Home ರಾಜ್ಯBIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ 2 ಮನೆಗಳು C ವರ್ಗದಿಂದ B2 ವರ್ಗಕ್ಕೆ ಮಾರ್ಪಾಡು..!! ಆದರೆ ತಾವೇ ಮನೆ ಬೀಳಿಸಿಕೊಂಡು ಪರಿಹಾರ ಪಡೆದುಕೊಂಡವರ ಕಥೆ ಏನು..?!! ಸ್ಥಳ ಪರಿಶೀಲನೆ ಮಾಡದೆ A B C ಎಂದು ಪರಿಗಣನೆ ಮಾಡಿ ಪರಿಹಾರ ನೀಡಿರುವ ಇಂಜಿನಿಯರ್ ಗಳ ತಲೆದಂಡವಾಗಬೇಕು..!! ಪುನಃ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು..!!!

BIG IMPACT:: ಸಾಲೂರು ಗ್ರಾಮಸ್ಥರ ಹೋರಾಟಕ್ಕೆ ನ್ಯೂಸ್ ವಾರಿಯರ್ಸ್ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು..!! 2022-2023 ನೇ ಸಾಲಿನಲ್ಲಿ ಅತೀವೃಷ್ಟಿಯ ಹೆಸರಿನಲ್ಲಿ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಹಾಗೂ ಪರಿಹಾರ 2 ಮನೆಗಳು C ವರ್ಗದಿಂದ B2 ವರ್ಗಕ್ಕೆ ಮಾರ್ಪಾಡು..!! ಆದರೆ ತಾವೇ ಮನೆ ಬೀಳಿಸಿಕೊಂಡು ಪರಿಹಾರ ಪಡೆದುಕೊಂಡವರ ಕಥೆ ಏನು..?!! ಸ್ಥಳ ಪರಿಶೀಲನೆ ಮಾಡದೆ A B C ಎಂದು ಪರಿಗಣನೆ ಮಾಡಿ ಪರಿಹಾರ ನೀಡಿರುವ ಇಂಜಿನಿಯರ್ ಗಳ ತಲೆದಂಡವಾಗಬೇಕು..!! ಪುನಃ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು..!!!

by EDITOR NEWS WARRIORS

ಶಿವಮೊಗ್ಗ : ಅಧಿಕ ಮಳೆಯಿಂದ ಅತಿವೃಷ್ಟಿಯ ಕಾರಣದಿಂದ ಬಿದ್ದು ಹೋದ ಮನೆಗಳಿಗೆ ಅವುಗಳು ಬಿದ್ದು ಹೋದ ರೀತಿಯ ಆಧಾರದ ಮೇಲೆ ಪೂರ್ತಿ ಬಿದ್ದು ಹೋದರೆ 5 ಲಕ್ಷ ರೂಗಳು, ಅರ್ಧ ಬಿದ್ದರೆ 3 ಲಕ್ಷ ರೂಗಳು, ಸ್ವಲ್ಪ ಪ್ರಮಾಣದ ಹಾನಿಯಾದರೆ 50 ಸಾವಿರ ರೂಪಾಯಿಗಳು ಎಂದು ಕ್ರಮವಾಗಿ ABC ಎಂದು ಮಾರ್ಪಾಡು ಮಾಡಿ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ…

ಸರ್ಕಾರದ ಈ ವ್ಯವಸ್ಥೆ ಬಡವರಿಗೆ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ವರದಾನವಾಗಿದೆ.. ಬಿದ್ದು ಹೋದ ಮನೆ ಬದಲಾಗಿ ಮತ್ತೊಂದು ಮನೆಯನ್ನು ಕಟ್ಟಿಸಿಕೊಳ್ಳಲು ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ.ಆದರೆ ಕೆಲವು ಅಧಿಕಾರಿ ವರ್ಗದವರಿಗೆ ಬಲಾಡ್ಯರಿಗೆ ಆರ್ಥಿಕವಾಗಿ ಸದೃಢ ಇರುವವರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ವರದಿಯನ್ನು ನ್ಯೂಸ್ ವಾರಿಯರ್ಸ್ ನಿನ್ನೆ ಪ್ರಕಟಿಸಿದ್ದು… ಸಾಲೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ಕೂಡ ನೀಡಿದ್ದರು… ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಇದನ್ನು ಪರಿಶೀಲನೆ ನಡೆಸುವಂತೆ ತಹಸಿಲ್ದಾರ್ ಗೆ ಆದೇಶ ಮಾಡಿದ್ದಾರೆ… ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಹಶೀಲ್ದಾರ್ C GRADE ಹೊಂದಿದ್ದ ಎರಡು ಮನೆಗಳನ್ನು B2 ಗೆ ವರ್ಗಾಯಿಸಿ ಮಾರ್ಪಾಡು ಮಾಡಿ ಕಳಿಸಿದ್ದಾರೆ… ಇದು ಸ್ವಾಗತಾರ್ಹ ಬೆಳವಣಿಗೆ… ಆದರೆ….

ಈಗಾಗಲೇ ಮನೆಯನ್ನು ಹೊಂದಿರುವವರು ಆರ್ಥಿಕವಾಗಿ ಸದೃಢವಾಗಿರುವವರು ತಾವೇ ಮನೆಯನ್ನು ಬಿಳಿಸಿಕೊಂಡು ಇಂಜಿನಿಯರ್ ಗಳನ್ನು ಬುಕ್ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ… ಎನ್ನುವ ಗಂಭೀರ ಆರೋಪ ಈಗ ಇಂಜಿನಿಯರ್ ಗಳ ಮೇಲೆ ಬಿದ್ದಿದೆ…

ಇಂಜಿನಿಯರ್ ಕೂಡ ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಎಬಿಸಿ ಎನ್ನುವ ಕೆಟಗರಿಯಲ್ಲಿ ಪರಿಹಾರ ಹಣ ನೀಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ…

ಕೂಡಲೇ ಅಂತ ಇಂಜಿನಿಯರ್ ಗಳನ್ನು ಅಮಾನತ್ತಿನಲ್ಲಿ ಇಡಬೇಕು ಪುನಃ ಸ್ಥಳ ಪರಿಶೀಲನೆ ನಡೆಸಬೇಕು ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾಗಬೇಕು ಪರಿಹಾರ ಧನ ಬರಬೇಕು ಎನ್ನುವುದು ಗ್ರಾಮಸ್ಥರ ಮನವಿ ಹಾಗೂ ಆಗ್ರಹ…

ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಡುತ್ತೇವೆ ಎಂದು ಊರಿನ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!