39
- [

- ಸ್ನೇಹಿತರ ಅತಿಯಾದ ಕಿರುಕಳದಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ.
- ಹಾಸ್ಟೆಲ್ ನಲ್ಲಿ ಹಾಗೂ ಕಾಲೇಜಿನಲ್ಲಿ ತನ್ನ ಜೊತೆಗಿರುವ ಸ್ನೇಹಿತರೆ ನಿರಂತರ ಮಾನಸಿಕವಾಗಿ ಕಿರುಕುಳ ನೀಡಿದ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
- ಸಾವಿಗೆ ಶರಣಾಗಿರುವ ವಿದ್ಯಾರ್ಥಿನಿ ತೆಲಂಗಾಣದ ಜಗಿತ್ಯಾಲ ಗ್ರಾಮೀಣ ಮಂಡಲ ದಲ್ಲಿ ಈ ಘಟನೆ ನಡೆದಿದ್ದು .
- ನಿತ್ಯಾ ಎನ್ನುವ ವಿದ್ಯಾರ್ಥಿನಿ ಹೈದರಾಬಾದ್ನ ರಿಷಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ನ ಮೂರನೇ ವರ್ಷದಲ್ಲಿ ಓದುತ್ತಿದ್ದಳು. ತನ್ನದೇ ಕಕಾಲೇಜಿನಲ್ಲಿ ಓದುತ್ತಿದ್ದ ವೈಷ್ಣವಿ ಮತ್ತು ಸಂಜನಾ ಕಳೆದ ಕೆಲವು ದಿನಗಳಿಂದ ನಿತ್ಯಾಳನ್ನು ಮಾನಸಿಕವಾಗಿ ನಿಂದಿಸುತ್ತಿದ್ದರು ಕಿರುಕುಳದಿಂದಾಗಿ ತೀವ್ರ ಮಾನಸಿಕ ತೊಂದರೆ ಆಗಿ, ಓದಿನಲ್ಲೂ ನಿತ್ಯಾ ಹಿಂದಿಳಿದಿದ್ದಳು ಎನ್ನಲಾಗಿದೆ.
ಹೀಗೆ ನಿರಂತರವಾಗಿ ಸ್ನೇಹಿತರ ಕಿರುಕುಳದಿಂದ ಖಿನ್ನತೆಗೆ ಜಾರಿದ್ದ ನಿತ್ಯ, ಜುಲೈ 1ರಂದು ಮನೆಗೆ ಬಂದಿದ್ದಳು. ಜುಲೈ 2 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೀಟನಾಶಕ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು ನೋಡಿದ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಸ್ಥಳೀಯ ಜಗ್ತಿಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕರೀಂನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ನಿತ್ಯಾ ಮೃತಪಟ್ಟಳು. ಮೃತಳ ತಂದೆ ಕಾಟಿಪಲ್ಲಿ ತಿರುಪತಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಕೊಂಡಿರುವ ಗ್ರಾಮೀಣ ಸಬ್-ಇನ್ಸ್ಪೆಕ್ಟರ್ ಸುಧಾಕರ್ ತಿಳಿಸಿದ್ದಾರೆ.

