Home ಶಿವಮೊಗ್ಗPolice news : ಅಭಯ್ ಗೆ “ಭಯ” ಹುಟ್ಟಿಸಿದ ಪೊಲೀಸ್ ಇಲಾಖೆ.? ಕಾನೂನು ಸುವ್ಯವಸ್ಥೆಯಲ್ಲಿ “ಕೈ” ಹಸ್ತಕ್ಷೇಪ..? ಮೌನ ಮುರಿದ ಬಿಜೆಪಿ..!

Police news : ಅಭಯ್ ಗೆ “ಭಯ” ಹುಟ್ಟಿಸಿದ ಪೊಲೀಸ್ ಇಲಾಖೆ.? ಕಾನೂನು ಸುವ್ಯವಸ್ಥೆಯಲ್ಲಿ “ಕೈ” ಹಸ್ತಕ್ಷೇಪ..? ಮೌನ ಮುರಿದ ಬಿಜೆಪಿ..!

by EDITOR NEWS WARRIORS
0 comments

ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರ ಗಲಭೆ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಸೇರಿದಂತೆ ಮೂರು ಜನ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಲಾಗಿದೆ.

ಯಾಕೆ ಈ ಶಿಕ್ಷೆ..?

ಅಭಯ್ ಪ್ರಕಾಶ್ ಪೊಲೀಸ್ ಇಲಾಖೆಯಲ್ಲಿರುವ ಕೆಲವೇ ಕೆಲವು ದಕ್ಷ ಅಧಿಕಾರಿಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು ಏಕೆಂದರೆ ಹಲವು ಪ್ರಕರಣಗಳಲ್ಲಿ ತಮ್ಮ ಜಾಣ್ಮೆ ಬುದ್ಧಿವಂತಿಕೆ ಸಂಯಮ ಬಳಸಿಕೊಂಡು ತಮ್ಮಲ್ಲಿರುವ ಅಗಾಧವಾದ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಗಳನ್ನು ಹಿಡಿದಿದ್ದಾರೆ. ಕೇವಲ ಠಾಣೆಯಲ್ಲಿ ಕೂತು ಕೆಲಸ ಮಾಡದೆ ಹಿರಿಯ ಅಧಿಕಾರಿಗಳು ವಹಿಸಿದ ಕೆಲಸವನ್ನು ಸಮರ್ಪಕವಾಗಿ ಮಾಡುವ ಕೆಲವೇ ಕೆಲವು ಅಧಿಕಾರಿಗಳಲ್ಲಿ ಅಭಯ್ ಒಬ್ಬರು ಅಭಯ್ ಮೇಲು ಸಾಕಷ್ಟು ಆರೋಪಗಳಿವೆ ಆದರೆ ಆರೋಪ ಬಂದ ಮಾತ್ರಕ್ಕೆ ಅವೆಲ್ಲವೂ ಸತ್ಯವಲ್ಲ ಅಭಯ್ ಇಲಾಖೆಗೆ ಒಂದು ಆಸ್ತಿ ಎನ್ನುವುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಬೆನ್ನತ್ತಿ ಹೋಗಿ ಹಿಡಿಯುವಲ್ಲಿ ಅಭಯ್ ಪ್ರಕಾಶ್ ಯಶಸ್ವಿಯಾಗಿದ್ದಾರೆ. ಗಾಂಜಾದ ಅಮಲಿನಲ್ಲಿ ತೇಲಾಡುತ್ತಿದ್ದ ಕೆಲವು ಕಿಡಿಗೇಡಿಗಳನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲು ಅಭಯ್ ಯಶಸ್ವಿಯಾಗಿದ್ದಾರೆ.

ಸುಬ್ಬಯ್ಯ ಕಾಲೇಜಿನ ವಿದ್ಯಾರ್ಥಿಗಳ ಬಂಧನ :

ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆಸುತ್ತಿದ್ದು ಸಾಕಷ್ಟು ವರ್ಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡು ಬಂದಿತ್ತು ಇವರ ಪೂರ್ವ ತಯಾರಿ ಹೇಗಿತ್ತು ಎಂದರೆ ಯಾರೂ ಕೂಡ ಇವರ ಮೇಲೆ ಅನುಮಾನ ಪಡುವಂತಿರಲಿಲ್ಲ ಅಂತ ಸಮಯದಲ್ಲಿ ಅಭಯ್ ಯಾವುದೇ ಒತ್ತಡಕ್ಕೂ ಮಣೆಯದೆ ಆ ಪ್ರಕರಣವನ್ನು ಬೆನ್ನತ್ತಿ ವಿದ್ಯಾರ್ಥಿಗಳನ್ನು ಸೆರೆಹಿಡಿದಿದ್ದರು ಹಾಗೂ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿದ್ದರು. ಇದಕ್ಕೆ ಡಿವೈಎಸ್ಪಿ ಸುರೇಶ್ ಎಸ್‌ಪಿ ಮಿಥುನ್ ಕುಮಾರ್ ಅವರು ಸಾಥ್ ನೀಡಿದ್ದರು.

ರಾಗಿಗುಡ್ಡದ ಪ್ರಕರಣಕ್ಕೆ ಬರೋಣ..!

ರಾಗಿಗುಡ್ಡ ಶಾಂತಿನಗರದಲ್ಲಿ ಕಳೆದ ಒಂದನೇ ತಾರೀಕು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟವನ್ನು ನಡೆಸಿದರು. ಹಾಗೆ ಮುಂದುವರೆದು ಒಂದಷ್ಟು ಯುವಕರ ಮೇಲೆ ಹಲ್ಲೆಗಳನ್ನು ಮಾಡಿದ್ದರು ಹಾಗೆ ಪೊಲೀಸರನ್ನು ಬಿಟ್ಟಿಲ್ಲ ಅವರ ಮೇಲೂ ಕೂಡ ಹಲ್ಲೆ ನಡೆಸಿದರು . ಈ ಸಮಯದಲ್ಲಿ ಸಹಜವಾಗಿ ಯಾರೇ ಅಧಿಕಾರಿಗಳಿದ್ದರೂ ಕೂಡ ಏನು ಮಾಡಬೇಕು ಆ ಕೆಲಸ ಮಾಡುತ್ತಾರೆ ಅದೇ ಕೆಲಸವನ್ನು ಅಭಯ ಪ್ರಕಾಶ್ ಹಾಗೂ ಸಿಬ್ಬಂದಿಗಳು ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸವನ್ನು ಮಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದರು ಇದು ತಪ್ಪಾಯ್ತಾ..? ಅಥವಾ ಎಲ್ಲವನ್ನೂ ನೋಡಿಕೊಂಡು ಮೌನವಾಗಿ ಹೊಡೆತ ತಿಂದುಕೊಂಡು ಇರಬೇಕಾಗಿತ್ತಾ..? ಅಥವಾ ಗಲಾಟೆ ಮಾಡಿದ ಸಮುದಾಯದವರನ್ನು ಬಿಟ್ಟು ಗಲಾಟೆ ಮಾಡದೆ ಇರುವ ಸಮುದಾಯದವರನ್ನು ಬಂಧಿಸ ಬೇಕಾಗಿತ್ತಾ ..?ಅಥವಾ ಅವರ ಮೇಲೆ ಲಾಠಿ ಪ್ರಹಾರ ನಡೆಸಬೇಕಾಗಿತ್ತಾ..? ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ರಾಜಕೀಯದ ಮಧ್ಯ ಪ್ರವೇಶ ಎಷ್ಟು ಸರಿ..?

ರಾಜಕೀಯ ಪಕ್ಷಗಳು ಈಗ ಎಲ್ಲ ಕಡೆ ತಮ್ಮ ಅಧಿಕಾರ ಪ್ರಭಾವವನ್ನು ಬಳಸಿಕೊಂಡು ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡವನ್ನು ತರುತ್ತಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು ಅವರಷ್ಟಕ್ಕೆ ಅವರಿಗೆ ಕೆಲಸ ಮಾಡಲು ಬಿಡಿ ಅವರ ಮೇಲೆ ವಿನಾಕಾರಣ ಒತ್ತಡ ತಂದು ಅವರ ಮನಸ್ಸಿಗೆ ಇಷ್ಟವಿಲ್ಲದ ಕೆಲಸವನ್ನು ಮಾಡಲು ಒತ್ತಡ ಹಾಕಬೇಡಿ. ಅದು ಯಾವುದೇ ಪಕ್ಷವಾದರೂ ಸರಿ ಅದು ಯಾವುದೇ ರಾಜಕೀಯ ಮುಖಂಡರಾದರು ಸರಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಥವಾ ಉಳಿದ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ರಾಜಕೀಯ ಮಧ್ಯ ಬರಬಾರದು ಆಗ ಉತ್ತಮ ಸಮಾಜ ನಿರ್ಮಾಣವಾಗಲು ಅಸಾಧ್ಯ ಉತ್ತಮ ಸಮಾಜವೇ ಇಲ್ಲವೆಂದ ಮೇಲೆ ಯಾವ ಭಾಗ್ಯ ಕೊಟ್ಟರು ಏನು ಪ್ರಯೋಜನ..? ಇದೇ ವಿಷಯವಾಗಿ ಬರೆಯುವುದಾದರೆ ಸಾಕಷ್ಟು ಇದೆ ಮುಂದಿನ ದಿನಗಳಲ್ಲಿ ಅದನ್ನು ಬರೆಯೋಣ ಸಾಕ್ಷಿ ಸಮೇತ..

ಮೌನಮುರಿದ ಬಿಜೆಪಿ..!

ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರಾಗಿಗುಡ್ಡದಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯ ಅಣ್ಣ ತಮ್ಮನವರಂತಿದ್ದ ಸ್ಥಿತಿಯನ್ನ ನಿಷೇಧಿತ ಪಿಎಫ್ಐ ಹೇಗೆ ಹದಗೆಡೆಸಿತು ಎಂಬುದನ್ನ ನೋಡಿದ್ದೇವೆ. ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತ್ತು. ಗಲಭೆ ನಡೆದಿದ್ದೇ ಹಿಂದೂಗಳ ಮನೆಗಳನ್ನ‌ ಖಾಲಿ ಮಾಡಿಸುವ ಹಿಂದಿನ ಉದ್ದೇಶದಿಂದ ರಾಗಿಗುಡ್ಡ ಶಾಂತಿನಗರದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹಿಂದೂ ಸಮಾಜದವರು ಅಲ್ಲಿನ 400 ಮನೆಗಳಲ್ಲಿ 150 ಹಿಂದೂಗಳು ಮುಸ್ಲೀಂರಿಗೆ ಬಾಡಿಗೆ ಕೊಟ್ಟಿದ್ದಾರೆ. ಅದು ಹಿಂದೂಗಳ ಸಾಮರಸ್ಯದ ಮನಸ್ಸಾಗಿದೆ. ಅಲ್ಲಿ ಬಂದ ವಾಹನಗಳು, ಗುಂಪಿನಲ್ಲಿರುವ ಯುವಕರ ಬಗ್ಗೆ ಬಿಜೆಪಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ರಾಗಿಗುಡ್ಡದ ಒಟ್ಟಾರೆ ಸಾಮರಸ್ಯ ಕದಡಲಾಗಿದೆ ಎಂದು ಆರೋಪಿಸಿದರು.

ಸಾಲು ಸಾಲು ಬಂದ್ ನಿಂದ ಪ್ರತಿಭಟನೆ ನಡೆಸಲು ಆಗಲಿಲ್ಲ ಈ ಹಿನ್ನಲೆಯಲ್ಲಿ ಅ.12 ರಂದು ರಾಗಿಗುಡ್ಡದ ಗಲಭೆಯನ್ನ ವಿರೋಧಿಸಿ  ಮಥುರಾ ಪ್ಯಾರಡೈಸ್ ಎದುರು ಪ್ರತಿಭಟನೆ ಮತ್ತು ಪ್ರತಿಭಟನೆ ಸಭೆ ನಡೆಸಲಾಗುತ್ತದೆ. ಶಾಸಕರು, ಸಂಸದರು, ಸ್ಥಳೀಯ ಮುಖಂಡರು ಮಾಜಿ ಸಚಿವರು ಭಾಗಿಯಾಗಲಿದ್ದಾರೆ.ಇತರರು ಎಂಬ ಪಟ್ಟಿಯಲ್ಲಿ ಅಮಾಯಕರ ದುರ್ಬಳಕೆ ಆಗುತ್ತಿದೆ.

ಈ. ಘಟನೆಯನ್ನ‌ ಮರೆಸುವ ಪ್ರಯತ್ನದಲ್ಲಿ ಏನೇನೋ ಆಗಿದೆ. ಕಟೌಟ್ ಗೆ ಅನುಮತಿ ಪಡೆದಿಲ್ಲ. ಪೊಲೀಸ್ ಅಧಿಕಾರಿ ಅಭಯ್ ಪ್ರಕಾಶ್ ಅಮಾನತ್ತು ಅಮಾಯಕರ ಮೇಲೆ ನಡೆದ ಗಧಾಪ್ರಹಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಒಟ್ಟಾರೆ ರಾಜಕೀಯ ಆಟಗಳು ಏನೇ ಇರಲಿ ಇನ್ನಾದರೂ ಅಧಿಕಾರಿಗಳು ಭ್ರಷ್ಟರಾಗಲು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕಷ್ಟವಾಗಲು ರಾಜಕೀಯ ಮುಖಂಡರುಗಳು ರಾಜಕೀಯ ಪಕ್ಷಗಳು ಕಾರಣ ವಾಗದಿರಲಿ ಎನ್ನುವುದು ನಮ್ಮ ಹಾಗೂ ಸಾರ್ವಜನಿಕರ ಕಳಕಳಿ.

ರಘುರಾಜ್ ಹೆಚ್‌. ಕೆ.9449553305.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...