Home ರಾಜ್ಯಶಿವಮೊಗ್ಗದಲ್ಲಿ ತಲೆಯೆತ್ತಿರುವ ಅನಧಿಕೃತ ಕಾಲೇಜುಗಳು..!

ಶಿವಮೊಗ್ಗದಲ್ಲಿ ತಲೆಯೆತ್ತಿರುವ ಅನಧಿಕೃತ ಕಾಲೇಜುಗಳು..!

by EDITOR NEWS WARRIORS
0 comments

ಶಿವಮೊಗ್ಗ: ನಗರದ ಹೊರವಲಯದ ಶರಾವತಿ ಡೆಂಟಲ್ ಕಾಲೇಜ್ ಪಕ್ಕ ಮಲೆನಾಡು ಕಾಲೇಜ್ ಎನ್ನುವ ಹೆಸರಿನ ಕಾಲೇಜ್ ನೋಂದಾವಣೆಯಾಗಿದ್ದು ಆದರೆ ಅದನ್ನು ದಾವಣಗೆರೆ ಮೂಲದ ಸರ್ ಎಂವಿ ಸಂಸ್ಥೆ ಖರೀದಿಗೆ ತೆಗೆದುಕೊಂಡಿದ್ದು ಅದನ್ನು ಸರ್ ಎಂವಿ ಸಂಸ್ಥೆಯ ಹೆಸರಿನಲ್ಲಿ ನಡೆಸಲು ಶಿಕ್ಷಣ ಇಲಾಖೆಗೆ ಅನುಮತಿಗಾಗಿ ಕೋರಿದೆ.

ಆದರೆ ಸರ್ ಎಂವಿ ಕಾಲೇಜಿಗೆ ಶಿಕ್ಷಣ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ ಆದರೆ ಇವರು ಈಗಾಗಲೇ ಈ ಕಾಲೇಜಿನ ಹೆಸರಿನಲ್ಲಿ ಬೋರ್ಡ್ ಗಳನ್ನು ಹಾಕಿಕೊಂಡು ಕಾಲೇಜಿಗೆ ಅಡ್ಮಿಶನ್ ಪ್ರಾರಂಭ ಮಾಡಿದ್ದಾರೆ.

ಹಾಗೆ ಕಾಲೇಜಿನ ಹೆಸರಿನಲ್ಲಿ ಜಾಹೀರಾತುಗಳನ್ನು ನೀಡಿದ್ದಾರೆ .

ಇದು ಸರೀನಾ..? ಕಾಲೇಜಿಗೆ ಅನುಮತಿನೆ ಸಿಕ್ಕಿಲ್ಲ ಜಾಹೀರಾತು ನೀಡಲು ಹೇಗೆ ಸಾಧ್ಯ ..?ಹಾಗೂ ಅಡ್ಮಿಶನ್ ತೆಗೆದುಕೊಳ್ಳುವುದು ಹೇಗೆ ಸಾಧ್ಯ..? ಜಾಹೀರಾತು ನೀಡಿರುವ ಬಗ್ಗೆ ಡಿ ಡಿ ಪಿ ಯು ಕೃಷ್ಣಪ್ಪ ಅವರನ್ನು ಪತ್ರಿಕೆ ಮಾತನಾಡಿಸಿದಾಗ ಇದರ ಬಗ್ಗೆ ದಿನಾಂಕ 14/6 /24ರಂದು ನೋಟಿಸ್ ನೀಡಿದ್ದೇವೆ ಆ ನೋಟಿಸ್ ಗೆ ಉತ್ತರ ನೀಡಲು ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಆ ನೋಟಿಸ್ ಗೆ ಯಾವುದೇ ಉತ್ತರವನ್ನು ಸಂಸ್ಥೆ ನೀಡಿಲ್ಲ ಇದನ್ನು ಮತ್ತೆ ಪರಿಶೀಲಿಸಿ ಮತ್ತೆ ನೋಟಿಸ್ ನೀಡಿ ಕಾನೂನಿನ ನಡೆಯಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೆ ಮುಂದುವರಿದು ಇನ್ನೂ ಪರ್ಮಿಷನ್ನೇ ಸಿಗದೇ ಕಾಲೇಜ್ ಅಡ್ಮಿಶನ್ ಪ್ರಾರಂಭ ಮಾಡಿರುವುದು ಹಾಗೂ ಬೋರ್ಡ್ ಗಳನ್ನು ಹಾಕಿಕೊಂಡಿರುವುದರ ಬಗ್ಗೆ ಕೇಳಿದಾಗ ಅದರ ವಿರುದ್ಧವೂ ಕೂಡ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹೀಗೆ ಹಲವು ಕಾಲೇಜುಗಳು ಶಿವಮೊಗ್ಗದಲ್ಲಿ ತಲೆ ಎತ್ತಿವೆ ಪರ್ಮಿಷನ್ ಇರುವುದು ಬೇರೆ ಸಂಸ್ಥೆಗೆ ಆದರೆ ಕಾಲೇಜ್ ಪ್ರಾರಂಭವಾಗುವುದೆ ಬೇರೆ ಸಂಸ್ಥೆಯ ಹೆಸರಿನಲ್ಲಿ ಇದರ ಬಗ್ಗೆ ಡಿಡಿಪಿಯು ಕಠಿಣ ಕ್ರಮ ತೆಗೆದುಕೊಳ್ಳಬೇಕು ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಪತ್ರಿಕೆ ನೀಡಲು ಸಿದ್ದ ಈ ದಂದೆಗೆ ಫುಲ್ ಸ್ಟಾಪ್ ಬೀಳಬೇಕು ಎನ್ನುವುದು ಪತ್ರಿಕೆಯ ಕಳಕಳಿ…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...