Home ಶಿವಮೊಗ್ಗಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಹಗರಣದಲ್ಲಿ ಇನ್ನಷ್ಟು ತಿಮಿಂಗಲಗಳು..!

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಹಗರಣದಲ್ಲಿ ಇನ್ನಷ್ಟು ತಿಮಿಂಗಲಗಳು..!

by EDITOR NEWS WARRIORS
0 comments

ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಸ್ಕೀಮ್ ನಡಿ ಮಾಡಿರುವ ವಿವಿಧ ರೀತಿಯ ಕಾಮಗಾರಿಗಳು ಅವುಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಣ ದುರುಪಯೋಗ ಹಾಗೂ ಹೊಸಮನೆ ಶರಾವತಿ ನಗರ ಬಡಾವಣೆಯಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳು ಇವತ್ತಿಗೂ ಓಡಾಡುವಾಗ ಎಲ್ಲರ ಕಣ್ಣಿಗೆ ಕಾಣುವ ನೂರಾರು ಗುಂಡಿಗಳು ಶಿವಮೊಗ್ಗ ನಗರದಲ್ಲಿ ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳು ನಮಗೆ ಸಂಬಂಧಿಸಿದಲ್ಲದಂತೆ ಈ ಯೋಜನೆಯ ಅವಧಿ ಮುಗಿದಿದೆ. ಕಾರ್ಪೊರೇಷನ್ ಗೆ ಹಸ್ತಾಂತರಗೊಳ್ಳುತ್ತಿದೆ. ಇನ್ನೂ ಇದರಲ್ಲಿ ಎಷ್ಟು ಬಾಕಿ ಹಣ ದೋಚಬೇಕು ಅಷ್ಟು ದೋಚಲು ಹೊರಟಿದ್ದರು.

ಕೆಲವು ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕಿವಿ ಕೇಳದಂತೆ ಇದ್ದರು. ಒಬ್ಬ ಪ್ರಭಾರ ಮುಖ್ಯ ಇಂಜಿನಿಯರ್ ಕೃಷ್ಣಪ್ಪನ ಹಣದ ದಾಹ ಲೋಕಾಯುಕ್ತ ಬಲೆಗೆ ಬಿದ್ದು ಬೆತ್ತಲು ಮಾಡಿದೆ. ಅಂದರೆ ಅಧಿಕಾರಿಗಳ ಕಿರುಕುಳಕ್ಕೆ ಗುತ್ತಿಗೆದಾರರು ಈ ಎಲ್ಲಾ ಯೋಜನೆಯಲ್ಲಿ ಲಂಚದ ಹಣ ಕೊಟ್ಟು ಕೊಟ್ಟು ಎಷ್ಟು ರೋಸಿ ಹೋಗಿರಬಹುದು ಯೋಚಿಸಿ. ಗುತ್ತಿಗೆದಾರ ಹಾಗೂ ಮುಖ್ಯ ಇಂಜಿನಿಯರ್ ಆಡಿಯೋದಲ್ಲಿ ಮಾತನಾಡಿರುವ ವಿಷಯ ಕೇಳಿದರೆ ಇನ್ನಷ್ಟು ಭ್ರಷ್ಟ ಅಧಿಕಾರಿಗಳು ತಗಲು ಹಾಕಿಕೊಳ್ಳುತ್ತಾರೆ.


ಹಾಗೂ ಸ್ಮಾರ್ಟ್ ಸಿಟಿಯ ಇನ್ನೊಬ್ಬ ಎಕ್ಸಿಕ್ಯೂಟಿವ್ ಇಂಜಿನಿಯರ್ ಈ ಯೋಜನೆಗೆ ಮುಗೀತು ಪಾಲಿಕೆಗೆ ಹಸ್ತಾಂತರಗೊಳ್ಳುತ್ತದೆ ಎಂದುಕೊಂಡು ಇದಕ್ಕೆ ಸಂಬಂಧಪಟ್ಟ ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ಸುಮಾರು ಹತ್ತು ದಿನಗಳಿಂದ ತೆಗೆದುಕೊಂಡು ಹೋಗಿ ಅದರಲ್ಲಿರುವ ಪ್ರಮುಖ ದಾಖಲೆಗಳನ್ನು ನಾಶ ಮಾಡುವ ಸಂಚು ರೂಪಿಸಿದ್ದಾನೆ.

ಹತ್ತು ದಿನಗಳಿಂದ ಯಾರದು ದೂರವಾಣಿ ಕರೆ ಸ್ವೀಕಾರ ಮಾಡುತ್ತಿಲ್ಲ. ಎಂದು ಸ್ಮಾರ್ಟ್ ಸಿಟಿಯ ಕಚೇರಿಯ ಗೋಡೆಗಳು ಹೇಳುತ್ತಿವೆ. ಇವರ ಸಹದ್ಯೋಗಿ ಲೋಕಾಯುಕ್ತ ಬಲೆಗೆ ಬಿದ್ದರೂ ತನಿಖೆಗೆ ಸಹಕರಿಸದೆ ಇವರ ಮುಖವಾಡ ಕಳುಚುತ್ತದೆ ಎಂದು ಬಂದಿರಲಿಲ್ಲ. ಇದರಲ್ಲಿ ಇವರ ಪಾಲು ಅಧಿಕಾರಿಯ ಮನೆಯಲ್ಲಿ ಇತ್ತು ಎಂದು ಹೇಳಲಾಗುತ್ತಿದೆ. ಮತ್ತು ಇವರ ಸಂಚು ಇದರಲ್ಲಿ ಇದೆ ಎಂದು ಅಧಿಕಾರಿಗಳ ವಲಯದಲ್ಲಿ ಹೇಳಲಾಗುತ್ತಿದೆ.

ಇನ್ನೋರ್ವ ಮಹಿಳಾ ಅಧಿಕಾರಿ ಮೀಟಿಂಗ್ ಹೆಸರಿನಲ್ಲಿ ಸತ್ಕಾರದ ಹೆಸರಿನಲ್ಲಿ ಮಾಡಿರುವ ಲಕ್ಷಾಂತರ ರೂಪಾಯಿ ಬಿಲ್ಲುಗಳನ್ನು ಈ ಎಲ್ಲಾ ಹಗರಣಗಳನ್ನ ಸ್ಮಾರ್ಟ್ ಸಿಟಿ ಯೋಜನೆಯ ಮಂಡಳಿಯ ಅಧ್ಯಕ್ಷರಾದ ಕಾವೇರಿ ಮೇಡಂ ರವರು ಪರಿಶೀಲಿಸದೆ ಮೌನಕ್ಕೆ ಹೋಗಿರುವುದು ಸಂಶಯಕ್ಕೆ ಕಾರಣವಾಗುತ್ತದೆ.

ಈಗಲಾದರೂ ತನಿಖೆಗೆ ಆದೇಶಿಸಿ ಭ್ರಷ್ಟಾಚಾರದಿಂದ ಲೂಟಿ ಹೊಡೆದಿರುವ ಹಣವನ್ನ ಅವರಿಂದ ಸರ್ಕಾರಕ್ಕೆ ಮರಳಿ ಪಡೆಯುವ ಪ್ರಯತ್ನ ಮಾಡಲಿ. ವಿವಿಧ ಯೋಜನೆಯ ಕಳಪೆ ಅವೈಜ್ಞಾನಿಕ ಕಾಮಗಾರಿಗಳನ್ನು ಪರಿಶೀಲಿಸಲಿ.

ಈ ಹಿಂದೆ ಇದರ ಅಕ್ರಮಗಳನ್ನು ಭೃಷ್ಟಾಚಾರವನ್ನು ಅವೈಜ್ಞಾನಿಕ ಕಾಮಗಾರಿಗಳ ವಿಚಾರಗಳನ್ನು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಕಾಂಗ್ರೆಸ್ ಮುಖಂಡ ಶ್ಯಾಮ್ ಸುಂದರ್ ಈಗ ಲೋಕಾಯುಕ್ತ ಬಲೆಗೆ ತಿಮಿಂಗಲಗಳು ಬೀಳುವ ಹಂತಕ್ಕೆ ಬಂದು ತಲುಪಿಸಿದ್ದಾರೆ. ಲೋಕಾಯುಕ್ತ ತನಿಖೆ ಮುಂದುವರೆಯಲಿ ತಿಂದ ತಿಮಿಂಗಲಗಳು ಇನ್ನಷ್ಟು ಹೊರಬರಲಿ….

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!