ್ತು ಸಕ್ಕರೆಯನ್ನೂ ಉರಿಯುವ ಬೆಂಕಿ ರಾಶಿಗೆ ಹಾಕುತ್ತಾ ಭಜನೆ ಮಾಡುತ್ತಾ ಬೆಂಕಿ ಸುತ್ತ ಸುತ್ತುವರೆಯುತ್ತಾರೆ.

ನೂರಾರು ವರ್ಷಗಳಿಂದ ನೆಡೆಯುತ್ತಿರುವ ಈ ಮೊಹರಂ ಹಬ್ಬಕ್ಕೆ ಆ ಹೊಂಡದಲ್ಲಿರುವ ಬೂದಿಯೇ ಸಾಕ್ಷಿಯಾಗಿದೆ.

ಧರ್ಮ ಧರ್ಮಗಳಲ್ಲಿ ಜಗಳವಾಡುತ್ತಿರುವ ಇಂತಹ ಸಂಧಿಗ್ದ ಸಮಯದಲ್ಲಿ ಸೈದೂರು ನೆಡೆಯುವ ಭಾವೈಕ್ಯತೆಯ ಮೊಹರಂ ಹಬ್ಬ ವಿಶ್ವಕ್ಕೆ ನಿಜಕ್ಕೂ ಮಾದರಿಯಾಗಬೇಕು.

ಓಂಕಾರ ಎಸ್. ವಿ. ತಾಳಗುಪ್ಪ….

ರಘುರಾಜ್ ಹೆಚ್. ಕೆ….9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...