Home ಶಿವಮೊಗ್ಗದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ..!! ಶಾಸಕರು ಅನುದಾನ ಕೊಟ್ಟರು ಇಂಜಿನಿಯರ್ ಕಳಪೆ ಕಾಮಗಾರಿ ಮಾಡಿಟ್ಟರು..!!

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ..!! ಶಾಸಕರು ಅನುದಾನ ಕೊಟ್ಟರು ಇಂಜಿನಿಯರ್ ಕಳಪೆ ಕಾಮಗಾರಿ ಮಾಡಿಟ್ಟರು..!!

by EDITOR NEWS WARRIORS
0 comments

ಅಭಿವೃದ್ಧಿ ಕುಂಟು ನೆಪದಲ್ಲಿ ರಸ್ತೆ ಕಾಮಗಾರಿ ಅನುಷ್ಠಾನ ಸಂಪೂರ್ಣ ಕಳಪೆ – ಕಳಪೆ ಕಾಮಗಾರಿ ಅಪಘಾತಕ್ಕೆ ಅಹ್ವಾನ – ತಪ್ಪಿದ ಬಾರಿ ದುರಂತ – ಇನ್ನಾದರೂ ಸಂಭಂದ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ……?!

ಬ್ಯಾಕೋಡು:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಬ್ಯಾಕೊಡು ಬಳಿ ತೋಟದ ಕೆಲಸಕ್ಕೆ ಹಿಟಾಚಿ ಯಂತ್ರವನ್ನು ಹೊತ್ತು ತರುತ್ತಾ ಇದ್ದ ಲಾರಿ ಮಗುಚಿ ಬಿದ್ದ ಘಟನೆ ಬ್ಯಾಕೋಡು ಸಮೀಪದ ಕಾನುಗೋಡು ಹಳ್ಳಿಯಲ್ಲಿ ನಡೆದಿದ್ದು ಅಚ್ಚರಿ ರೀತಿಯಲ್ಲಿ ವಾಹನ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಮಣ್ಣು ಬ್ಯಾಂಕ್ ಹಾಕಿದ್ದ ನೂತನ ರಸ್ತೆಯಲ್ಲಿ ಲಾರಿ ಚಲಿಸುವಾಗ ಏಕಾಏಕಿ ಮಣ್ಣು ಕುಸಿದ ಕಾರಣ ನಿಯಂತ್ರಣ ತಪ್ಪಿ ಹದಿನೈದು ಅಡಿ ಆಳಕ್ಕೆ ಲಾರಿ ಬಿದ್ದಿದೆ.

ಈ ಘಟನೆಗೆ ಶಾಸಕರ ಅನುದಾನದಲ್ಲಿ ಕೆಲವು ತಿಂಗಳ ಹಿಂದೆ ರಸ್ತೆ ನವೀಕರಣ ಕಾಮಗಾರಿ ನಡೆಸಿದ್ದಾಗ ಕಳಪೆ ಕಾಮಗಾರಿ ನಡೆಸಿದ್ದೆ ಕಾರಣ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ.

” ರಸ್ತೆ ಬೇಕು ಅಂದೆವು. ಶಾಸಕರು ಊರಿಗೆ ಬಂದರು, ಅನುದಾನ ಕೊಟ್ಟರು. ಆದರೆ ರಸ್ತೆ ಹೀಗೆ ಮಾಡಿದ್ದಾರೆ .ಇಂಜಿನಿಯರ್ ಸುಳ್ಳೇ ಹೇಳ್ತಾರೆ, ಇವತ್ತು ಹಿಟಾಚಿ ಜತೆಗೆ ಟಿಪ್ಪರ್ ಕಣ್ಣೆದುರೇ ಮಗುಚಿ ಬಿತ್ತು, ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಕತೆ, ಕಳಪೆ ಕಾಮಗಾರಿ ನಡೆಸಿದ್ದಾರೆ”
ಎಂದು ಯುವ ಮುಖಂಡ ಮಣಿಕಂಠ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎರಡು ಕಡೆ ಇದ್ದ ಮೋರಿಯನ್ನು ಕಾಮಗಾರಿ ವೇಳೆ ಮುಚ್ಚಲಾಗಿದೆ. ಹೊಸಾ ಪೈಪ್ ಹಾಕದೇ ಕೆಲಸ ನಿರ್ವಹಣೆ ಮಾಡಲಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಉಳಿಯುವುದು ಕಷ್ಟ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದು ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ…

ಓಂಕಾರ ಎಸ್. ವಿ. ತಾಳಗುಪ್ಪ….

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...